Wednesday, July 10, 2019

ನೆತ್ತರು ಚೆಲ್ಲಿದ ನಾಡಿಂದ - ಶ್ರೀಲಂಕೆಯ ಆತಂಕ ಕಥನ




ಅದು ಏಪ್ರಿಲ್ ೨೧, ೨೦೧೯ ಈಸ್ಟರ್ ಸಂಭ್ರಮದಲ್ಲಿ ಇಡೀ ಶ್ರೀಲಂಕೆಯೆ ಮುಳುಗಿರುವಾಗ ದುತ್ತೆಂದು ಮತಾಂಧ ಉಗ್ರರು ಬಾಂಬ್ಗಳನ್ನು ದೀಪಾವಳಿಯ ಪಟಾಕಿಯಂತೆ ಅಲ್ಲಲ್ಲಿ ಸ್ಪೋಟಿಸಿದ್ದರು, ಇಡೀ ಮನುಕುಲವೇ ಪಾಪಿಗಳೇ ನಿಮಗೆ ಮಾನವೀಯತೆಯೇ ಇಲ್ಲವೇ ಎಂದು ಚಡಪಡಿಸಿತ್ತು, ಒಂದು ತಿಂಗಳ ಹಿಂದೆ ನಾನು ಸಂಚರಿಸಿದ ಸ್ಥಳಗಳಲ್ಲಿ ಬಾಂಬ್ ಸ್ಫೋಟ ಮತ್ತು ನಾನು ಇಳಿದು ಕೊಂಡ ಹೋಟೆಲ್ನಲ್ಲಿ ಬಾಂಬ್ ಸ್ಪೋಟದ ವಿಫಲ ಯತ್ನದ ಸುದ್ದಿ ಒಂದು ಕ್ಷಣ ನನ್ನನ್ನು ಕಂಗೆಡಿಸಿತ್ತು , ಹಾಗೆ ನೋಡಿದರೆ ಈ ವರುಷದಲ್ಲೇ ನಾನು ಶ್ರೀಲಂಕೆಗೆ ಕೆಲಸದ ನಿಮಿತ್ತ ಮೂರು ಬಾರಿ ಭೇಟಿನೀಡಿದ್ದೆ , ಅದಿರಲಿ ಅಲ್ಲಿ ಬಾಂಬ್ ಸ್ಪೋಟಿಸುತ್ತಿದಂತೆ ನನ್ನ ಹಲವು ಮಿತ್ರರು ಮೊದಲು ಕರೆ ಮಾಡಿದ್ದೂ ಅರೆ ಬಾಪಟ್ ವೇರ್ ಆರ್ ಯು ಹೋಪ್ ಯು ಆರ್ ನಾಟ್ ಇನ್ ಕೊಲಂಬೊ ಎಂದು , ಅವರ ಕಾಳಜಿಗೆ ಅವರ ಪ್ರೀತಿಗೆ ನಾನು ಅಭಾರಿ .. ತತಕ್ಷಣ ನನ್ನ ಕೆಲವು ಸ್ನೇಹಿತರಿಗೆ ಕರೆ ಮಾಡಿ ನಾನು ಅಲ್ಲಿಯ ಪರಿಸ್ಥಿತಿ ಬಗ್ಗೆ ಹಾಗು ಅವರ ಕುಶಲೋಪರಿಯ ಬಗ್ಗೆ ವಿಚಾರಿಸಿದೆ , ಅವರಲ್ಲಿ ಒಂದು ಬಗೆಯ ಧಿಗ್ಬ್ರಾಂತಿ ಮನೆ ಮಾಡಿತ್ತು, ಹತ್ತು ವರುಷಗಳ ಹಿಂದೆ ಈ ರೀತಿಯ ಘಟನೆ ನಡೆದಿದ್ದರೆ ಅದು ಇದಿದ್ದೆ ಎಲ್ ಟಿ ಟಿ ಈ  ಬಗೆಯ ಕೃತ್ಯಗಳನ್ನು ನಡೆಸುತ್ತಿತ್ತು , ಆದರೆ ಇದೇನಿದು ಈಗ ಮತ್ತೆ ಬಾಂಬುಗಳ ಸದ್ದು , ಪುಟ್ಟ ದೇಶ ಶ್ರೀಲಂಕೆಯನ್ನು ಕ್ಷಣಾರ್ಧದಲ್ಲಿ ಭಯಭೀತಗೊಳಿಸಿತ್ತು ...  ಹೀಗೆ ಅಲ್ಲಿ ಕರ್ಫ್ಯೂಗಳ ಮೇಲೆ ಕರ್ಫ್ಯೂಗಳು ಹಾಗು ಎಮರ್ಜೆನ್ಸಿ ಘೋಷಿಸಲಾಗಿತ್ತು ... ಸರಿ ಸುಮಾರು ಒಂದು ತಿಂಗಳ ನಂತರ ಮತ್ತೆ ಕೊಲಂಬೊ ಗೆ ಕೆಲಸದ ನಿಮಿತ್ತ ನನಗೆ ಹೋಗಲೇಬೇಕಿತ್ತು , ಆದರೆ ನನ್ನ ಕಂಪನಿಯವರು ನೌ ಇಟ್ ಇಸ್ ರಿಸ್ಕಿ ಟು ಟ್ರಾವೆಲ್ ಅಂಡ್ ಪ್ರೋಹಿಬೀಟೆಡ್ ಟು ವಿಸಿಟ್ ಎಂದು ನನಗೆ ಈ ಮೇಲ್ ಸಂದೇಶವನ್ನು ರವಾನಿಸಿದರು , ಆದರೆ ಎಷ್ಟು ದಿನ ಹೀಗೆ ಕೆಲಸ ಮುಂದೂಡುವುದು ಎಂದು ಹೇಳಿ , ಹಾಗೆ ಭಾಯಾವೃತಗೊಂಡ ನಮ್ಮ ಗ್ರಾಹಕರಿಗೆ ಸಾಂತ್ವನದ ಮಾತಾಡುವುದು ನನ್ನ ಕರ್ತವ್ಯ ಎಂದು ಹೇಳಿ ಕೊಲಂಬೊ ಗೆ ಹೊರಟೆಬಿಟ್ಟೆ ...


