ಸಣ್ಣ ಕಥೆಗಳ ಅಡ್ಡಿಕ್ಷನ್ನೇ ಹಾಗೆ,
ಸಣ್ಣ ಕಥೆಗಳ ಬಗ್ಗೆ ಹೆಸರಾಂತ
ಪತ್ರಕರ್ತ ಮತ್ತು ಲೇಖಕ ಬೆಳಗರೆ
ಹೀಗೆನ್ನುತಾರೆ - ಸಣ್ಣ ಕಥೆ ಒಬ್ಬ
ಗೆಳತಿ ಇದ್ದ ಹಾಗೆ , ಅದೇ
ಕಾದಂಬರಿ ಹಾಗಲ್ಲ ಬೆಳಗರೆ ಅವರ
ಹೋಲಿಕೆ ನನಗು ನಿಜ ಎಂದು
ಅನಿಸುತ್ಹ್ಹದೆ ಕಾರಣವಿಷ್ಟೇ ಒಂದು ಕಾದಂಬರಿ ಯನ್ನು
ಬರವಣಿಗೆಗೆ ಒಲಿಸಿಕೊಂಡಷ್ಟು ಸುಲಭವಾಗಿ ಸಣ್ಣ ಕಥೆಗಳನ್ನು ಒಲಿಸಿ
ಕೊಳ್ಳಲಾಗುವದಿಲ್ಲ, ಅದು ಸ್ವಲ್ಪ ಕಷ್ಟ
ಸಾಧ್ಯ.ಹಾಗಾದರೆ ನಮ್ಮಲಿ ಕಥೆಗಾರರು
ಇಲ್ಲವೇ - ಯಾಕಿಲ್ಲ ನಾವೆಲ್ಲ ಹುಟ್ಟು
ಕಥೆಗಾರರೇ, ಒಂದು ರೀತಿಯಲ್ಲಿ ಮನುಷ್ಯನ
ಹುಟ್ಟಿನೊಂದಿಗೆ ಕಥೆ ಸಹ ಹುಟ್ಟಿ
ಕೊಂಡಿತು ಎಂದರೆ ತಪ್ಪಾಗಲಾರದು, ಒಂದು
ಮಗು ನಾನು ನಿನ್ನೆ ಶಾಲೆಗೆ
ಹೋಗುವಾಗ ಏನಾಯ್ತು ಗೊತ್ತ ಅನ್ನುವಾಗ
ಅದರಲ್ಲೂ ಒಂದು ಕಥೆ ಅಡಗಿರುತದೆ.
ಆದರೆ ಆ ಕಥೆ ಬರವಣಿಗೆಯ
ಪ್ರಕಾರವಾಗಿ ಹೊರಹುಮ್ಮುವುದು ಅಷ್ಟು ಸಹಜ ಅಲ್ಲ.ಸಣ್ಣ ಕಥೆಗಳನ್ನು ಹತ್ತು
ಹಲವು ಲೇಖಕರು ಬಹಳ ಸೊಗಸಾಗಿ
ಬರೆದಿದ್ದಾರೆ, ಇತ್ತೀಚೆಗಂತೂ ಹಲವು ಲೇಖಕರು ಲಲಿತ
ಪ್ರಬಂಧ ಗಳ ಮೂಲಕವೂ ಕಥೆಯ
ಸಿಂಚನವನ್ನು ಒದಗಿಸುತಾರೆ , ಹಾಗೆ ಬರೆಯುವರಲ್ಲಿ ಇತ್ತೀಚಿನ
ದಿನಗಳಲ್ಲಿ ಪ್ರಭಲವಾಗಿ ಬರೆಯುತಿರುವವರು ಜೋಗಿ ಮತ್ತು ವಸುಧೇಂದ್ರ.
ಆದರೆ ಇಂದಿಗೂ ಸಣ್ಣ ಕಥೆಗಳೆಂದಾಗ
ಆ ಹಿರಿಯ ಲೇಖಕರ
ಬಗ್ಗೆ ಮಾತಾಡದೆ ಇದ್ದರೆ ಅದು
ಸಣ್ಣ ಕಥೆಗಳಿಗೆ ಮಾಡುವ ಅವಮಾನವೇ ಸರಿ
ಎಂದು ಭಾವಿಸುತ್ತೆನೆ, ಅವರು ಮತ್ತಾರು ಅಲ್ಲ
ನಮ್ಮ ನಿಮ್ಮೆಲ್ಲರ ಆಸ್ತಿ ಕನ್ನಡದ ಮಾಸ್ತಿ
- ಮಾಸ್ತಿ ವೆಂಕಟೇಶ ಐಯಂಗಾರ್ - ನಾವು
ಮಾಸ್ತಿ ಕನ್ನಡದ ಆಸ್ತಿ ಎಂದು
ಕೇವಲ ಪ್ರಾಸಕ್ಕಾಗಿ ಬಳಸುವುದಿಲ್ಲ , ಏಕೆಂದರೆ ಕನ್ನಡ ಸಾಹಿತ್ಯ
ಲೋಕ ಕಂಡಂತಹ ಅತ್ಹ್ಯಂತ ಶ್ರೇಷ್ಠ
ಮತ್ತು ಸ್ರಜನ ಶೀಲಾ ಪ್ರತಿಭೆ
ಮಾಸ್ತಿ. ಮಾಸ್ತಿ ಕಾದಂಬರಿ, ಕಾವ್ಯ,
ನಾಟಕ , ವಿಮರ್ಶೆ ಹೀಗೆ ಎಲ್ಲ
ಪ್ರಕಾರಗಳ್ಲಲಿ ಕೃಷಿ ಮಾಡಿದ್ದರು ಆದರೆ
ನಾವೆಲ್ಲರೂ ಅವರನ್ನು ಗುರುತಿಸುವುದು "ಸಣ್ಣ
ಕಥೆಗಳ ಜನಕನೆಂದೇ" ಮಾಸ್ತಿ
ಸಣ್ಣ ಕಥೆಗಳ್ಳನೇ ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿ ಸಣ್ಣ ಕಥೆಗಳಿಗೆ
ಒಂದು ಮಹತ್ತರವಾದ ಸ್ಥಾನವನ್ನು ಒದಗಿಸಿ ಸಣ್ಣ ಕಥೆಗಳಿಗೆ
ಒಂದು ಚೌಕಟ್ಟನ್ನು ಒದಗಿಸಿಕೊಟ್ಟರು
ಹಾಗೆ ನೋಡಿದರೆ ನವೋದಯ ಸಾಹಿತ್ಯದ
ಪ್ರಮುಖ ಪರಿಕಲ್ಪನೆಗಳಲ್ಲಿ ಒಂದು "ಶ್ರೀ ಸಾಮಾನ್ಯನ ಪರಿಕಲ್ಪನೆ"
- ಈ ಪರಿಕಲ್ಪನೆ ಯನ್ನು ಮೊದಲಿಗೆ ಬಳಕೆಗೆ
ತಂದವರು ಕುವೆಂಪುರವರು. ಆದರೆ ನವೋದಯದ ಪರಿಕಲ್ಪನೆಗಳಲ್ಲಿ
"ಶ್ರೀ ಸಾಮಾನ್ಯನ್ನನು" ಸಾಹಿತ್ಯದ ತೆಕ್ಕೆಗೆ ಎಳೆದು ತಂದವರು ಮಾಸ್ತಿ.
ಮಾಸ್ತಿ ಅವರ ಕಥೆಗಳಲ್ಲಿ ಶ್ರೀ
ಸಾಮಾನ್ಯನ್ನೇ ಕೇಂದ್ರ ಬಿಂದು ಉದಾಹರಣೆಗೆ
ಅವರ ಕಥೆಗಳಲ್ಲಿ ಬಂದಥ ರಂಗಪ್ಪ, ಮಂಗಮ್ಮ
, ವೆಂಕಟಿಗ ಇವರೆಲ್ಲ ಸಾಮಾನ್ಯ ವ್ಯಕ್ತಿಗಳು
ಹಾಗು ಸಾಮಾನ್ಯ ವ್ಯಕ್ತಿಗಳಲ್ಲಿ ಉದಾತ್ತ
ಗುಣಗಳಿವೆ ಎಂದು ಬಹಳ ಕಲಾತ್ಮಕವಾಗಿ
ಕಟ್ಟಿ ಕೊಟ್ಟವರು ಮಾಸ್ತಿ. ಮಾಸ್ತಿ ಅವರ
ಅತ್ಯಂತ ಜನಪ್ರಿಯವಾದ ಕಥೆ "ಮೊಸರಿನ ಮಂಗಮ್ಮ" ಆಕೆಯ
ಕಥೆಯಲ್ಲಿ ಆಕೆಯ ಕಥೆ ಅಷ್ಟೇ
ಈಕೆ ಮಾಸ್ತಿ ಅವರ ಬಹುತೇಕ
ಎಲ್ಲ ಕಥೆಗಳಲ್ಲಿ ಪ್ರಧಾನವಾಗಿ ಕಾಣುವ ಗುಣವೊಂದಿದ್ದರೆ ಅದು
"ತಾಳುವಿಕೆ" ಇದು ಅವರ ಬರವಣಿಗೆಯ
ಅಂತ:ಸತ್ವ. ತಾಳುವಿಕೆ ಅವರ
ಆಶಯ ಮತ್ತು ಅಭಿವ್ಯಕ್ತಿ ಎರಡು
ನೆಲೆಗಳಲ್ಲಿ ಅವರ ಬರವಣಿಗೆಯಲ್ಲಿ ಕಾಣಬಹುದು.
ಹೀಗೆ ಇಷ್ಟು ವಿವರವನ್ನು ಕೊಡುತಾ
ಮೊದಲಿಗೆ ಮಾಸ್ತಿ ಅವರಲ್ಲಿ ಕ್ಷಮೆ
ಕೇಳುತಾ ಸಕಲ ಕನ್ನಡ ಸಾರಸ್ವತ
ಲೋಕಕ್ಕೆ ಕ್ಷಮೆ ಕೋರುತ್ಹ್ಹ ಮೊಸರಿನ
ಮಂಗಮ್ಮ ಈ ಕಾಲಕ್ಕೆ ಇದ್ದಿದರೆ
ಏನಾಗುತಿತ್ತು ಎಂಬ "ಆಧುನಿಕ ಮೊಸರಿನ ಮಂಗಮ್ಮ"
ಕಥೆಯನ್ನು ಒಪ್ಪಿಸಿಕೊಳ್ಳಿ .
ಈ ಆಧುನಿಕ ಮೊಸರಿನ ಮಂಗಮ್ಮ
ಇಂದಿಗೂ ಮೊಸರನ್ನೇ ಮಾರುತ್ತಿದ್ದಾಳೆ, ಆದರೆ ಆಕೆಯ ಗ್ರಾಮೀಣ
ಜಗತು ಸ್ವಲ್ಪ ಬದಲಾವಣೆಯಾಗಿ ಆ
ಗ್ರಾಮೀಣ ಭಾಗ ಪಟ್ಟಣ ವಾಗಿ
ಮಾರ್ಪಾಡಾಗಿದೆ. ಆದ್ದರಿಂದ ಆಕೆ ಈಗ ಮೊಸರಿನೊಂದಿಗೆ
ನಂದಿನಿಯ ಹಲವು ಉಪಉತ್ಪನ್ನಗಳನ್ನು ಮಾರುತ್ತಾ
ಬದಕುತ್ತಿದಾಳೆ, ಆಕೆಗೆ ಬ್ಯಾಂಕಿನ ವ್ಯಹಾರ
ಅಷ್ಟಾಗಿ ಗೊತ್ತಿಲ್ಲ ಹಾಗೆಂದು ಅವಳ ಬಳಿ
ಬ್ಯಾಂಕ್ ಖಾತೆ ಇಲ್ಲವೆಂದಲ್ಲ ಖಾತೆ
ಇದೆ ಅದು ಪ್ರಧಾನಿ ಮೋಡಪ್ಪನವರ
ಕೃಪಾಕಟಾಕ್ಷದಿಂದಾದ "ಜನಧನ" ಖಾತೆ.ಮೊಸರಿನ ಮಂಗಮ್ಮ
ಹೀಗೆ ದುಡಿದು ದುಡಿದು ತನ್ನೆಲ್ಲ
ಹಣವನ್ನು ಬ್ಯಾಂಕ್ನಲ್ಲಿ ಇಡದೆ ತನ್ನ ಬಳಿಯೇ
ಇಟ್ಟೊಕೊಂಡಿದ್ದಾಳೆ, ಆಕೆಗೆ ಒಬ್ಬ ಮಗ
ಅವನಿಗೆ ಮದುವೆಯಾಗಿ ಒಬ್ಬ ಮಗಳಿದ್ದಾಳೆ, ಆಕೆಯ
ಗಂಡ ರಂಗಪ್ಪ , ರಂಗಪ್ಪನಿಗೆ ಬೇಲಿ ಹಾರುವ ಹವ್ಯಾಸದಿಂದಾಗಿ
ಇನ್ನೊಂದು ಮದುವೆಯನ್ನು ಆಗಿದ್ದಾನೆ , ಈ ವಿಷಯ ಮಂಗಮ್ಮನಿಗೆ
ತಿಳಿದಿಲ್ಲವೆಂದಲ್ಲ ಎಲ್ಲ ತಿಳಿದಿದಿದೆ. ಜೀವನೋಪಾಯಕ್ಕಾಗಿ
ಮಂಗಮ್ಮ ತನ್ನ ಹಾಲು ಮೊಸರಿನ