ಆದರೆ ಇದೇನಿದು ಕೊಲಂಬೊ ವಿಮಾನ ನಿಲ್ದಾಣ ಇಳಿಯುತ್ತಿದಂತೆ, ಸದಾ ಪ್ರವಾಸಿಗರಿಂದ  ಗಿಜಿಗುಡಿತ್ತಿದ ವಿಮಾನ ನಿಲ್ದಾಣದಲ್ಲಿ ಸ್ಮಶಾನ ಮೌನ , ನನನ್ನು ಸೇರಿಸಿ ಎಷ್ಟು ಜನರಿದ್ದೇವೆಂದು ಎಣಿಸಬಹುದಾದಷ್ಟು ಬೆರಳೆಣಿಕೆಯಷ್ಟು ಜನಗಳು , ಹಾಗೆ ಮುಂದೆ ಸಾಗಿ ನನ್ನನು ಎದಿರುಗೊಳ್ಳಲು ಬಂದ "ತಾಜ್ ಸಮುದ್ರದ" ಸಿಬ್ಬಂದಿಯೊಂದಿಗೆ ಹೊರಬಂದರೆ ಕಗ್ಗತ್ತಲಿನಲ್ಲಿ AK 47 ಹಿಡಿದುಕೊಂಡು ನಿಂತಿದ್ದ ಶ್ರೀಲಂಕೆಯ ಸೈನಿಕರು  ಅಕ್ಕ ಪಕ್ಕದಲ್ಲಿದ್ದ ಬಂಕರ್ಗಳು ಆ ದೃಶ್ಯವೇ ಸಾಕು ಪ್ರಕರಣದ ತೀವ್ರತೆಯನ್ನು ಸಾರಲು , ನಾನು ತಾಜ್ ಸಮುದ್ರ ಹೋಟೆಲ್ನ ಸಿಬ್ಬಂದಿ ಕಳುಹಿಸಿದ ಕಾರಿನಲ್ಲಿ ಕುಳಿತು ತಾಜ್ ಸಮುದ್ರ ಹೋಟೆಲ್ನತ್ತ ಪ್ರಯಾಣ ಬೆಳೆಸಿದೆ , ಹಾಗೆ ಚಾಲಕನನ್ನು ಮಾತಿಗೆಳೆದೆ " ಇಸ್ ಈಟ್ Okay  ನೌ ಎಂದೇ , ಚಾಲಕ ಹೇಗೆ ನಾಟ್ Okay ಎಂದು ಹೇಳಿಯಾನು , ಯಸ್ ಸರ್ ಇಟ್ ಲುಕ್ಸ್ ಲೈಕ್ Okay ನೌ  ಎನ್ನತೊಡಗಿದ್ದ , ಇದೇ ಚಾಲಕ ಮೊದಲ ಬಾರಿ ನಾನು ಶ್ರೀಲಂಕೆಗೆ ಭೇಟಿ ನೀಡಿದಾಗ , LTTE ಯ ಭಯ ಈಗಿಲ್ಲ ಎವ್ರಿಥಿಂಗ್ ವಾಸ್ ಓವರ್ ಬೈ ೨೦೦೯ ನೌ ಇಟ್ ಇಸ್ ಓಲ್ಡ್ ಸ್ಟೋರಿ ಅಂಡ್ ನೌ ಎವೆರಿವೇರ್ ಪೀಸ್ ಎಂದು ಹೇಳುತ್ತಾ ೧೦ ವರುಷದ ಹಿಂದೆ ಎಲ್ ಟಿ ಟಿ ಈ ಉಗ್ರರು ಬಾಂಬ್ ಸ್ಪೋಟಿಸಿದ್ದ ಸ್ಥಳಗಳನ್ನು ತೋರಿಸಿದ್ದ ಆದರೆ ಕೇವಲ ಎರಡು ತಿಂಗಳ ಅಂತರದಲ್ಲಿ ಐಸಿಸ್ ಉಗ್ರರಿಂದಾಗಿ ಸ್ಪೋಟಗೊಂಡ ಸ್ಥಳಗಳನ್ನು ಅವನು ತೋರಿಸುತ್ತಾನೆಂದು ಅವನಿಗಾಗಲಿ ನನಗಾಗಲಿ ಊಹೆಯೆಯಿರಲಿಲ್ಲ , ಇದುವೇ ಜೀವನ ಇಂದು ನೀ ಬದುಕಿದರೆ ಅದೇ ಪುಣ್ಯ , ನಾಳೆಯ ಮಾತು ನಾಳೆಗೆ ಎಂಬಂತ ಜಾಗತಿಕ ವಾತಾವರಣದಲ್ಲಿ ಇದೆಂತ ಧುರ್ಬರ ಬದುಕು ಎಂದೆನಿಸಿತ್ತು .. ಹೀಗೆ ದಾರಿಯುದ್ದಕೆ ಸಾಗುತ್ತಿದ್ದರೆ ಸರ್ ದಿಸ್ ಶಾಂಗ್ರಿಲಾ ಎಂದು ಸ್ಪೋಟಗೊಂಡ ಸ್ಥಳದ ಮುಂದೆ ತೋರಿಸಿದ , ಒನ್ ಸೆಕೆಂಡ್ ಐ ವಿಲ್ ಟೇಕ್ ಪಿಕ್ಚರ್ ಎಂದೇ , ನೋ ಸರ್ , ಯು ಕ್ಯಾನ್ ಸೀ ಮಿಲಿಟರಿ ಪೀಪಲ್ ಆರ್ ವಾಚಿಂಗ್ ದೆ ವಿಲ್ question ಎಂದು ಹೇಳಿ ನನ್ನನು ಸುಮ್ಮನಾಗಿಸಿದ, ಹೀಗೆ ಮಾತು ಸಾಗುತಿತ್ತು ಅಷ್ಟ್ರಲ್ಲಿ ತಾಜ್ ಹೋಟೆಲ್ ಸೇರುವ ಮುನ್ನವೇ ಎರಡು ಬಾರಿ ಚಾಲಕ ತಾಜ್ ಹೋಟೆಲ್ ಗೆ ಕರೆ ಮಾಡಿ ನಾನು ಇಂಥವರನ್ನು ಕರೆದು ಕೊಂಡು ಬರುತ್ತಿದ್ದೇನೆ ಎಂದು ಹೇಳಿದ್ದ , ಸರ್ ಫಸ್ಟ್ ಕಾಲ್ ಇಸ್ ಟು ಅವರ್ ರಿಸೆಪ್ಶನ್ ಸೆಕೆಂಡ್ ಒನ್ ಟು ಮಿಲಿಟರಿ ಕಮಾಂಡೋಸ್, ಸೊ ದಟ್ they ಆರ್ ಅವೇರ್ ದಟ್ ಗೆಸ್ಟ್ ಇಸ್ ಕಮಿಂಗ್ ಎಂದ, ಹೀಗೆ ಅವನು ಮಾತು ಮುಗಿಸುವಶ್ಟರಲ್ಲಿ ಗಾಡಿ ತಾಜ್ ನ ಮುಂಬಾಗಿಲಿನ ಅನತಿ ದೂರದಲ್ಲಿ ನಿಂತಿತು , ಅರೆರೆ ನಾನು ಮೊದಲು ತಾಜ್ ಗೆ ಭೇಟಿ ನೀಡಿದಾಗ ಇರುತ್ತಿದ್ದ ದೃಶ್ಯವೇ ಬೇರೆ ಈಗಿನ ದೃಶ್ಯವೇ ಬೇರೆ ತಾಜ್ ಎಂಬ ತಾಜ್ ಅಕ್ಷರಶ ಮಿಲಿಟರಿ ಕ್ಯಾಂಪ್ ನಂತೆ ಭಾಸವಾಗುತಿತ್ತು , ಎರಡೆರಡು ಬಂಕೆರಗಳು ಬಂಕರ್ನ ಒಳಗೆ ಸುಸಜಿತ AK  47  ಹಿಡಿದ ಸೈನಿಕರು, ಮಿಲಿಟರಿ ವ್ಯಾನ್ , ಆಂಬುಲೆನ್ಸ್  ಎರಡೆರಡು ಬಾರಿ ತಪಾಸಣೆ , ಫ್ರಮ್ ಇಂಡಿಯಾ ಎನ್ನುತ್ತಿದಂತೆ ಲಂಕೆಯ ಮಿಲಿಟರಿ ಸೈನಿಕರಲ್ಲಿ ಮಂದಹಾಸ , ಹೀಗೆ ಇದೆಲ್ಲವನು ನೋಡುತ್ತಾ ತಾಜ್ ಒಳ ಹೊಕ್ಕರೆ ಒಂದು ಕಡೆ ಆತಂಕವಾದರೂ ಇನ್ನೊಂದು ಕಡೆ ಇಷ್ಟೊಂದು ಸುರಕ್ಶತೆಯಿದೆಯಲ್ಲ ಎಂಬ ಸಮಾಧಾನ , ಹಾಗೆ ಒಳ ಹೊಕ್ಕು ವಿಶ್ರಮಿಸಿ ತಾಜ್ ಸಿಬ್ಬಂದಿಯೊದಿಂಗೆ ಮಾತಿಗಿಳಿದಾಗ ತಿಳಿದು ಬಂದದ್ದು ಇದೆಲ್ಲ ಸುರಕ್ಷತೆ ಇಂಡಿಯನ್ ಹೈ ಕಮಿಷನ್ ಕೋರಿಕೆಯ ಮೇರೆಗೆ ಎಂದು , ಇಂಡಿಯನ್ ಹೈ ಕಮಿಷನ್ ಭಾರತೀಯರು ಹೆಚ್ಚು ಭೇಟಿ ಕೊಡುವ ಜಾಗಕ್ಕೆ ಹೆಚ್ಚು ಸುರಕ್ಷತೆಯನ್ನು ಒದಗಿಸಬೇಕೆಂದು ಕೋರಿಕೊಂಡಿತ್ತಂತೆ , ಹಾಗೆ ನೋಡಿದರೆ ಅಂದು ಕೊಲಂಬೊ ನಗರದ ಪ್ರತಿಷ್ಠಿತ ಪಂಚ ತಾರಾ ಹೋಟೆಲ್ ಗಳು ಹಾಗು ಚುರ್ಚ್ಗಳಲ್ಲಿ ಬಾಂಬ್ ಗಳ ಸುರಿಮಳೆಯಾಗುತ್ತಿದರೆ ತಾಜ್ ಹೋಟೆಲ್ ಮಾತ್ರ ಪವಾಡ ಸಾದೃಶ್ಯವಾಗಿ ಇದರಿಂದ ಹೊರತಾಗಿತ್ತು , ಹಾಗೆಂದು ಅಲ್ಲಿ ಪ್ರಯತ್ನ ನಡೆದಿರಲಿಲ್ಲವೆಂದಲ್ಲ , ಪಾಪಿ ಅಲ್ಲಿ ಎರಡು ಬಾರಿ ಪ್ರಯ್ತ್ನಿಸಿ ಸಫಲನಾಗದಿದ್ದಾಗ ಅಲ್ಲಿಂದ ಕಾಲ್ ಕಿತ್ತಿದಾನೆ ಹಾಗೆ ಬಾಂಬ್ ಅನ್ನು ತನ್ನ ಚೀಲದಲಿರಿಸಿ ತಾಜ್ ನ ರೋಲಿಂಗ್ ಗಟನಿಂದ ಹೊರಹೋಗುವಾಗ ಅವನ ಬ್ಯಾಗ್ ಅಲ್ಲಿ ಸಿಕ್ಕಿ ಹಾಕಿಕೊಂಡಿದೆ , ಆ ಸಮಯಕ್ಕೆ ತಾಜ್ ಸಿಬ್ಬಂದಿಗಳು ತಮಗರಿವಿಲ್ಲದೆ ಅಯ್ಯೋ ಪಾಪ ಎಂದು ಸಿಕ್ಕಿ ಹಾಕಿ ಕೊಂಡ ವಸ್ತುವನ್ನು ಆ ಗೇಟ್ನಿಂದ ತಪ್ಪಿಸಿ ಅವನಿಗೊಪ್ಪಿಸಿದ್ದಾರೆ ಆ ಪಾಪಿ ನಂತರ ಒಂದು ಚಿಕ್ಕ ಬಜೆಟ್ ಹೋಟೆಲ್ ಒಳ ಹೊಕ್ಕು ಬಾಂಬ್ ಸ್ಪೋಟಿಸಿ ಇಬ್ಬರ ಜೀವಕ್ಕೆ ಕುತ್ತು ತಂದಿದ್ದಾನೆ , ತಾಜ್ ಸಿಬ್ಬಂದಿಗಳು ಸರ್ ಯು ಬಿಲಿವೆ ಓರ್ ನಾಟ್ ಗಾಡ್ ಸ್ಟಯ್ಸ್ ಇನ್ ತಾಜ್ we all escaped  miracalously ಎಂದು ಹೇಳಿದ...

ಮರು ದಿನ ಬೆಳಗ್ಗೆ ಎದ್ದು ನೋಡಿದರೆ , ಎಂದಿಗೂ ಸದಾ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ತಾಜ್ ನಲ್ಲಿ ಅಲಲ್ಲಿ ಬೆರಳಣಿಕೆಯಷ್ಟು ಜನಗಳು , ಎಲ್ಲರು ಪಾಠವನ್ನು ಕಲಿತಂತೆ ೮ :೩೦ ರ ಸಮಯದಲ್ಲಿ ತಿಂಡಿ ತಿನ್ನಲು ಬಂದರೆ ಅಂದು ನನ್ನನು ಸೇರಿಸಿ ೭:೩೦ ಕ್ಕೆ ಸಮಸ್ತ ತಾಜ್ ನ ಅತಿಥಿಗಳು ಬ್ರೇಕ್ ಫಾಸ್ಟ್ ಏರಿಯಾ ದಲ್ಲಿ ಹಾಜರು ಬಹುಷ್ಯ ಎಲ್ಲರು ನನ್ನನಂತೆಯೇ ಬೇಗ ಬರಲು ಯೋಚಿಸಿದ್ದರೇನೋ , ಅಂದಿನ ದಿನ ಲಘು ಫಲಹಾರ ಮಾಡಿ ನಾನು ನನ್ನ ಗ್ರಾಹಕರನ್ನು ಭೇಟಿ ಮಾಡಲು ಹೊರೆತೆನು , ಓಲಾ ಉಬೆರ್ ಸಹವಾಸ ಬೇಡ ಎಂದು ತಾಜ್ ನ ಕಾರ್ ಅನ್ನು ಬಾಡಿಗೆಗೆ ಪಡೆದು ಹೊರ ಬಿದ್ದೆ , ಹಾಗೆ ನಮ್ಮ ಸಂಸ್ಥೆಯ ಗ್ರಾಹಕರಲ್ಲಿ ಒಬ್ಬರಾದ ಸರಕಾರಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಮಾತಾಡುತ್ತಿದೆ ಆದರೆ ಅಂದು ವ್ಯವಹಾರವನ್ನು ಅವರಾಗಿಯೇ ಮಾತಾಡಿದರೆ ಮಾತಾಡಲಿ ನಾನು ಮಾತಡುವುದಿಲ್ಲ ಎಂಬ ನಿರ್ಧಾರಕ್ಕೆ ನಾನು ಬಂದಿದ್ದೆ, ಹೀಗೆ ಅವರೊಂದಿಗೆ ಮತ್ತು ಇತರೆ ಖಾಸಗಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಮಾತಾಡುತ್ತಿದಾಗ ಅವರು ಹೇಳಿದ್ದು "Now it is safe karthik  but  we really  need  powerfull govt  who  can  take  tough decision like Modi  ಎಂದು ... ಅದಿರಲಿ ಹೀಗೆ ಒಂದು ಪ್ರದೇಶ ಈ ರೀತಿಯ ದಾಳಿಗೊಳಗಾದಾಗ ಹಲವಾರು ಅಂತೆ ಕಂತೆಗಳ ಕಥೆಗಳು ಹುಟ್ಟುತ್ತವೆ .... ಅದರಂತೆ ಅಲ್ಲಿ ಹುಟ್ಟಿಕೊಂಡಿರುವ ನಂಬಲು ಅನರ್ಹವಾದ ಕಹಾನಿಯೆಂದರೆ ಇದು ಇನ್ನೊಂದು ದೇಶದ ಕೃತ್ಯವಂತೆ ಅದಕ್ಕೆ ಕಾರಣ ಹೀಗೆ ಹೇಳುತ್ತಾರೆ , ಅಂದು ಶಾಂಗ್ರಿ ಲ ಹೋಟೆಲ್ ನಲ್ಲಿ 5  ಜನ ಚೀನಾ ಪ್ರಾಂತ್ಯದಿಂದ ಬಂದ ವಿಜ್ಞಾನಿ ಗಳು ತಂಗಿದರಂತೆ ಆ ವಿಜ್ಞಾನಿಗಳು ಶ್ರೀಲಂಕೆಯ ಉತ್ತರ ಪ್ರಾಂತ್ಯದಲ್ಲಿ ತೈಲ ಸಿಗುವ ಸಂಭವವನ್ನು ಬೆನ್ನೆತ್ತಿ ಸಂಶೋದನೆಗೆಂದು ಬಂದಿದ್ದರು ಅವರನ್ನೇ ಕೇಂದ್ರೀಕರಿಸಿ ನಡೆಸಿದ ಮಾರಣ ಹೋಮ ಇದು ಎಂದು , ಇದು ನಿಜವೇ ಆಗಿದ್ದರೆ ಬೇರೆ ಹೋಟೆಲ್ಗಳನ್ನು ಹಾಗು ಚರ್ಚ್ ಗಳನ್ನೂ ಗುರಿಯಾಗಿಸಿದ್ದೇಕೆ? ಎಂದು ಕೇಳಿದರೆ ಅದಕ್ಕೆ ಉತ್ತರವಿಲ್ಲ , ಆದ್ದರಿಂದಲೇ ಹೇಳಿದ್ದು ಕಟ್ಟು ಕಥೆಗಳಿಗೆ ಬರವಿಲ್ಲವೆಂದು...