ಅಂಗಡಿಯನ್ನು ನಡೆಸಿಕೊಂಡು ಹೋಗುತಿದ್ದಾಳೆ. ಮೊದಲಿನಿಂದಲೂ ಮಂಗಮ್ಮ ವರ್ತನೆ ಯನ್ನು
ತಾನೇ ಮಾಡುತಿದಲ್ಲೇ ಈಗ ವಯಸಿನ್ನ ತೊಂದರೆಯಿಂದಾಗಿ
ಅವಳ ಮಗ ವರ್ತನೆ ಗೆ
ಹೋಗೊತ್ತಾನೆ ಆದರೆ ಮೊದಲಿನ ಪರಿಚಯವಾದ್ದರಿಂದ
"ತಂಗಮ್ಮ" ನ ಮನೆಗೆ ಮಾತ್ರ
ವರ್ತನೆಗೆ ಆಕೆಯೇ ಹೋಗುತ್ಹಾಳೆ.
ಹೀಗೆ ದಿನಂಪ್ರತಿ ವರ್ತನೆಯಾ ನಂತರ ಕುಶಲೋಪಚಾರಿ ಮಾತು
ಮಂಗಮ್ಮನದು ಮತ್ತು ತಂಗಮ್ಮನದು ನಡಿದಿರುತ್ತದೆ
, ಒಮ್ಮೆ ಮಂಗಮ್ಮ ತಂಗಮ್ಮನಿಗೆ ಹಾಲು
ಮೊಸರು ಎರಡನ್ನು ಕೊಟ್ಟು ಅತ್ಯಂತ
ಚಿಂತಾಕ್ರಾಂತಳಾಗಿ ಕುಳಿತಿದ್ದಾಳೆ. ಆಗ ತಂಗಮ್ಮನಿಗೆ ಏನೋ
ಅನುಮಾನ ಬಂದು ಏನು ಮಂಗಮ್ಮ
ಇವತ್ತು ಯಾಕೋ ನಿನ್ನ ಮುಖ
ಇಳಿದು ಹೋಗಿದೆ ಎನ್ನಲು , ಮಂಗಮ್ಮ
ತಂಗಮ್ಮ ನವರೇ ನಿಮಗೆ ವಿಷಯ
ಗೊತ್ತಿಲ್ವ ನಿನ್ನೆ ಮೋಡಪ್ಪನವ್ರು ಇನ್
ಮೇಲೆ ನಮ್ಮ್ ಹತ್ತಿರ ಇರೋ
ಕಾಸು ಗೀಸು ನಡಿಯಲ್ಲ ಅಂತ
ಹೇಳಿದ್ರಂತಲ್ಲ , ಅದ್ರುದೇ ಚಿಂತೆ ಎನ್ನಲು
ತಂಗಮ್ಮ ಅದಕ್ಕೆ ಯೋಚ್ನೆ ಯಾಕೆ
ಮಾಡ್ತಿಯಾ ಮಂಗಮ್ಮ ನಿನ್ನ ಗಂಡನಿಗೆ
ಮತ್ತು ಮಗನಿಗೆ ಹೇಳಿ ಬ್ಯಾಂಕ್
ಖಾತೆಗೆ ಜಮಾ ಮಾಡಕ್ಕೆ ಹೇಳು
ಎಂದಳು. ಮಂಗಮ್ಮ ಕೂಡಲೇ ಹಾಗಲ್ಲ
ತಂಗಮ್ಮ ನಾನು ಈಗ ಅವ್ರಿಗೆ
ಹೇಳಿದ್ರೆ ಎಲ್ಲ ವಿಷಯ ಗೊತಾಗಿ
ನನ್ನ ಹಣವನ್ನೆಲ್ಲ ತೊಗೊಂಡು ಬಿಡ್ತಾರೆ , ನಂಗೊ
ಬ್ಯಾಂಕ್ ವ್ಯವಹಾರ ಅಷ್ಟಕ್ಕಷ್ಟೇ ಅಂದ್ರಾದೆ
ಚಿಂತೆ ಆಗಿದೆ ಎಂದಳು ಆಗ
ತಂಗಮ್ಮ ಅದಕ್ಯಾಕೆ ಅಷ್ಟು ಚಿಂತೆ ಮಾಡ್ತಿಯಾ
ನಂ ಮಗ "ರಾಹುಲ್" ನಿಂಗೆ ಸಹಾಯ ಮಾಡ್ತಾನೆ
ನಾನು ಅವ್ನಿಗೆ ಹೇಳ್ತಿನಿ ಎಂದು
ಹೇಳಲು , ಇತ್ತ ಮಂಗಮ್ಮನ ಚಿತ್ತ
ಎತ್ತಲೋ ಓದುತ್ತಾ ಏನಂದ್ರಿ ಅಮ್ಮೋರೆ
ರಾಹುಲ್ , ನಿನ್ನೆ ಮೋಡಪ್ಪನವ್ರು ಎಷ್ಟು
ಗಂಟೆಗೆ ಕಾಸು ನಡೆಯಕಿಲ್ಲ ಎಂದು
ಹೇಳಿದು ಎಂಟು ಗಂಟೆಗೆ ಮಂಗಮ್ಮ
ಎಂದು ತಂಗಮ್ಮ ಹೇಳಿದಳು , ಮಂಗಮ್ಮ
ಕೂಡಲೇ ಹಾಗಾದ್ರೆ ಅಸ್ಟೊತ್ತಿಗೆ ನೀವೆಲ್ಲ ಮನೆಗ್ಯೆ ಇದ್ರಿ
ಅನ್ನು ನಿಮಗೆ ವಿಸ್ಯ ಆಗ್ಲೇ
ಗೊತಿತ್ತು ಅಲ್ವೇ , ತಂಗಮ್ಮ ಹೌದು
ಎಂದು ತಲೆ ಅಲ್ಲಾಡಿಸುತ್ತ ಯಾಕೆ
ಮಂಗಮ್ಮ ಈ ಪ್ರಶ್ನೆ ಎನ್ನಲು
ಮಂಗಮ್ಮ ಏನು ಇಲ್ಲ ಹೊತ್ತಾಯ್ತು
ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಳು.
ಮಂಗಮ್ಮ
ತನ್ನ ಅಂಗಡಿಯ ಬಾಗಿಲನ್ನು ತೆರೆದು
ತನ್ನ ಕಷ್ಟವನ್ನು ಪಕ್ಕದಂಗಡಿಯ ಬೇಕರಿಯ ಕಿಟ್ಟಪನಿಗೆ ಮತ್ತು
ಅವನ ಹೆಂಡತಿಗೆ ಹೇಳುತ್ತಾ "ನೋಡ್ರಿ ಆ ಗಾಂಧಿ
ಚೌಕದ ಮೂಲೆ ಮನೆಯ ಹೆಂಗಸು
ತಂಗಮ್ಮ ಎಷ್ಟು ಒಳ್ಳೆಯವರು ಆದ್ರೆ
ಆಕೆಯ ಮಗ ರಾಹುಲ್ ನೋಡಿ
ಮೋಡಪ್ಪನವ್ರು ನೋಟು ನಡೆಯುವುದಿಲ್ಲ ಎಂದು
ಹೇಳಿ ಒಂದು ಗಂಟೆಯೊಳಗೆ ಬಂದು
ತನ್ನ ಹತ್ತಿರ ಒಂದು ಸಾವಿರ
ರೂಪಾಯಿಗಳಿಗೆ ಚಿಲ್ಲರೆ ಕೇಳಿ ತೆಗೆದು
ಕೊಂಡು ಹೋದ ಅಂದ್ರೆ ಅರ್ಥ
ಏನು ಅವನಿಗೆ ಈ ನೋಟು
ನಡೆಯದ ವಿಷಯ ಗೊತಿತ್ತು ಅಲ್ಲವೇ
, ಆ ತಂಗಮ್ಮನೂ ಮಹಾ ಕರುಣಾಮಯಿ ಈ
ಮಗ ನೋಡಿದರೆ ಸಣ್ಣ ಭುದ್ಧಿಯವನು,
ಈ ತಂಗಮ್ಮ ನನ್ನ
ಬಳಿ ಇರುವ ದುಡ್ಡನ್ನು ಬ್ಯಾಂಕಿಗೆ
ಹಾಕಲು ಈ ರಾಹುಲ್ ನನ್ನ
ಕಳಿಸ್ತಾರಂತೆ ಅವ್ನು ಇನ್ನೇನು ಮಾಡ್ತಾನೋ
ಎಂದು ಬಾಯಿ ಬಿಡಲು , ಕಿಟಪ್ಪ
ಎಷ್ಟು ದುಡ್ಡು ಇಟ್ಟಿದೀಯ ಮಂಗಮ್ಮ
ಎಂದನು , ಆಗ ಮಂಗಮ್ಮ ತನಗೆ
ಅರಿವಿಲ್ಲದೆ ಒಂದು ಅರವತ್ತು ಸಾವಿರ
ಇದೆ ಇನ್ನೊಂದಿಷ್ಟು ಎಣಿಸಬೇಕು ಎಂದು ಏನು ಅರಿವಿಲ್ಲದೆ
ಬಾಯಿ ಬಿಡಲು ಮಂಗಮ್ಮನಿಗೆ ತಾನು
ಮಡಿದ ತಪ್ಪಿನ ಅರಿವಾಗಿತು ಆದರೆ
ಬೇಕರಿ ಕಿಟ್ಟಪ್ಪನ ಕಣ್ಣು ಮಂಗಮ್ಮನ ದುಡ್ಡಿನ
ಮೇಲೆ ಬಿದ್ಧಿತು.