ಆದರೆ ಕುತೂಹಲಕ್ಕಾಗಿ ಮತ್ತು ಈ ಅಂತೆ ಕಂತೆಗಳ ಕಥೆಯನ್ನು ಕೇಂದಿರಿಕರಿಸಿ ನೀವು ನೋಡ ಹೊರಟರೆ ಶ್ರೀಲಂಕೆಯಲ್ಲಿ ಚೀನಿಗಳ ಪ್ರಭಾವವೇನು ಕಡಿಮೆಯಿಲ್ಲ , ಕೊಲಂಬೊ ನಗರದಲ್ಲಿ ಹಾಗೆ ನಡೆದಾಡಿಕೊಂಡು ಹೋದರೆ ಹಲವು ಚೀನೀ ನಾಗರಿಕರನ್ನು ತಾವು ಕಾಣಬಹುದು , ಇದರ ಅರಿವು ನಾನಾಗಿದ್ದರು ಕುತೂಹಲಕ್ಕೆ ಆರ್ they ಟೂರಿಸ್ಟ್ಸ್ ಎಂದು ಸವಾರನಿಗೆ ಮತ್ತು ಅಂಗಡಿಯವರಲ್ಲಿ ಕೇಳುತ್ತಿದೆ , ಆಗ ಅವರು ನೋ ಸರ್ ಬಿಗ್ ಪ್ರಾಜೆಕ್ಟ್ಸ್ ಆರ್ ಗೋಯಿಂಗ್ ಆನ್ ಇನ್ ಸೆವೆರಲ್ ಪಾರ್ಟ್ ಆ ಶ್ರೀಲಂಕಾ ಎನ್ನುತಿದ್ದರು (ಹಂಬನತೊಟ ಪೋರ್ಟ್ ಎಂದು ಗೂಗಲ್ ಮಾಡಿ ನೋಡಿ ನಿಮಗೆ ತಿಳಿಯುತ್ತದೆ) ಹೀಗೇಕೆ ಬಹುಷ್ಯ ತನ್ನ ವ್ಯಾಪಾರ ವಹಿವಾಟನ್ನು ವಿಸ್ತರಿಸಲು ಚೀನಾ ಹೀಗೆ ತನ್ನ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ ಎಂದು ನಿಮಗೆ ಅನಿಸಬಹುದು ಆದರೆ ಇದರೊಂದಿಗೆ ಇನ್ನೊಂದು ಹಿಡನ್ ಅಜೆಂಡಾ ಎಂದರೆ ರಾಜತಾಂತ್ರಿಕವಾಗಿ ಎಲ್ಲೆಲ್ಲಿ ಭಾರತ ತನ್ನ ಬೇರುಗಳನ್ನು ಬಲಪಡಿಸಿಕೊಳ್ಳಲು ಪ್ರಯ್ತ್ನಿಸುತ್ತದೆಯೋ ಅಲ್ಲಲ್ಲಿ ಚೀನಾ ಕೂಡ ಜಿದ್ದಿಗೆ ಬಿದ್ದು ತನ್ನ ಅಸ್ತಿತ್ವವನ್ನು ಕಂಡು ಕೊಳ್ಳಲು ಪ್ರಯ್ತ್ನಿಸುತ್ತದೆ , ಮೊದಲಿಗೆ ಚೀನಾ ಆರ್ಥಿಕವಾಗಿ ಹಣ ಸಹಾಯ ಮಾಡುತ್ತದೆ , ನಂತರ ದೊಡ್ಡ ದೊಡ್ಡ ಯೋಜನೆಗಳ ಮೂಲಕ ಆ ಈಡೀ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತದೆ , ಇಲ್ಲಿ ಪಾಕಿಸ್ತಾನ , ನೇಪಾಳ, ಬಾಂಗ್ಲಾದೇಶ  ಮತ್ತು ಮ್ಯಾನ್ಮಾರ್  ಗಳೊಂದಿಗೆ ಚೀನಾ ದ ಒಡನಾಟವನ್ನು ನೀವು ಗಮನಿಸಬಹುದು , ಇತ್ತೀಚಿಗೆ ಶ್ರೀಲಂಕೆ ಹೆಚ್ಚು ಹೆಚ್ಚಾಗಿ ಚೀನಾ ದಟ್ಟ ವಾಲುತ್ತಿದಂತೆ ಕಂಡು ಬಂದಿತ್ತು , ಅದೇ ಕಾರಣಕ್ಕೆ ಭಾರತ ಮೂರ್ ನಾಲ್ಕು ಬಾರಿ ಸಂಭಾವಿ ದಾಳಿಯ ಬಗ್ಗೆ ಎಚ್ಚರಿಸಿದ್ದರು , ಇದು ಪಾಕಿಸ್ತಾನ ಹಾಗು ಶ್ರೀಲಂಕೆಯ ಮಧ್ಯೆ ಕಂದಕವನ್ನು ನಿರ್ಮಿಸಲು ಪ್ರಯತ್ನಿಸುವ ಯತ್ನ ಎಂದು ಎಣಿಸಿತು, ಆದರೆ ಇಂದು ಶ್ರೀಲಂಕೆ ಭಾರತದ ಎಚ್ಚರಿಕೆಯನ್ನು ಕಡೆಗಣಿಸಿ ಪಶ್ಚಾತಾಪದ ಬೇಗುದಿಯಲ್ಲಿ ಬೇಯುತ್ತಿದೆ.

ಅದೇನೇ ಇರಲಿ ಶ್ರೀಲಂಕೆಯಲ್ಲಿ ಎಲ್ ಟಿ ಟಿ ಯ ಅಟ್ಟಹಾಸ ಮುಗಿದ ನಂತರ ಶ್ರೀಲಂಕೆ ಒಂದು ಬಗೆಯ relax  ಮೋಡ್ ನಲ್ಲಿತ್ತು ಅದು ಸಹಜವೂ ಹೌದು , ಇದಕ್ಕೆ ಇಂಬು ಕೊಡುವಂತೆ ಇತ್ತೀಚಿಗೆ ಶ್ರೀಲಂಕೆಗೆ ಪ್ರವಾಸಕ್ಕೆ ಹೋಗುವವವರ ಸಂಖ್ಯೆಯು ಹೆಚ್ಚಿತ್ತು , ಶ್ರೀಲಂಕೆಯ ಒಟ್ಟು ಉತ್ಪಾದನೆಯ GDP  ಗೆ ಟೂರಿಸಂ ನ ಕೊಡುಗೆಯೇ 10 % ಎಂದರೆ ನೀವೇ ಊಹಿಸಿ ಟೂರಿಸಂ ಎಷ್ಟು ಅಗಾಧವಾಗಿ ಬೇರೂರಿತ್ತು ಎಂದು. ಆದರೆ ಇಂದು ಆ ಆದಾಯದ ಮೂಲಕ್ಕೆ ಪೆಟ್ಟು ಬಿದ್ದಿದೆ , ಅಲ್ಲಿಗೆ ಶ್ರೀಲಂಕೆ ತಕ್ಕಮಟ್ಟಿಗೆಯಾದರು ಮತ್ತೆ ಆರ್ಥಿಕವಾಗಿ ಜರ್ಜರಿತವಾದರೆ ಆಶರ್ಯವಿಲ್ಲ, ಇದೆಲ್ಲವೂ ಶ್ರೀಲಂಕೆಯ ಆತಂಕದ ಸವಾಲುಗಳು ಇನ್ನು ಮುಗಿದಿಲ್ಲವೆನ್ನುವುದನ್ನು ಹೇಳುತ್ತಿದೆ , ಆದರೆ ಇದೆಲ್ಲದರಿಂದ ಎಚ್ಚೆತ್ತುಕೊಂಡಿರುವ ಲಂಕೆ ಹಲವು ಮಿತ್ರ ದೇಶಗಳ ಸಹ್ಯದೊಂದಿಗೆ ವ್ಯರಿಗಳ ಹೆಡೆಮುರಿ ಕಟ್ಟಲು ಪ್ರೇತಿನಿಸುತ್ತಿದೆ ಲಂಕೆಯೆಯ ಪ್ರಾರ್ಥಮಿಕ ವರದಿಯ ಪ್ರಕಾರ ಹಲವು ದೇಶ ದ್ರೋಹಿಗಳನ್ನು ಬಂಧಿಸಿದೆ  "NTJ " ನ್ಯಾಷನಲ್ Towheed ಜಮಾತ್ " ಎಂಬ ಸಂಘಟನೆಯ ಮೇಲೆ ಬಲವಾದ ಗುಮಾನಿಯನ್ನು ಶ್ರೀಲಂಕೆ ವ್ಯಕ್ತಪಡಿಸಿದೆ , ಇತ್ತ ಇಸ್ಲಾಮಿಕ್ ಸ್ಟೇಟ್ ಈ ದುಷ್ಕೃತ್ಯವನ್ನು ತಾನೇ ಮಾಡಿದ್ದೂ ಎಂಬ ತನ್ನ AMAQ ಮುಖವಾಣಿಯಲ್ಲಿ ಹೇಳಿಕೊಂಡಿದೆ , ಇದೆಲ್ಲದರ ನಡುವೆ ಕಂಡು ಬರುವ ಆತಂಕಕಾರಿ ಬೆಳವಣಿಗೆಯೆಂದರೆ ಸಿಂಹಳೀಯರು ಮತ್ತು ತಮಿಳು ಪ್ರತ್ಯೇಕತಾವಾದಿಗಳ ಹೊರ್ತಾತಾಗಿ ಮತ್ತೊಂದು ಜನಾಂಗೀಯ ವಿಭಜನೆಯತ್ತ ಶ್ರೀಲಂಕಾ ಮುಖ ಮಾಡಿದೆ , ಈಗಾಗಲೇ ಹಿಂದೊಮ್ಮೆ ಇದೇ ವಿಷಯದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು .

ಅದಿರಲಿ , ಇತ್ತೀಚಿನ ಬೆಳವಣಿಗೆಯನ್ನು ನೋಡಿದರೆ ಐಸಿಸ್ , ದಕ್ಷಿಣ ಏಷ್ಯಾವನ್ನು ತನ್ನ ಸಂಘಟನೆಯ ಸ್ಥಾಪನೆಗೆ ಫಲವತ್ತಾದ ಭೂಮಿ ಎಂದು ಪರಿಗಣಿಸಿದಂತೆ ಕಾಣುತ್ತಿದೆ. ಹೀನಾಯವಾಗಿ ಐಸಿಸ್ ಹಿನ್ನಡೆಯನ್ನು ಅನುಭವಿಸಿದರೂ ಜಾಗತಿಕ  ಭಯೋತ್ಪಾದಕ ಶಕ್ತಿಯಾಗಿ ಇನ್ನು ಉಳಿದಿದೆ , ಇದರ ಕುರುಹನ್ನು ನೈಜಿರಿಯಾದಲ್ಲಿ , ಅಫ್ಘಾನಿಸ್ತಾನದಲ್ಲಿ ಕಾಣಬಹುದು , ನೈಜಿರಿಯಾ ದೇಶದ ಕೆಲವು ಭಾಗವನ್ನು ನಿಯಂತ್ರಿಸುವ "Boko  Haram " ಎಂಬ ಸಂಸ್ಥೆ ಐಸಿಸ್ ಗೆ ತನ್ನ ನಿಷ್ಠೆಯನ್ನು ಘೋಷಿಸಿದೆ . ಅಫ್ಘಾನಿಸ್ತಾನದಲ್ಲಿ  ಐಸಿಸ್ ಸದಸ್ಯರು ಮತ್ತು ಐಸಿಸ್ನೆಡೆಗೆ ಸಹಾನುಭೂತಿಯುಳ್ಳವರು , ಇರಾಕ್ ಇಸ್ಲಾಮಿಕ್ ರಾಜ್ಯ ಮತ್ತು ಪೂರ್ವ ಪ್ರಾಂತ್ಯದ ಲೆವೆಂಟಾ ಬೋರಾಸನ ಪ್ರಾಂತ್ಯವನ್ನು ಐಸಿಸಿ ಬೆಂಬಲಿತ ಪ್ರಾಂತ್ಯವಾಗಿ ಪರಿವರ್ತಿಸಲಾಗಿದೆ (ಈ ಪ್ರಾಂತ್ಯಗಳಿಗೆ ಐಸಿಸಿ ತನ್ನ ಪ್ರತೇಯಕ ಪ್ರಾಂತ್ಯವನ್ನು ಮಾಡಿ ಅದನ್ನು ಉರ್ದು ಭಾಷೆಯಲ್ಲಿ ತನ್ನ ವಿಲಾಯತ್ ಎಂದು ಕರೆದು ಕೊಳ್ಳುತ್ತಿದೆ) ಈ ಪ್ರಾಂತ್ಯಗಳಲ್ಲಿ ಐಸಿಸಿ ಆತ್ಮಾಹುತಿ ದಾಳಿಗಳನ್ನು ಮಾಡಿರುವುದನ್ನು ನೀವು ಗಮನಿಸಬಹುದು . ಈ ಪ್ರದೇಶಗಳಲ್ಲಿ ಶಿಯಾ ಮುಸ್ಲಿಂರನ್ನು ಕೇಂದ್ರವಾಗಿಸಿ ಹಲವು ದಾಳಿಗಳನ್ನು ಮಾಡಿದೆ ಮತ್ತು ಗಮನಾರ್ಹ ಅಮಾಶವೆಂದರೆ ಈ ಬೋರಾಸನ ಪ್ರಾಂತ್ಯದಿಂದಲೇ ಐಸಿಸ್ , ಭಾರತ , ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ . ಭಾರತದಲ್ಲಿ ಇದುವರೆಗೆ ಐಸಿಸ್ ಯಾವುದೇ ಪ್ರಮುಖ ಭಯೋತ್ಪಾದನಾ ದಾಳಿಯನ್ನು ಮಾಡಿಲ್ಲ ಹಾಗು ಭಾರತದಲ್ಲಿ ಯಾವುದೇ ಸಂಘಟನೆಯ ಮಟ್ಟದಲ್ಲಿ ಉಪಸ್ಥಿತಿಯನ್ನು ಹೊಂದಿಲ್ಲ ಆದರೆ  ಐಸಿಸ್ ಹಲವು ಯುವಕರನ್ನು ತನ್ನತ ಆಕರ್ಷಿಸುತ್ತಲೇ ಇದೆ ಎಂದು ನಾವುಗಳು ಅಲಲ್ಲಿ ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೇವೆ, ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯೇ ಸರಿ .


ಇಸ್ಲಾಂ ಮತ್ತು ಇತರ ಸಂಸ್ಕೃತಿಗಳ ನಡುವಿನ ಸಂಘರ್ಷ ಇಂದು ಹಲವು ಜಿಹಾದಿಗಳನ್ನು ಐಸಿಸ್ ಸೇರಲು ಆಕರ್ಷಿಸುತ್ತಿದೆ ಮತ್ತು ಅದು ತನ್ನದೇ ರೀತಿಯ ಸಂವಹನ ಶೈಲಿಯನ್ನು ಬೆಳೆಸಿಕೊಂಡು ಇನ್ನಿಲದಂತೆ ಪ್ರಪಂಚದಾದ್ಯಂತ ತನ್ನ ಜಾಲವನ್ನು ವಿಸ್ತರಿಸಲು ಪ್ರತಿ ದಿನವೂ ಪ್ರಯತ್ನಿಸುತ್ತಿದೆ , ಈ ಪಾಪಿಗಳಿಗೆ ಆ ದೇಶ ಈ ದೇಶವೆಂಬ ಭೇದವಿಲ್ಲ ಅವರ ಒಂದಂಶದ ಕಾರ್ಯಕ್ರಮವೆಂದರೆ ಪ್ರಪಂಚದಾದ್ಯಂತ ಭಯದ ವಾತಾವರಣ ನಿರ್ಮಿಸುವುದು , ಇಸ್ಲಾಂ  ಮತ್ತು ಇತರೆ ನಂಬಿಕೆಗಳ ನಡುವೆ ಯುದ್ಧವನ್ನು ಪ್ರಚೋದಿಸುವುದು  ಇದೇ ಅವರ ಗುರಿ ಅದು ಇಂದು ಶ್ರೀಲಂಕಾ ನಾಳೆ ಇನ್ನೆಲ್ಲೋ ? ಐಸಿಸ್ ಈಗಾಗಲೇ ಆಫ್ಘಾನಿಸ್ತಾನ್ ಮತ್ತು ಲಿಬಿಯಾಗಳಲ್ಲಿ ತನ್ನದೇ ಬೆಂಬಲಿತ ಕಿರು ಸಾಮ್ರಾಜ್ಯಗಳನ್ನು ಹುಟ್ಟು ಹಾಕಿದೆ , ಐಸಿಸ್ ಹೇಗಾದರೂ ಸರಿಯೇ ಎಂದು ತನ್ನ ಸಂಘಟನೆಗೆ ಯುವಕರನ್ನು ಬೇರೆ ದೇಶಗಳಿಂದ ಸೇರಿಸಿಕೊಳ್ಲು ಪ್ರಯತ್ನಿಸುತ್ತಿರುವು ನಡೆ ಮೇಲ್ನೋಟಕ್ಕೆ ಐಸಿಸ್ ದುರ್ಬಲಗೊಂಡಂತೆ ಕಾಣುವಂತೆ  ತೋರಬಹುದು ಆದರೆ ಐಸಿಸ್ ಇನ್ನು ಪರಾಜಯಗೊಂಡಿಲ್ಲ ಹಾಗು ಸತ್ತಿಲ್ಲ ಎಂಬುದೇ ನಮ್ಮೆಲ್ಲರನ್ನೂ ಚಿಂತೆಗೀಡು ಮಾಡುತ್ತಿರುವ ವಿಷಯ, ಐಸಿಸ್ ಅಷ್ಟೇ ಅಲ್ಲ ವರ್ಗ ವರ್ಗಗಳ ನಡುವೆ ಸಂಘರ್ಷವನ್ನುಟು ಮಾಡುವ  ಯಾವುದೇ ಸಂಘಟನೆ ಇರಲಿ ಅದು ಇನ್ನಿಲದಂತೆ ನಿರ್ನಾಮವಾಗಬೇಕು , ಜಗತ್ತಿನೆಲ್ಲೆಡೆ ಶಾಂತಿ ನೆಲೆಗೊಳ್ಳಬೇಕು - ಇದೆಲ್ಲದರ ನಡುವೆ ಇನ್ನೇನು ಇದೆಲ್ಲವನ್ನು ಬರೆದು ಮುಗಿಸಿ ತಾಜ್ ನ  ಕೋಣೆಯಲ್ಲಿ ಕುಳಿತಾಗ ಬಂದ ಸುದ್ದಿ ನೌ ಶ್ರೀಲಂಕಾ ೯೯% ಸೇಫ್ ಟು ಟ್ರಾವೆಲ್ ಎಂಬ ಶ್ರೀಲಂಕೆಯ ಘೋಷಣೆ , ಅದು ನಿಜವಾಗಲಿ ಶ್ರೀಲಂಕೆ ಬಹು ಬೇಗ ಚೇತರಿಸಿಕೊಳ್ಳಲಿ ... 

ಕಾರ್ತಿಕ್ ಎಸ್ ಬಾಪಟ್

Monday, April 8, 2019

ಇನ್ನೆಷ್ಟು ದಿನ ಗರೀಬಿ ಹಟಾವೋ ?