ಹೀಗೆ ಮಂಗಮ್ಮ ತನ್ನ ಕೆಲಸದಲ್ಲಿ
ತೊಡಗಿದ್ದಳು, ಅಂದು ಮೋಡಪ್ಪನವರ ಪ್ರಭಾವದಿಂದಾಗಿ
ಯಾರ ಬಳಿಯೂ ಹಣ ವಿರಲಿಲ್ಲ,
ಮಂಗಮ್ಮನ ಮೊಸರಿನ ವ್ಯಾಪಾರವು ಅಷ್ಟಕಷ್ಟೆ
ಆಗಿ ಎಲ್ಲರು ಉದ್ರಿ ಗಿರಾಕಿಗಳೇ
ಆಗಿ ಹೋಗಿದ್ದರು, ಕೆಲವು ಕಾಲೇಜಿನ ಯುವಕ
ಯುವತಿಯರು ಬಂದು ಪೇಟಿಎಂ ಇಲ್ವಾ
ಮಂಗಮ್ಮ ಎಂದು ಕೇಳಿ ಕೇಳಿ
, ಹೋಗುತಿದ್ದರು, ಮಂಗಮ್ಮನಿಗೆ ಪೆಟಿಎಂ ಪಾಟೀಮ್ ಏನು
ಇಲ್ಲ ಎಂದು ಹೇಳಿ ಹೇಳಿ
ಸಾಕಾಗಿತ್ತು , ಆದರೆ ಬೇಕರಿಯ ಕಿಟ್ಟಪ್ಪ
ಮಾತ್ರ ಪೇಟಿಎಂ, ಭೀಮ್ ಎಲ್ಲ
ಇದೆ ಎಂದು ಹೇಳಿ ಗ್ರಾಹಕರನ್ನು
ಸೆಳೆಯುತ್ತಿದನ್ನು.ಒಂದೆರಡು ದಿನ ಯೋಚನೆ
ಮಾಡಿ ಮಂಗಮ್ಮ ಎಷ್ಟೇ ತೊಂದರೆಯಾದರೂ
ಅಂಗಡಿ ಬಾಗಿಲನ್ನು ಮುಚ್ಚದೇ, ವರ್ತನೆ ಅನ್ನು ಬಿಡದೆ
ತನ್ನ ಬಳಿ ಇದ್ದೆ ೧೦೦
ಮತ್ತು ೫೦ತರ ನೋಟಿನಲ್ಲೇ ವ್ಯಾಪಾರ
ಮಾಡುತ್ತ ಬಹಳ ಕಷ್ಟ ಪಡುತ್ತಿದ್ದಳು
, ತಂಗಮ್ಮ ನ ಮನೆಗೆ ವರ್ತನೆಗೆ
ಹೋದಾಗ ತನ್ನ ಸಕಲ ಕಷ್ಟವನ್ನು
ಮತೊಮ್ಮೆ ಹೇಳಲು ತಂಗಮ್ಮ ಒಳಗೆ
ಹೋಗಿ ಸಾಸಿವೆ ಡಬ್ಬದಲ್ಲಿ ಹುಗಿದಿಟ್ಟಿದ
ಒಂದು ಸಾವಿರ ರುಪಾಯೀ ಯನ್ನು
ಮಂಗಮ್ಮನಿಗೆ ಕೊಟ್ಟು ನೋಡು ಮಂಗಮ್ಮ
ಇದು ನಾನು ಕೊಟ್ಟೆ ಎಂದು
ಯಾರಿಗೂ ಹೇಳ್ಬೇಡ , ನನ್ನ ಮಗನನ್ನು ಕಳಿಸ್ತೀನಿ
ಅದು ದುಡ್ಡು ಅವ್ನ ಕೈಯಲ್ಲಿ
ಕೊಟ್ಟು ಬಿಡು ಅವ್ನು ಹೋಗಿ
ನಿನ್ನ ಖಾತೆ ಗೆ ಜಮಾ
ಮಾಡ್ತಾನೆ ಹೆದರುವ ಅವಶ್ಯಕತೆ ಇಲ್ಲ
ಎಂದು ಹೇಳಿ ತನ್ನ ಮಗನನ್ನು
ಕರೆದು ಮಂಗಮ್ಮನಿಗೆ ಸಹಾಯ ಮಾಡಲು ರಾಹುಲನಿಗೆ
ತಾಕೀತು ಮಾಡುತಾಳೆ ತಂಗಮ್ಮ ರಾಹುಲ್ ಒಲ್ಲದ
ಮನಸಿನ್ನಿಂದ ಒಪ್ಪಿಕೊಳ್ಳುತಾನೆ.
ಸರಿಯಾಗಿ
ಬೆಳಗ್ಗೆ ಒಮ್ಬತು ಗಂಟೆಗೆ ರಾಹುಲ್
ಮಂಗಮ್ಮ ನ ಬಳಿ ತೆರಳಿ
ಎಷ್ಟು ಜಮೆ ಮಾಡಬೇಕು ಎಂದು
ಕೇಳಲು, ಆಕೆಯ ಗಂಡ ರಂಗಪ್ಪ
ಏನದು ಎಂದು ಕೂಗಿದನು , ಮಂಗಮ್ಮ
ಏನು ಇಲ್ಲ ಒಂದು ಎಂಟು
ಸಾವಿರ ನನ್ನ ಬಳಿ ಇದೆ
ತಂಗಮ್ಮ ನ ಮಗ ಜಮೆ
ಮಾಡಿ ಬರ್ತಾನೆ ಬ್ಯಾಂಕ್ ಗೆ
ಎಂದಳು , ರಂಗಪ್ಪ ಸರಿ ಎಂದು
ಹೇಳಿ ಮರು ಮಾತಾಡದೆ ಹೊರಡುತ್ತಾನೆ,
ಆಗ ರಾಹುಲ್ ಏನ್ ಮಂಗಮ್ಮ
ಬರಿಯ ಎಂಟು ಸವಾರಿಯಾಕ್ಕೆ ಇಷ್ಟೊಂದು
ಯೋಚಿನೆ ಮಾಡ್ತಿದೀಯ ಎಂದು ವ್ಯಂಗವಾಡಿದನು ಆಗ
ಮಂಗಮ್ಮ ಏನು ಹೇಳಲು ತೋಚದೆ
ಈ ರಾಹುಲನಿಗೆ ದುಡ್ಡು
ಕೊಡ್ಬೇಕೋ ಬೇಡವೋ ಎಂದು ಯೋಚನೆ
ಮಾಡಿ ಕೊನೆಗೆ ಇಪ್ಪತು ಸಾವಿರ
ರುಪಾಯೀಗಳನ್ನು ರಾಹುಲನಿಗೆ ಕೊಟ್ಟು ಕಳಿಸಿದಳು , ರಾಹುಲನು
ಸಂಜೆ ವೇಳೆಗೆ ಬ್ಯಾಂಕ್ನಲ್ಲಿ ಹದಿನಯ್ದು
ಸಾವಿರ ರುಪಾಯೀ ಗಳನ್ನೂ ಬ್ಯಾಂಕ್
ನಲ್ಲಿ ಜಮೆ ಮಾಡಿ ಉಳಿದ
ಹಣವನ್ನು ತನ್ನ ಜೇಬಿಗೇರಿಸಿ ಮಂಗಮ್ಮನ
ಬಳಿ ಬಂದು ಮಂಗಮ್ಮ ಎಲ್ಲ
ದುಡ್ಡು ಜಮೆ ಮಾಡಿದೀನಿ ಬ್ಯಾಂಕ್ನೋರಿಗೆ
ತುಂಬಾ ಕೆಲಸ ನಿನ್ನ ಖಾತೆಗೆ
ದುಡ್ಡು ಬರಲು ಬಹಳ ಸಮಯ
ಆಗತ್ತೆ ಅವ್ರು ಮೆಲ್ಲಗೆ ದುಡ್ಡು
ಹಾಕ್ತಾರೆ ಎಂದು ಸಬೂಬು ಹೇಳಿ
ಹೊರತು ಹೋದನು.