ಅದು ಐದನೇ ಪಂಚ ವಾರ್ಷಿಕ ಯೋಜನೆ, ಆ ಯೋಜನೆಯಲ್ಲೆಯೇ ಕಾಂಗ್ರೆಸ್ ಸರ್ಕಾರ ಗರೀಬಿ ಹಟಾವೋ (ರಿಮೂವಲ್ of ಪಾವರ್ಟಿ) ಎಂಬ ಘೋಷ ವಾಕ್ಯವನ್ನು ಮೊಳಗಿಸಿತ್ತು, ಬಡತನ ನಿರ್ಮೂಲನೆಯನ್ನೇ ಐದನೇ ಪಂಚವಾರ್ಷಿಕ ಯೋಜನೆಯ ಮೂಲ ಧ್ಯೇಯೋದ್ದೇಶವನ್ನಾಗಿ ಹಮ್ಮಿಕೊಂಡು ಕಾರ್ಯಪ್ರವರ್ತವಾಗಿತ್ತು , ಆದರೆ ತದ ನಂತರ ತುರ್ತುಪರಿಸ್ಥಿತಿಯ ಹೊಡೆತಕ್ಕೆ ಸಿಕ್ಕಿ ಕಾಂಗ್ರೆಸ್ ರಾಜ ಗಾದಿ ಬಿಡಬೇಕಾಗಿ ಬಂತು ಆದ್ದರಿಂದ ಗರೀಬಿ ಹಟಾವೋ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿಲ್ಲ , ಆದರೆ ತುರ್ತು ಪರಿಸ್ಥಿತಿಯ ಛಾಯೆಯಿಂದ ಕೆಡವಿಕೊಂಡು ಎದ್ದು ಬಂದ ಕಾಂಗ್ರೆಸ್ 1980 ರಲ್ಲಿ ಮತ್ತೆ ಗರೀಬಿ ಹಟಾವೋ ಎಂಬ ರಣ ಕಹಳೆ ಮೊಳಗಿಸಿತು, ಅಂದರೆ ಅದಾಗಿ ಇಂದಿಗೆ ಸರಿ ಸುಮಾರು 29 ವರ್ಷಗಳೇ ಆದವು , 1980  ರಿಂದ ಇಲ್ಲಿಯವರೆಗೆ ಈ 29 ವರ್ಷಗಳಲ್ಲಿ ನೋಡ ಹೊರಟರೆ ಒಟ್ಟಾರೆಯಾಗಿ ಕಾಂಗ್ರೆಸ್ ಆಡಳಿತ ನಡೆಸಿದ್ದೆ ಹೆಚ್ಚು, ಇದೆಲ್ಲ ಇಂದು ಏಕೆ ನೆನಪಾಯಿತೆಂದರೆ ಕಾಂಗ್ರೆಸ್ ಪಕ್ಷ ಬಿಡುಗಡೆ ಗೊಳಿಸಿದ ಚುನಾವಣಾ ಪ್ರಣಾಳಿಕೆ , ಅಂದಿಗೂ ಇಂದಿಗೂ ಏನು ವ್ಯತ್ಯಾಸ ಎಂದು ನೋಡಲು ಹೊರಟರೆ ಮತ್ತದೇ ರಾಗ ಅದೇ ಹಾಡು ಗರೀಬಿ ಹಟಾವೋ ಎಂಬುದನ್ನೇ ಈಗ "ನ್ಯಾಯ" ಎಂಬ ಧ್ಯೇಯ ವಾಕ್ಯದೊಂದಿಗೆ ಹೊರ ತಂದಿದೆ , ಒಂದು ರೀತಿಯಲ್ಲಿ ಓಲ್ಡ್ ವೈನ್ ಇನ್ ನ್ಯೂ ಬೋಟೊಲ್ ಎಂದರೆ ತಪ್ಪಾಗಲಾರದು , ಇತ್ತೀಚಿನ ದಿನಗಳಲಲ್ಲಿ ಚುನಾವಣಾ ಪ್ರಣಾಳಿಕೆಗಳು ತಮ್ಮ ಮಹತ್ವವನ್ನೇ ಕಳೆದುಕೊಂಡಿದೆ ಎಂಬುದು ಎಲ್ಲರು ಒಪ್ಪುವ ವಿಷಯ , ಏಕೆಂದರೆ ಎಲ್ಲ ಪಕ್ಷಗಳು ಗದ್ದುಗೆ ಏರಿದ ಮೇಲೆ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲ ಅಂಶಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ, ಆ ನಿಟ್ಟಿನಲ್ಲಿ ನೋಡ ಹೋದರೆ ಇತ್ತೀಚಿಗೆ ಸ್ಥಾಪನೆಗೊಂಡ ಉಪೇಂದ್ರ ನೇತ್ರದ್ವದ UPP ಯೇ ಪರವಾಗಿಲ್ಲ , ನಾವು ಚುನಾವಣಾ ಪ್ರಣಾಳಿಕೆಯನ್ನು ಹೊರತರುವುದಿಲ್ಲ ಎಂದಿದೆ ಅದಲ್ಲದೆ ಜನರ ಕಷ್ಟ ಕೋಟಲೆಗಳನ್ನು ಜನರಿಂದಲೇ ಕೇಳಿ ನಂತರ ಅದಕ್ಕೆ ಉಪಾಯವನ್ನು ಕಂಡು ಹಿಡಿದು ಅವುಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುತ್ತೇವೆಂದು ಹೇಳುತ್ತಿದೆ UPP . ಉಪೇಂದ್ರ ಮಾಧ್ಯಮದವರೊಂದಿಗೆ ಮಾತಾಡುವಾಗ ನಮಗೆ ryaali ಗಳಲ್ಲಿ ಹಾಗು ರೋಡ್ ಶೋ ಗಳಲ್ಲಿ ನಂಬಿಕೆಯಿಲ್ಲ ಎಂದು ಹೇಳುತ್ತಾರೆ , ಮೇಲ್ನೋಟಕ್ಕೆ ಈ ನಿಲುವು ಮೂರ್ಖತನದ್ದು ಎಂದು ಕಂಡು ಬಂದರು ಅವರ ತರ್ಕದಲ್ಲಿ ಒಪ್ಪಿಕೊಳ್ಳುವ ಅಂಶವಿದೆ ಎಂದು ನೀವೇ ಮನಗಾಣಬಹುದು. , ryaali ರಹಿತ ಮತ್ತು ರೋಡ್ ಶೋ ರಹಿತ ಚುನಾವಣೆಗಳನ್ನು ನಾವು ಊಹಿಸಲು ಅಸಾಧ್ಯ ಏಕೆಂದರೆ ಚುನಾವಣೆಗಳೆಂಬುದು ಪ್ರಜಾತಂತ್ರದ ಬಹುದೊಡ್ಡ ಹಬ್ಬಗಳಲೊಂದು , ಆದರೆ ಈ ryaali ಗಳು ಮತ್ತು ರೋಡ್ ಷೋಗಳು ಇತ್ತೀಚಿನ ದಿನಗಳಲ್ಲಿ ತನ್ನ ಪ್ರಸ್ತುತತೆಯನ್ನೇ ಕಳೆದುಕೊಂಡಿದೆ , ಹೀಗೆ ತನ್ನ ಪ್ರಸ್ತುತತೆಯನ್ನು ಕಳೆದು ಕೊಳ್ಳಲು ಕಾರಣವೇನೆಂದು ಬಿಡಿಸಿ ಹೇಳುವು ಅಗತ್ಯವಿಲ್ಲ , ryaali ಗಳ ಮತ್ತು ರೋಡ್ ಶೋ ಗಳನ್ನೂ  ಯಶಸ್ವಿಯಾಗಿ ಮಾಡುವ ವೃತ್ತಿಪರ ಗುತ್ತಿಗೆದಾರರೇ ಹುಟ್ಟಿಕೊಂಡಿದ್ದಾರೆ ಎಂದರೆ ನೀವೇ ಊಹಿಸಿ ಒಂದು ರೋಡ್ ಶೋ ನಡೆಸಲು ಎಷ್ಟು ಹಣ ಖರ್ಚಾದೀತೆಂದು.

ಅದಿರಲಿ ಮತ್ತೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶಗಳಿಗೆ ಬರುವುದಾದರೆ "ನ್ಯಾಯ" ಎಂಬ ಪ್ರಮುಖ ಅಂಶ ಎಲ್ಲೆಡೆ ಸದ್ದು ಮಾಡುತ್ತಿದೆ , ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ ತಿಂಗಳಿಗೆ ಆರು ಸಾವಿರ ಮೀರದಂತೆ , ವರ್ಷಕ್ಕೆ 72  ಸಾವಿರ ರೂಪಾಯಿನ್ಗಳನ್ನು ದೇಶದಲ್ಲಿಯ 20 % ರಷ್ಟುಬಡ ಕುಟುಂಬಗಳಿಗೆ ಕೊಡುವುದಾಗಿ ಹೇಳಿಕೊಂಡಿದೆ , ಇದು ಇಡೀ ಭಾರತದಲ್ಲಿಯೇ ಬಹು ಚರ್ಚಿತ ವಿಷಯ , ಈ ವಿಷಯದ ಮೇಲೆ ಕಾಂಗ್ರೆಸ್ ಕೆಲವೊಂದಿಷ್ಟು ವೋಟುಗಳನ್ನು ಬಾಚುವ ತಂತ್ರ ಮುಂದಿಡುತ್ತಿದೆ , ಆದರೆ ಒಂದಂಶವನ್ನು ಗಮನಿಸಬೇಕು " ಸಮರ್ಪಕ ಅಭಿವೃದ್ಧಿಯ" ಬಗ್ಗೆ ಮಾತನಾಡಬೇಕಾದ ರಾಜಕೀಯ ಪಕ್ಷಗಳು ಮತ್ತದೇ ಓಲಯ್ಕೆಯ ರಾಜಕಾರಣವನ್ನು ಮಾಡುತ್ತಿದೆ , ಸಮಪ್ರಕವಾಗಿ ಎಲ್ಲರನ್ನೊಳಗೊಂಡ ಅಭಿವೃದ್ಧಿಯಾದರೆ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಒಂದಿಲ್ಲೊಂದು ರೀತಿಯಲ್ಲಿ ಇದರ ಉಪಯೋಗಗಳು ತಲುಪುತ್ತವೆ , ಆದರೆ ನ್ಯಾಯ ನಂತಹ ಯೋಜನೆಗಳು ಕೇವಲ ಆ ಒಂದು ಗುಂಪಿಗೆ ಮಾತ್ರ ಸೀಮಿತವಾಗಿ ಅದು ಅಸಮರ್ಪಕ ರೂಪದಲ್ಲಿ ದೇಶದ ಬೆಳವಣಿಗೆಯನ್ನು ಕುಂಠಿತಗೊಳಿಸುವ ಅಪಾಯವಿದೆ, ಹಾಗೆ ನೋಡಿದರೆ ಕಾಂಗ್ರೆಸ್ ಸರ್ಕಾರವೇ ತಂದಂತಹ "ಮಹತ್ಮಾ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಸ್ಕೀಮ್" ಒಂದು ಅತ್ಯುತ್ತಮ ಯೋಜನೆ ಎನ್ನುವುದರಲ್ಲಿ ಎರಡು ಮಾತಿಲ್ಲ , ಕಾರಣವಿಷ್ಟೇ ಅಲ್ಲಿ ನಿರುದ್ಯೋಗಿಗೆ ಕೈ ತುಂಬ ಕೆಲಸ ಕೊಟ್ಟು ಅವನಿಗೆ ಸಂಭಾವನೆಯು ಸಿಗುತಿತ್ತು ಇಲ್ಲಿ ಯಾರು ಮೈಗಳ್ಳರಾಗುವ ಪ್ರಮೇಯ ಬರುವುದಿಲ್ಲ ಆದರೆ ನ್ಯಾಯ ನಂತಹ ಯೋಜನೆಗಳಿಂದಾಗಿ ದುಡಿಯುವ ಕೈಗಳಿಗೆ ಮುಷ್ಕರ ಹೂಡಲು ತಾನೇ ಹಾಸಿಗೆ ಹಾಸಿ ಕೊಟ್ಟಂತಾಗುತ್ತದೆ.

ಹೀಗೆ ಇದು ನ್ಯಾಯ ನ ಕಥೆ ಯಾದರೆ ಸುಮ್ಮನಿರಲಾರದೆ ಹುಳ ಬಿಟ್ಕೊಂಡ್ರು ಎಂಬಂತೆ ಸೆಕ್ಷನ್ 124 A  ಅನ್ನು ಕಿತ್ತು ಹಾಕುವ ಬಗ್ಗೆಯೂ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ , ಅಂದರೆ ಇನ್ನುಮುಂದೆ ಯಾರಾದರೂ ರಾಜದ್ರೋಹವೆಸಗಿದರೆ ರಾಜದ್ರೋಹದಡಿಯಲ್ಲಿ ಯಾರನ್ನು ಬಂಧಿಸುವಂತಿಲ್ಲ , 124 A , ನ ನಂತರ ಮತ್ತೊಂದು ಉಲ್ಲೇಖಿಸಿಲ್ಪಟ್ಟ ಅಂಶವೆಂದರೆ  armed force special act 1958 ಅನ್ನು ತಿದ್ದು ಪಡಿ ಮಾಡಲಾಗುವುದೆಂದು ಅಂದರೆ ಸಶಸ್ತ್ರ ಪಡೆಗೆ ಕೆಲವು ವಿಶೇಷ ಅಧಿಕಾರವನ್ನು ಸರ್ಕಾರ ಕಾನೂನಿನ ಅಡಿಯಲ್ಲಿ ಕಲ್ಪಿಸಿಕೊಟ್ಟಿದೆ, ಗಮನಾರ್ಹ ಅಶವೆಂದರೆ ಜಮ್ಮು ಕಾಶ್ಮೀರದಲ್ಲಿ ಹಾಗು ಕೆಲವು ಆಯ್ದ ರಾಜ್ಯ್ಗಳಲ್ಲಿ AFSA ಜಾರಿಯಲ್ಲಿದೆ, ಹೀಗೆ ಇಂತಹ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ಎತ್ತಿಕೊಂಡು ಕಾಂಗ್ರೆಸ್ ತಾನಾಗಿಯೇ ವಿರೋಧ ಪಕ್ಷಗಳಿಗೆ ಆಹಾರವಾಗಿದೆ , ನ್ಯಾಯ್ ನಂತಹ ಕಾರ್ಯಕ್ರಮಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಿ ಕಂಡು ಬಂದರು ಇನ್ನುಳಿದ ಸೂಕ್ಷ್ಮ ವಿಷಯಗಳನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದರಿಂದ ಚೌಕಿದಾರರಿಗೆ ಕಾಂಗ್ರೆಸ್ ತನ್ನ ವಿರುದ್ಧ ಹೋರಾಡಲು ತಾನೇ ಅಸ್ತ್ರವನ್ನು ಕೊಟ್ಟಂತಾಗಿದೆ , ಇದೆಲ್ಲದರ ನಡುವೆ ಭಾ ಜ ಪ ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ , ಆದರೆ ಮತದಾರ ಪ್ರಣಾಳಿಕೆಗಳ ಬೆನ್ನೇರಿ ಮತದಾನ ಮಾಡುವನೆಂದು ಕೊಂಡರೆ ಅದು ಶುದ್ಧ ಮೂರ್ಖತನ ಏಕೆಂದರೆ ರಾಜಕೀಯ ಪಕ್ಷದ ಪ್ರಣಾಳಿಕೆಗಳು ಅಪ್ರಸ್ತುತವಾಗಿ ದಶಕವೇ ಕಳೆದು ಹೋಗಿದೆ.


ಕಾರ್ತಿಕ್ ಎಸ್ ಬಾಪಟ್

Picture Courtesy : Shutterstock.com

Friday, April 5, 2019

ದೇಶ ಮೊದಲು , ಪಕ್ಷ ನಂತರ ವ್ಯಕ್ತಿ ಕೊನೆಯಲ್ಲಿ ಎಂದು ತತ್ವಸಿದ್ದಾಂತಕ್ಕೆ ಬೆಲೆ ಕೊಡುವ "ಅದಮ್ಯ ಚೇತನಗಳು" ಸುಲಭವಾಗಿ ಸಿಗಲಾರರು ... ನೀವೇನಂತೀರಿ



ಅನ್ನ, ಅಕ್ಷರ ಅರೋಗ್ಯ ಎಂದು ಕಂಕಣ ತೊಟ್ಟು ಅವಿರತವಾಗಿ ಸಮಾಜಸೇವೆಯಲ್ಲಿ ತೊಡಗಿರುವ ಅದಮ್ಯ ಚೇತನದ ರೂವಾರಿ "Dr ತೇಜಸ್ವಿನಿ ಅನಂತ್ ಕುಮಾರ್" ರವರಿಗೆ ಟಿಕೆಟ್ ನಿರಾಕರಣೆ ಇದು ಊಹಿಸಲು ಅಸಾಧ್ಯವಾದ ವಿಷಯ ಆದರೆ ಇದು ವಾಸ್ತವ. Dr ತೇಜಸ್ವಿನಿ ಅನಂತ್ ಕುಮಾರ್ ಎಂಬ ಹೆಸರು ಬೆಂಗಳೂರು ದಕ್ಷಿಣವಷ್ಟೇ ಅಲ್ಲ ಇಡೀ ಕರ್ನಾಟಕಕ್ಕೆ ಚಿರಪರಿಚಿತ, ಮೇಲ್ನೋಟಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರು ಇಷ್ಟೊಂದು ಚಿರಪರಿಚಿತವಾಗಿರಲು ಕಾರಣ ಅವರ ಪತಿ ಅನಂತ್ ಕುಮಾರ್  ಎಂದು ಕಂಡು ಬಂದರು, ವಾಸ್ತವದಲ್ಲಿ ಈ ವಾದ ಪೊಳ್ಳು ಎಂದು ಮನಗಾಣಲು ಯಾರಿಗೂ ಹೆಚ್ಚು ಸಮಯ ಹಿಡಿಯುವುದಿಲ್ಲ ಏಕೆಂದರೆ ತೇಜಸ್ವಿನಿ ಅನಂತ್ ಕುಮಾರ್ ಅವರು  ಕಾಲೇಜಿನ ದಿನಗಳಿಂದಲೂ A B V Pಸಿದ್ಧಾಂಥವನ್ನು ಮೆಚ್ಚಿಕೊಂಡು ಅಪ್ಪಿಕೊಂಡು  A B V P ಹಾಗು ಬಿ ಜೆ ಪಿ ಯ ನಿಲುವಗಳೊಂದಿಗೆ ಹೆಜ್ಜೆ ಹಾಕಿದವರು , ಮುಂದೆ ಅನಂತ್  ಕುಮಾರ್ ಅವರನ್ನು ವರಿಸಿದ ಮೇಲೆ ಅವರೊಂದಿಗೆ ಸಾಂಸಾರಿಕ ಹಾಗು ಸಾಮಾಜಿಕ ಬಂಡಿಯನ್ನು ಯಶಸ್ವಿಯಾಗಿ ಓಡಿಸಿಕೊಂಡು ಹೋದರು, ಯಾವಾಗ ಆನಂತ್ಕುಮಾರ್ ಅವರನ್ನು ವರಿಸಿದರೋ ಅಂದಿನಿಂದಲೇ ಸದ್ದಿಲದೆ ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನು ತಾವು ತೊಡಗಿಸಿಕೊಂಡರು , ಆಗ ಸಹಜವಾಗಿ ಅನಂತ್ ಕುಮಾರ್ ಅವರು ರಾಜಕೀಯದ ಅಂಗಳದಲ್ಲಿ ಇದ್ದಿದ್ದರಿಂದ , ತೇಜಸ್ವಿನಿ ಯವರ ಹೆಸರು ಹಿನ್ನಲೆಗೆ ಸರಿದು ಅನಂತ್ ಕುಮಾರ್ ಅವರ ಹೆಸರೇ ಮುನ್ನೆಲೆಗೆ ಬರುತಿತ್ತು ಅದು ಸಹಜವೂ ಹೌದು ಆದರೆ ನಿಜವಾದ ಸಂಗತಿಯೆಂದರೆ ಅನಂತ್ ಕುಮಾರರಷ್ಟೇ , ಅಥವಾ ಅನಂತ್ ಕುಮಾರರಿಗಿಂತಲೂ ತೇಜಸ್ವಿನಿ ಯವರು ಬೆಂಗಳೂರು ದಕ್ಷಿಣ ಕ್ಷೇತ್ರದಲಿಲ್ಲ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು ಎಂಬುದು, ಹಾಗು  ಅನಂತ್ ಕುಮಾರ್ ಅವರ ಸತತ ಗೆಲುವಿನ ನಾಗಾಲೋಟದಲ್ಲಿ ತೇಜಸ್ವಿನಿಯವರ ಪಾತ್ರವನ್ನು ತಳ್ಳಿ ಹಾಕುವಂತಿಲ್ಲ , ತೇಜಸ್ವಿನಿ ಅನಂತ್ ಅವರು ಅನಂತ್ ಕುಮಾರ ಅವರ ಬೆನ್ನೆಲುಬಾಗಿ ಸಾಥ್ ನೀಡುತಿದರಿಂದಲೇ ಅನಂತ್ ಕುಮಾರ್ ಅವರು ಚುನಾವಣೆಗಳ ಮೇಲೆ ಚುನಾವಣೆಗಳು ಬಂದೆರಗಿದರೂ ತಮ್ಮ ಕ್ಷೇತ್ರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಪಕ್ಷ ಸಂಘಟನೆ , ಕ್ಯಾಬಿನೆಟ್ ಮೀಟಿಂಗ್, ಬೇರೆ ರಾಜ್ಯದ ಮೇಲುಸ್ತುವಾರಿ ಎಂದು ಕಾಲಿಗೆ ಚಕ್ರ ಕಟ್ಟಿ ಕೊಂಡಂತೆ ಓಡಾಡುತ್ತಿದ್ದರು , ಅನಂತರಿಗಿದ್ದ ಹಿರಿಯ ಭಾ ಜ ಪ ನಾಯಕರ ಸಂಪರ್ಕದಿಂದಾಗಿ ಅನಂತರು ಬೆಂಗಳೂರಿನಲ್ಲಿದ್ದಿದ್ದಕ್ಕಿಂತ ಹೆಚ್ಚಾಗಿ ಡೆಲ್ಲಿ ಯಲ್ಲಿಯೇ ಇರುತ್ತಿದ್ದರು , ಅಷ್ಟೇ ಅಲ್ಲ ಕರ್ನಾಟಕದ ಕೆಲಸವೆಂದರೆ ದಣಿವರಿಯದೆ ಯಾವ ಪಕ್ಷದವರೇ ಬಂದು ಕೇಳಲಿ ದೂಸ್ರಾ ಮಾತಿಲ್ಲದೆ ನಡೆಸಿ ಕೊಡುತ್ತಿದ್ದರು, ಹೀಗೆ ಕ್ಷೇತ್ರದ ಹಾಗು ಸಂಸಾರ ನೌಕೆಯ ಜವಾಬ್ದಾರಿ ಎರಡನ್ನು ಸೀಮಿತ ಪರಧಿಯಲ್ಲಿ ಅನಂತ್ ಕುಮಾರ್ ಅವರು ತಮ್ಮ ಶ್ರೀಮತಿ ಯವರಿಗೆ ವಹಿಸಿದ್ದರು , ಆ ವಿಷಯದಲ್ಲಿ ಅನಂತ್ ಕುಮಾರ್ ಅವರು ನಿಜವಾಗಿಯೂ ಅದ್ರಷ್ಟವಂತರು .