ಆದರೆ, ಮಂಗಮ್ಮನಿಗೆ
ಉಳಿದ ನಲವತ್ತು ಸಾವಿರ ರುಗಳದೇ ಚಿಂತೆಯಾಗಿತ್ತು, ಆ ಹಣದ ಮೇಲೆ ಬೇಕರಿ ಕಿಟ್ಟಪ್ಪನ ಕಪ್ಪು ಕಣ್ಣು
ಆಗಲೇ ಬಿದ್ಧಿತು. ಏನೇ ಆದರೂ ನನ್ನವರು ನನ್ನನು ಮೋಸ ಮಾಡುವುದಿಲ್ಲ ಎಂದು ನಂಬಿದ್ದ ಮಂಗಮ್ಮ ಹಳೆ ಗಂಡನ
ಪಾದವೇ ಗತಿ ಎಂದು ನಂಬಿ ತನ್ನ ಗಂಡನಿಗೆ ಊಟ ಬಡಿಸಿ, ನೋಡಪ್ಪ ನೀನು ಆ ಸವತಿ ಮನೆಗೆ ಹೋಗೋದು ಬಿಟ್ಟು
ಬಿಡು, ನನ್ನ ಬಳಿ ಒಂದು ಇಪ್ಪತು ಸಾವಿರ ಹಣವಿದೆ ಅದನ್ನು ಬ್ಯಾಂಕಿಗೆ ಹಾಕಿ ನೀನು ನಿನ್ನ ಖರ್ಚಿಗೆ
ಒಂದು ಸಾವಿರ ಇಟ್ಕೋ ಎಂದು ಹೇಳಿದಾಗ ರಂಗಪ್ಪನ ಮುಖ ಕಮಲದಂತೆ ಅರಳಿತು, ಮಂಗಮ್ಮನ ಇಚ್ಚಿಯೆಯಂತೆ ರಂಗಪ್ಪ
ಇಪ್ಪತ್ತು ಸಾವಿರ ವನ್ನು ಬ್ಯಾಂಕ್ ಗೆ ಹೋಗಿ ಹತ್ತು ಸಾವಿರವನ್ನು ಮಂಗಮ್ಮನ ಖಾತೆ ಗೆ ಜಮೆ ಮಾಡಿ ಇನ್ನೊಂದು
ಸರಿ ಸಾರಥಿ ಸಾಲಿನಲ್ಲಿ ನಿಂತು ಹೊಸ ನೋಟಿಗೆ ವಿನಿಮಯ ಮಾಡಿಕೊಂಡು ಬಂದು , ನಾನು ಎರಡು ಸಾವಿರ ತೊಗೊಂಡಿದೀನಿ
ಅದು ನನಗೇನಲ್ಲ ನಿನಗೆ ಒಂದು ಸೀರೆ ತಂದಿದೀನಿ ಎಂದು ೧೫೦ ರುಪಾಯೀ ಸೀರೆಯನ್ನು ಮಂಗಮ್ಮನಿಗೆ ಕೊಟ್ಟನು,
ಆದ್ರೆ ಬ್ಯಾಂಕ್ನೋರು ಬರಿಯ ಹತ್ತು ಸಾವಿರ ರುಪಾಯೀ ಯನ್ನು ಮಾತ್ರವೇ ತೆಗೆದುಕೊಂಡು ಇನ್ನುಳಿದ ಎಂಟು
ಸಾವಿರ ಮುಂದಿನ ಮೂರ್ ವರ್ಷಕ್ಕೆ ಜಮೆ ಮಾಡಿದ್ದಾರೆ ಅದು ಮೂರೂ ವರ್ಷದ ನಂತರವೇ ನಿಮಗೆ ಸಿಗೋದು ಅಂತ
ಹೇಳಿದ್ದಾರೆ ಎಂದು ಹೇಳಿ ಹೊರಟನು.
ಮಂಗಮ್ಮ ಗಂಡ ಹೇಳಿದೆಲ್ಲ
ನಿಜ ಎಂಬ ನಂಬಿಕೆಯಿಂದಾಗಿ ಸಂತೋಷವಾಯಿತು , ಆದರೆ ಇನ್ನು ಉಳಿದ ಹಣದ ಬಗ್ಗೆ ಚಿಂತೆ ಅಂತೂ ಇದ್ದೆ ಇತ್ತು
, ತನ್ನ ಮಗನಿಗೆ ಇನ್ನುಳಿದ ಹಣವನ್ನು ಜಮೆಮಾಡಲು ಹೇಳಿದಳು ಆಗ ಅವಳ ಮಗ ಚೆನ್ನಾಗಿ ಆಯಿತು ಕೊಡು ಅಮ್ಮ
ನಾನು ನಮ್ಮ ಮನೆ ಮೇಲೆ ಸ್ವಲ್ಪ ಸಾಲ ಗಿಲಾ ಮಾಡೀನಿ ಅದನ್ನ ತೀರಿಸಿಬಿಡ್ತೀನಿ ಎಂದು ಹೇಳಿ ಅಷ್ಟು ಹಣವನ್ನು
ಮಂಗಮ್ಮ ಒಪ್ಪಿಗೆ ಕೊಡುವ ಮುನ್ನವೇ ಬಾಚಿಕೊಂಡನು , ಹೀಗೆ ದಿನ ಕಳೆದಿರಲು ಮೋಡಪ್ಪನವರು ಬ್ಯಾಂಕಿಗೆ
ಹಣ ಹಾಕುವ ಮತ್ತು ತೆಗೆಯುವ ನಿಯಮವನ್ನು ಸಡಿಲಗೊಳಿಸಿದ್ದರು.ಅಂತೆಯೇ ಕೆಲವು ದಿನಗಳು ಕಳೆದಿರಲು ಬ್ಯಾಂಕಿನ
ಅಧಿಕಾರಿ ಮಂಗಮ್ಮನ ಬಳಿ ಬಂದು ನನ್ನ ಮಗನ ನಾಮಕರಣಕ್ಕೆ ಒಂದು ೨೦ ಲೀಟರ್ ಹಾಲು ಬೇಕಿತ್ತು ಮಂಗಮ್ಮ
ನಾಳೆಗೆ ಎಂದು ಕೇಳಿದಾಗ ಮಂಗಮ್ಮ ಸಂತಸಗೊಂಡು , ಮಂಗಮ್ಮ ಹಾಲನ್ನು ಮನೆಗೆ ಕೊಡಲು ಒಪ್ಪಿ, ಕೊಟ್ಟ ಮಾತಂತೆ
ಮರುದಿನ ಬೆಳಗ್ಗೆ ರಾಘವೇಂದ್ರ ಹೊಳ್ಳ ಅವರ ಮನೆಗೆ ೨೦ ಲೀಟರ್ ಹಾಲಿನೊಂದಿಗೆ ಕಾಲು ಕೆಜಿ ಬೆಣ್ಣೆಯನ್ನು
ಮಗುವಿಗೆ ಇರ್ಲಿ ಎಂದು ಕೊಟ್ಟಾಗ ಹೊಳ್ಳರವರ ಪತ್ನಿ ಗೆ ಖುಷಿಯಾಗಿ ಒಳಗೆ ಬಾರಮ್ಮ ಮಂಗಮ್ಮ ಎಂದು ಕರೆದು
ಅವಳನ್ನು ಕೂಡಿಸಿದಳು.