ತಾನೊಂದು ಬಯಸಿದರೆ , ದೈವವೊಂದು ಬಗೆಯಿತು ಎಂಬಂತೆ , ಇನ್ನು ಉನ್ನತ ಹುದ್ದೆಯನ್ನು
ಅಲಂಕರಿಸುವ ಎಲ್ಲ ಚಾಕ ಚಕ್ಯತ್ತೆ , ನಾಯಕತ್ವದ ಗುಣಗಳನ್ನು ಹೊಂದಿದ್ದ ಅನಂತ್ ಕುಮಾರ್
ಹಠಾತ್ತನೆ ಬಾಳ ಪಯಣ ಮುಗಿಸಿ ಬಾರದ ಲೋಕಕೆ  ಹೊರಟೆ ಬಿಟ್ಟರು, ಆ ದಿನವಂತೂ ಕರ್ನಾಟಕದಮಟ್ಟಿಗೆ ಕರಾಳ ದಿನವೇ ಸರಿ, ಅವರ ಅಕಾಲ ಮರಣದ ನಂತರ ಬೆಂಗಳೂರು ದಕ್ಷಿಣ ಕ್ಷೇತ್ರ ಅಕ್ಷರಶ ಅನಾಥವಾಯಿತು , ಅವರ ಸ್ಥಾನವನ್ನು ಯಾರು ಸಮರ್ಥವಾಗಿ ತುಂಬ ಬಲ್ಲರು ಎಂಬ
ಚರ್ಚೆ ಎಲ್ಲೆಲ್ಲೂ ಕೇಳುತಿತ್ತು , ಅಲ್ಲೊಮ್ಮೆ ಇಲ್ಲೊಮೆ ವಿವಿಧ ರಂಗದ ಹಾಗು ಭಾ ಜ ಪ
ದ ಘಟಾನುಘಟಿಗಳ ಹೆಸರು ತೇಲಿ ಬಂದರು ಕಡೆಯದಾಗಿ ಭಾ ಜ ಪ ಕಾರ್ಯಕರ್ತರ ಹಾಗು
ಜನಸಾಮಾನ್ಯರ ಒಕ್ಕರಲಿನ ದನಿಯಾಗಿದ್ದು ಮತ್ತು ಬಯಸಿದ್ದು ಮಾತ್ರ ತೇಜಸ್ವಿನಿ ಅನಂತ್
ಕುಮಾರ್ ಅವರೇ ಕಣದಲ್ಲಿ ಸಮರ್ಥ್ ಅಭ್ಯರ್ಥಿಯಾಗಬೇಕೆಂದು , ತೇಜಸ್ವಿನಿ ಅನಂತ್ ರವರಿಗೆ
ಒಪ್ಪಿಗೆಯಿತ್ತೋ ಇಲ್ಲವೋ ಆದರೆ ಭಾ ಜ ಪ ದವರೇ ಅವರ ಮನೆಗೆ ಹೋಗಿ ನೀವೇ
ಅಭ್ಯರ್ಥಿಯಾಗಬೇಕೆಂದು ಒತ್ತಾಯಿಸಿದಲ್ಲದೆ , ರಾಷ್ಟ್ರ ಮಟ್ಟದಲ್ಲಿ ಅಭ್ಯರ್ಥಿಗಳ
ಹೆಸರು ಅಖೈರಿಯಾಗುವುದಕ್ಕೆ ಮುಂಚೆಯೇ  ಸುತ್ತೂರು ಮಠಕ್ಕೆ  ಹಾಗು ಆದಿ ಚುಂಚನಗಿರಿ
ಮಠಕ್ಕೆ ಪೆರೇಡ್ ಮಾಡಿಸಿದರು , ಮೊದಲು ಕೆಲವು ನಾಯಕರು ತೇಜಸ್ವಿನಿ ಅನಂತ್ ಅವರ
ಸ್ಪರ್ಧೆಯ ಬಗ್ಗೆ ಅಪಸ್ವರವೆತ್ತಿದರು ನಂತರ ಕ್ಷೇತ್ರದಲ್ಲಿ ತೇಜಸ್ವಿನಿ ಯವರೆಡೆಗಿರುವ
ಒಲವನ್ನು ಕಂಡು ದಂಗಾಗಿ ಅಲ್ಲಿಂದ ಅಲ್ಲಿಗೆ ಸರಿಪಡಿಸಿಕೊಂಡರು , ಯಡಿಯೂರಪ್ಪನವರಂತೂ
ಒಂದೇ ಹೆಸರು ಶಿಫಾರಸು ಮಾಡಿದ್ದೇವೆ ಅದುವೇ ತೇಜಸ್ವಿನಿ ಅನಂತ್ ಕುಮಾರ್ ಎಂದು ಸಾರಿ
ಸಾರಿ ಹೇಳಿದರು , ಇನ್ನೇನಿದ್ದರೂ ಔಪಚಾರಿಕವಾಗಿ ತೇಜಸ್ವಿನಿ ಆನಂತ್ಕುಮಾರ್ ಅವರ
ಹೆಸರು ಘೋಷಣೆಯೊಂದೇ ಬಾಕಿ ಎಂಬಂತಾಗಿತ್ತು , ಆದರೆ ಅರ್ಧ ರಾತ್ರಿಯಲ್ಲಿ ಸಿಡಿಲಿನಂತೆ
ಬಡಿದಪ್ಪಳಿಸಿದ ಸುದ್ದಿ ತೇಜಸ್ವಿನಿ ಅನಂತ್ ಕುಮಾರ್ ಅವರು ಟಿಕೆಟ್ ವಂಚಿತರಾದರೆಂದು ,
ಈ ಸುದ್ದಿ ಅನೇಕ ಅನಂತ್ ಹಾಗು ತೇಜಸ್ವಿನಿ ಯವರ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಂತೂ
ಸುಳ್ಳಲ್ಲ.

ಇದೇ ಕೆಲವು ದಿನಗಳ ಹಿಂದೆ ಬಾಯಿತಪ್ಪಿಯೋ ಅಥವಾ ಬೇಕಂತಲೂ ಮಹಿಳಾ ದಿನಾಚರಣೆಯೆಂದುರೇವಣ್ಣನವರು ಸುಮಲತಾ ಬಗ್ಗೆ ಬಹಳ ಲಘುವಾಗಿ ಮಾತಾಡಿದರು ಎಂದು ಭಾ ಜ ಪ ಗುಲ್ಲೆಬ್ಬಿಸಿದರು , ಅಂದು ರೇವಣ್ಣನವರು ಆಡಿದ ಮಾತು ಅಕ್ಷರಶ ತಪ್ಪೇ ಆದರೆ ಇಂದು ಭಾ ಜ ಪ ದವರು ಮಾಡಿದ್ದೇನು? ನೀವೇ ಅಭ್ಯರ್ಥಿ ಎಂದು ಬಿಂಬಿಸಿ, ತೇಜಸ್ವಿನಿ ಯವರ
ಕೈಯಲ್ಲಿ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿ ಕೊನೆಗೆ ಕೈ ಕೊಟ್ಟದು ಎಷ್ಟು ಸಮಂಜಸ
ಎಂದು ಮತದಾರ ಪ್ರಶ್ನೆ ಮಾಡುತ್ತಿದಾನೆ , ಹಾಗೆ ನೋಡಿದರೆ ಸುಮಲತಾ ಅವರ ಸ್ಪರ್ಧೆ
ಅನುಕಂಪದ ಹಿನ್ನಲೆಯಲ್ಲಿಯ ಸ್ಪರ್ಧೆ ಎಂದು ಸ್ವಲ್ಪ ಮಟ್ಟಿಗೆ ಒಪ್ಪಿ ಕೊಳ್ಳಬಹುದು
ಆದರೆ ತೇಜಸ್ವಿನಿ ಅನಂತ್ ಕುಮಾರ್ ಅವರ ಸ್ಪರ್ಧೆ ಕೇವಲ ಅನುಕಂಪದ ಹಿನ್ನಲೆಯಲ್ಲಿನ
ಸ್ಪರ್ಧೆಯಾಗಿರದೆ , ಸಮಾಜಮುಖಿ ಕಾರ್ಯಕ್ರಮದೆಡೆಗೆ ಒಲವುಳ್ಳ ಮಹಿಳೆಯೊಬ್ಬಳ ಔಚಿತ್ಯದ
ಸ್ಪರ್ಧೆಯಾಗಿ ಕಾಣುತಿತ್ತು.
ಹೀಗೆ ತೇಜಸ್ವಿನಿ ಅನಂತ್ ಕುಮಾರ್ ಅವರ ಸಾಮರ್ಥ್ಯ ಅರಿವುಳ್ಳ ನಾಡಿನ  ಗಣ್ಯರು ಮತ್ತು ಕಾರ್ಯಕರ್ತರು ಅವರನ್ನು ಭೇಟಿಯಾಗುತ್ತಿದ್ದರೆ ಮತ್ತು ತಮ್ಮ ಅಸಹಕತೆಯನ್ನು ಹಾಗು ಸಿಟ್ಟನ್ನು ವ್ಯಕ್ತ ಪಡಿಸಿದ್ದಾರೆ , ಇದೆಲ್ಲವನ್ನು ಅರಿತಿರುವ ಭಾ
ತನ್ನಿಂದಾದ ಅಭಾಸಕ್ಕೆ ಸದ್ಯಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ಕರ್ನಾಟಕ ಭಾ  ಉಪಾಧ್ಯಕ್ಕ್ಷರನ್ನಾಗಿ ನೇಮಿಸಿದೆ , ಆದರೆ ಕಾರ್ಯಕರ್ತರು ನಡೆಯಿಂದ ತೃಪ್ತರಾದಂತೆ ಕಾಣುತಿಲ್ಲ, ಅವರ ಒಕ್ಕೂರಲಿನ ದನಿ ನಿರ್ಮಲ ಸೀತಾರಾಮನ್ , ಹಾಗು ಸ್ಮ್ರಿತಿ ಇರಾನಿ ಯವರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ಸ್ಥಾನ ಕೊಟ್ಟಂತೆ ತೇಜಸ್ವಿನಿ ಅವರಿಗೆ ಮುಂದಿನ ದಿನಗಳಲ್ಲಿ ಏನ್ ಡಿ ಗೆದ್ದು ಬಂದರೆ ಕೇಂದ್ರ ದಲ್ಲಿ ಮಂತ್ರಿ ಮಾಡಿ ಅವರ ಸೇವೆಯನ್ನು ಬಳಸಿಕೊಳ್ಳಬೇಕು ಎಂಬುದಾಗಿದೆ