ಇದೇ ಸಮಯ ಎಂದು ಅರಿತ
ಮಂಗಮ್ಮ ರಾಘಣ್ಣನವರೇ ನಮ್ಮ ಖಾತೆಗೆ ಒಂದಿಷ್ಟು ಹಣ ಜಮಾ ಮಾಡಿದ್ರು, ಬಂದಿತ್ರ ಅಂತ ವಸಿ ನೋಡ್ಬೇಕಿತ್ತು
ಎಂದು ನಮ್ರವಾಗಿ ಕೇಳಿದಳು, ರಾಘಣ್ಣನವರು ನಾಳೆ ಬ್ಯಾಂಕ್ಗೆ ಬಂದು ಬಿಡು ಮಂಗಮ್ಮ ನಿನ್ನ ಹತ್ತಿರ ಇರುವ
ಎಲ್ಲ ಬ್ಯಾಂಕ್ನ ಪುಸ್ತಕಗಳನ್ನು ತೆಗೆದುಕೊಂಡು ಬಾ ಎಂದು ಹೇಳಿ ಕಳಿಸಿದರು, ಮಂಗಮ್ಮ ಅತ್ಯಂತ ಸಂತಸಗೊಂಡು
ಆಯಿತು ಎಂದು ಹೇಳಿ ಹೊರಟುಹೋದಳು
ಮರುದಿನ ಮಂಗಮ್ಮ
ಕಿಟ್ಟಪ್ಪನ ಮೇಲೆ ಅದೇನೋ ನಂಬಿಕೆಯಿಡದೆ ತರಕಾರಿ ಅಂಗಡಿಯ ರಾಚಪ್ಪನಿಗೆ ಅಂಗಡಿ ನೋಡಿಕೊಳ್ಳಲು ಹೇಳಿ
ಬ್ಯಾಂಕ್ಗೆ ಹೋದಳು, ರಾಘವೇಂದ್ರ ರಾಯರು ದೂರದಿಂದಲೇ ಮಂಗಮ್ಮನನ್ನು ನೋಡಿ ಬಾ ಮಂಗಮ್ಮ ಎಂದು ಕರೆದು
ಕುಳ್ಳಿರಿಸಿ ಗ್ರಾಹಕರೊಬ್ಬರ ಹಲವು ಕೆಲಸಗಳನ್ನು ನಿಭಾಯಿಸಿ ಮತ್ತೆ ಮಂಗಮ್ಮನನ್ನು ತನ್ನ ಜಾಗಕ್ಕೆ
ಕರೆದು ಖಾತೆ ಪುಸ್ತಕವನ್ನು ಕೇಳಿದರು, ಮಂಗಮ್ಮನಿಗೋ ಯಾವುದು ಎಂಬ ಗೊಂದಲವಾಗಿ ತಂಡ ಚೀಲವನ್ನೇ ರಾಘಣ್ಣನವರ
ಮುಂದೆ ಇಟ್ಟಳು , ರಾಘವೇಂದ್ರ ರಾಯರು ಇದೇನಿಂದು ಎಂದು ನೋಡಿದಾಗ ಸೊಸೆಯ ಲಕ್ಷ್ಮಿ ಸಹಸ್ರನಾಮ , ಶುಕ್ರವಾರ
ಲಕ್ಷ್ಮಿ ಪೂಜೆ ಹೀಗೆ ಎಲ್ಲ ಪುಸ್ತಕಗಳೊಂದಿಗೆ ಕೊನೆಗೂ
ಮಂಗಮ್ಮನ ಬ್ಯಾಂಕಿನ ಖಾತೆಯ ಪುಸ್ತಕವು ಸಿಕ್ಕಿತು, ರಾಘಣ್ಣನವರು ಒಂದು ನಿಮಷ ಇರು ಮಂಗಮ್ಮ ಎಂದು ಕಂಪ್ಯೂಟರ್ನ
ಕೋರ್ ಬ್ಯಾಂಕಿಂಗ್ ಸಾಫ್ಟ್ವೇರ್ ಅಪ್ಲಿಕೇಶನ್ ನಲ್ಲಿ ಮಂಗಮ್ಮನ ಖಾತೆಯ ಅಷ್ಟು ಮಾಹಿತಿಯು ಕಂಪ್ಯೂಟರ್
ಪರದೆ ಮೇಲೆ ಮೂಡಿತ್ತು, ರಾಘವೇಂದ್ರರಾಯರು ಮಂಗಮ್ಮನಿಗೆ ಇಂಚಿಂಚು ಬಿಡದೆ ಆಕೆಯ ಖಾತೆಯ ಸಕಲ ಜಾತಕವನ್ನು
ಬಿಡಿಸಿಟ್ಟಿದ್ದರು - ಮಂಗಮ್ಮನಿಗೆ ಮಾತ್ರ ಆ ಕ್ಷಣ ಸಿಡಿಲು ಬಡಿದಂತಾಗಿತ್ತು ತಾನು ಮೋಸ ಹೋದೆ ಎಂದು
ಗೊತ್ತಾದರೂ ಏನು ಮರು ಮಾತಾಡದೆ ಧನ್ಯವಾದಗಳು ರಾಘಣ್ಣನವರೇ ಎಂದು ಹೇಳಿ ಹೊರನಡೆದಳು.
ದಿನವೆಲ್ಲ ಈ ಮೋಸದಿಂದಾಗಿ
ಅದರಲ್ಲೂ ತನ್ನವರೇ ತನಗೆ ಮೋಸ ಮಾಡಿದ್ದರಿಂದ ಮಂಗಮ್ಮನಿಗೆ ಉತ್ಸಾಹ ಕಡಿಮೆಯಾಗಿ ಸುಮ್ಮ್ನೆ ಕುಳಿತಿದ್ದಳು
ಸಂಜೆ ಸರಿ ಸುಮಾರು ಎಂಟು ಗಂಟೆಗೆ ಯಾವುದೊ ಒಂದು ಕಂಪನಿಯ ಉನ್ನತಾಧಿಕಾರಿಯಂತೆ ಕಾಣುತಿದ್ದ ಟಿಪ್ ಟಾಪ್
ವ್ಯಕ್ತಿಯೊಬ್ಬ ಮಂಗಮ್ಮನ ಅಂಗಡಿಗೆ ಬಂದು ಒಂದು ಲೀಟರ್ ಹಾಲು ಮತ್ತು ಮೊಸರು ಕೇಳಿ , ಬದಲಿಗೆ ಎರಡು
ಸಾವಿರ ರುಪಾಯೀಗಳನ್ನೂ ಕೊಡಲು ಮುಂದಾದಾಗ ಮಂಗಮ್ಮ ಚಿಲ್ಲರೆ ಇಲ್ಲ ಸ್ವಾಮಿ ಎಂದು ಹೇಳಿದಳು ಆಗ ಆ ಮನುಷ್ಯ
ನೋಡು ಮಂಗಮ್ಮ ಎಷ್ಟೆಲ್ಲ ಪ್ರಾಬ್ಲಮ್ ಅದಕ್ಕೆ ಹೇಳ್ಲಿದು ಈ ಮೋಡಪ್ಪನವರಿಗೆ ನಮ್ಮಂಥ ಜನರ ಕಷ್ಟ ಅರ್ಥ
ಆಗುವುದಿಲ್ಲ ಎಂದು , ಇದ್ದಕಿದ್ದ ಹಾಗೆ ನಾಳೆಯಿಂದ ಈ ಹಣ ನಡೆಯಲ್ಲ ಅಂದರೆ ಹೇಗೆ ಅದು ಇದು ಎಂದು ಸುಮ್ನೆ
ಹೇಳ್ತ ಇರ್ತಾರೆ , ನಾನು ಈಗ ಎಲ್ಲಿಗೆ ಹೋಗ್ಬೇಕು ನೀನೆ ಹೇಳು ಎಷ್ಟು ಕಷ್ಟ ನಂಗೆ , ನಿಂಗು ಹಿಂಗೇ
ಆಗಿರತ್ತೆ ಅಲ್ವ ನೀವೆಲ್ಲ ಪ್ರತಿಭಟನೆ ಮಾಡಬೇಕು ಸುಮ್ನೆ ಕುತ್ಕೊಂಡು ಬಿಟ್ರೆ ಹೆಂಗೆ ಎಂದು ಹೇಳಿದನು.
ಮಂಗಮ್ಮ ಬಹಳ ದೈನ್ಯತೆಯಿಂದ
ಹೋಗ್ಲಿ ಬಿಡಿ ಸ್ವಾಮಿ ನೀವು ಈಗ ದುಡ್ಡು ಕೊಡದೆ ತೆಗೆದುಕೊಂಡು ಹೋಗಿ, ನಿಮ್ಮ ಹತ್ತಿರ ಚಿಲ್ಲರೆ ಇದ್ದಾಗ
ತಂದು ಕೊಡಿ ಆ ಅಧಿಕಾರಿಗೆ ಸಂತೋಷವೇನು ಆಯಿತು ಆದರೂ ಆತ ಬಿಡದೆ ಹಾಗಲ್ಲ ಮಂಗಮ್ಮ ಎಷ್ಟು ತೊಂದರೆ ನೋಡು
ನೀವೆಲ್ಲ ಹೀಗೆ ಬಿಡ್ಬಾರ್ದು ಎಲ್ಲರು ಸೇರಿ ಪ್ರತಿಭಟನೆ ಮಾಡಲೇಬೇಕು ಎಂದು ಬಿಟ್ಟಿ ಸಲಹೆ ಕೊಡಲಾರಂಭಿಸಿದನು
. ಮಂಗಮ್ಮ ಒಂದು ಕ್ಷಣ ಸುಮ್ಮನಾಗಿ ಬಿಡಿ ಸ್ವಾಮಿ ನಾವೇನು ಸ್ವತಂತ್ರ ಸಂಗ್ರಾಮದಲ್ಲಿ ಹೋರಾಡಿದಾಗ
ಜಾನ್ ಕಷ್ಟ ಪಡ್ತಿದ್ರಲ್ಲ ಅಷ್ಟು ಕಷ್ಟ ಪಡ್ತಿಲ್ಲ ತಾನೇ ಎಷ್ಟೋ ಜನ ಸ್ವಾತಂತ್ರಕ್ಕಾಗಿ ಪ್ರಾಣ ನೇ
ಕೊಟ್ರು, ನಾವು ಇವ್ರಿಗೊಂದು ಅವಕಾಶ ಕೊಡನ ಎಂದಾಗ ಆ ಅಧಿಕಾರಿ ಪೆಚ್ಚು ಮೋರೆ ಹಾಕಿಕೊಂಡು ನೀರವ ಮೌನದೊಂದಿಗೆ
ಆತ ಮರು ಮಾತಾಡದೆ ಕಿಸೆಯಿಂದ ಚಿಲ್ಲರೆಯನ್ನು ಕೊಟ್ಟು ತನ್ನ ಕಾರನ್ನು ಶರವೇಗದಲ್ಲಿ ಓಡಿಸಿಕೊಂಡು ಹೋದನು.
ಕಾರ್ತಿಕ್
ಯಸ್ ಬಾಪಟ್