ಹೀಗೆ ಭಾ ದಲ್ಲಿ  ಬೆಳವಣಿಗೆಗಳು ನಡೆಯುತ್ತಿದ್ದರೆ , ಅತ್ತ ಕಾಂಗ್ರೆಸ್ನ
ಶಾಸಕರೊಬ್ಬರು ಬೆಂಗಳೂರು ದಕ್ಷಿಣದಲ್ಲಿ ಹುಡುಗನಿಗೆ ಟಿಕೆಟ್ ಕೊಟ್ಟಿದಾರೆ  ಮತ್ತು
ವ್ಯಕ್ತಿ ಗೆಲ್ಲಲು ಬಹುದು  ಎಂದಿದ್ದಾರೆ , ಅದಕ್ಕೆ ಕಾರಣವಿಷ್ಟೇ ಬೆಂಗಳೂರು ದಕ್ಷಿಣವೆಂಬುದು ಭಾ ಜ ಪ ದ ಬಲಿಷ್ಠ ಕೋಟೆ ಆ ಸಂಘಟನೆಗೆ ಅನಂತ್ ಕುಮಾರ್ ಆ ಬಗೆಯಲ್ಲಿ ನೀರೆರೆದು ಪೋಷಿಸಿದ್ದಾರೆ, ಆದರೆ ತೇಜಸ್ವಿನಿ ಅನಂತ್ ಕುಮಾರರಿಗೆ ಟಿಕೆಟ್ ನಿರಾಕರಿಸಿದ್ದರಿಂದಾಗಿ, ಅನಂತ್ ಅಭಿಮಾನಿಗಳು ಶಸ್ತ್ರ ತ್ಯಾಗ ಮಾಡಿ ತಟಸ್ಥ ನಿಲುವು ತಾಳಿದರೆ ಕಾಂಗ್ರೆಸ್ ಸ್ವಲ್ಪ ಪ್ರಯತ್ನ ಪಟ್ಟರು ಕಮಲ ಮುದುಡೀತು  ಅದೇನೇ ಇರಲಿ ಕಾಂಗ್ರೆಸ್ ಈ ರೀತಿಯ ಅನೀರೀಕ್ಷಿತ ಬೆಳವಣಿಗೆಯನ್ನು ಎದುರು ನೋಡಿರಲಿಲ್ಲ , ಹಾಗೇನಾದರೂ ಕಾಂಗ್ರೆಸ್ ಈ ರೀತಿಯ ಬೆಳವಣಿಗೆ ಎದಿರು ನೋಡಿದ್ದರೆ ಬಿ ಕೆ ಹರಿಪ್ರಸಾದ್ ಅವರಿಗೆ ಟಿಕೆಟ್ ಒಲಿಯುತ್ತಿತೋ ? ಎಂಬುವುದು ಯಕ್ಷ ಪ್ರಶ್ನೆ ,ಹೀಗೆ ಪರ , ವಿರೋಧ , ಒಳ ಬೇಗುದಿಗಳ, ಒಳ ಹೊಡೆತಗಳ  ನಡುವೆ   ಮತದಾರನ ಒಡಲಾಳದಲ್ಲಿ ಏನೇನು ನಡೆಯುತ್ತಿದೆಎಂದು ತಿಳಿಯಬೇಕಾದರೆ  ಮೇ೨೩ ರ ವರೆಗೆ ಕಾಯಲೇ ಬೇಕು  , ಆದರೆ ಒಂದಂತೂ ಸತ್ಯ ತೇಜಸ್ವಿನಿ ಅನಂತ್ಕುಮಾರ್ ಅವರಿಗೆ ಲೋಕಸಭಾದ ಟಿಕೆಟ್ ನಿರಾಕರಿಸಿದ ನಂತರ ಅವರು ನಡೆದುಕೊಂಡರೀತಿಯಿದೆಯಲ್ಲ ಅದು ತೇಜಸ್ವಿನಿ ಅನಂತ್ ಕುಮಾರ್ ಅವರ ವ್ಯಕ್ತಿತ್ವವನ್ನು ಜನಮಾನಸದಲ್ಲಿ ಇನ್ನಷ್ಟು ಘಾಡವಾಗಿ, ಪ್ರಭುದ್ಧವಾಗಿ ಬೇರೂರಿಸಿದೆ ಎಂದರೆ ತಪ್ಪಾಗಲಾರದು , ಬಹುಶಹ ರಾಜಕೀಯವೆಂಬ ರಾಜಕೀಯ ಅಪಭ್ರoಮಶಗೊಳ್ಳುತ್ತಿರುವ ಈ ಹೊತ್ತಿನಲ್ಲಿ   ದೇಶ ಮೊದಲು , ಪಕ್ಷ ನಂತರ ವ್ಯಕ್ತಿ ಕೊನೆಯಲ್ಲಿ ಎಂದು ತತ್ವಸಿದ್ದಾಂತಕ್ಕೆ ಬೆಲೆ ಕೊಡುವ "ಅದಮ್ಯ ಚೇತನಗಳು" ಸುಲಭವಾಗಿ ಸಿಗಲಾರರು ... ನೀವೇನಂತೀರಿ


ಕಾರ್ತಿಕ್ ಎಸ್ ಬಾಪಟ್
Picture courtesy: Adamya Chetana website

Thursday, March 28, 2019

ಟೈಗರ್ ಹಿಲ್ ಟು ಬಾಲಾಕೋಟ್


Image result for operation vijay free kargil images

ಟೈಗರ್ ಹಿಲ್ ಟು ಬಾಲಾಕೋಟ್


ಅದು ಕಾರ್ಗಿಲ್ ಯುದ್ಧದ ದಿನಗಳು, ಈಗಿರುವಷ್ಟು ಮಾಧ್ಯಮಗಳ ಕಾರು ಬರು ಇರಲಿಲ್ಲ ಆದರೆ
ಸುದ್ದಿಗೆ ಯಾವುದೇ ಬರವಿರಲಿಲ್ಲ, ಪತ್ರಿಕೆ ತೆಗೆದರೆ ಕಾರ್ಗಿಲ್, ಟೀ ಕುಡಿಯಲು ಹೋದರೆ
ಕಾರ್ಗಿಲ್ , ಕಟಿಂಗ್ ಶಾಪ್ ಗೆ ಹೋದರೆ ಕಾರ್ಗಿಲ್ , ಆಟವಾಡಲು ಹೊರಟರೆ ಅಲ್ಲಿ
ಕಾರ್ಗಿಲ್ , ಶಾಲಾ ಕಾಲೇಜುಗಳಲ್ಲಿ ಕಾರ್ಗಿಲ್ ಹೀಗೆ ಎಲ್ಲೆಡೆ ಕಾರ್ಗಿಲ್ ಸುದ್ದಿ ,
ದೇಶ ಪ್ರೇಮದ ಒರತೆ ಇನ್ನಿಲದಂತೆ ಉಕ್ಕಿ ಹರಿಯುತಿತ್ತು,  ಇದೆಲ್ಲಕ್ಕೂ ಮಿಗಿಲಾಗಿ
ಅಕ್ಷರ ಬ್ರಹ್ಮ ಬೆಳೆಗೆರೆ ಖುದ್ದು ಕಾರ್ಗಿಲ್ನ ಯುದ್ಧ ಭೂಮಿಯಲ್ಲಿ ಕುಳಿತು ವರದಿ
ಮಾಡುತ್ತಿದ್ದರೆ ಯುದ್ಧದ ಇಂಚಿಂಚು ವರದಿಗೇನು ಬರ, ಅದಿರಲಿ  ನಾನು  ಮತ್ತು ನನ್ನ
ಸ್ನೇಹಿತರು ಆದಾಗ ತಾನೇ ಕಾಲೇಜು ಮೆಟ್ಟಿಲು ಹತ್ತಿದೆವು , ನಮಗೋ ತೀವ್ರ ಕೂತುಹಲ
ಯುದ್ಧ ಪುಸ್ತಕಗಳನ್ನು ಒನ್ ಸ್ಟ್ರೋಕ್ ನಲ್ಲಿ ಓದಿ ಮುಗಿಸಿದ್ದೆವು , ದಾರಿಯಲ್ಲಿ
ಸಾಲು ಸಾಲು ಸೈನ್ಯದ ವಾಹನಗಳು ಹೋಗುತ್ತಿದ್ದರೆ ನಮ್ಮ ಸ್ನೇಹಿತರ ದಂಡು ವಂದೇ ಮಾತರಂ,
ಜೈ ಹಿಂದ್ ಎಂದು ಕೂಗುತಿದ್ದವು , ಅದರಲ್ಲಿ ನನ್ನ ಸ್ನೇಹಿತನೊಬ್ಬ ಒಂದು ಪ್ಯಾಕೆಟ್
ಬ್ರೆಡ್ , ಬಿಸ್ಕತ್ ಹೀಗೆ ಬೇಕರಿಗೆ ಹೋಗಿ ದಂಡಿಯಾಗಿ ತಿಂಡಿ ತಿನಿಸನ್ನು ತಂದು
ಸೈನಿಕರನ್ನು ಕರೆದು ಕೊಂಡು ಹೋಗುವ ವಾಹನಗಳ ಬೆನ್ನು ಹತ್ತಿ ಅವರಿಗೆ ಆ ತಿಂಡಿ
ತಿನಿಸುಗಳನ್ನು ಕೊಡಲು ಪ್ರಯತ್ನಿಸುತ್ತಿದ್ದನು , ಅವರೋ ನಹಿ ಚಾಹಿಯೇ ರೆಹ್ನ್ ದೋ
ಅಂದರೆ , ಕೇಳುವರ್ಯಾರು ಜನರ ಪ್ರೀತಿ ಆದರದ ಮೇಲೆ ಸೈನಿಕರು ಮೂಕ ವಿಸ್ಮಿತ ರಾಗಿದ್ದರು
, ಅದೇ ಯುದ್ಧೋನ್ಮಾದ  ಅದಕ್ಕಿಂತಲೂ ಹೆಚ್ಚು ಕಿಚ್ಚು ಇಂದು ಇಪ್ಪತ್ತು ವರ್ಷಗಳ ನಂತರ
ಮರುಕಳಿಸಿದೆ ಇಪ್ಪತ್ತು ವರುಷಗಳ ಹಿಂದೆಯೂ ಇದೇ ಉಗ್ರಗಾಮಿ ಮತ್ತು ಅದೇ ಪಾಪಿ
ಪಾಕಿಸ್ತಾನದ ವಿರುದ್ಧ ಹೋರಾಡಿದ್ದರು ಇಂದಿಗೂ ಈ ವಿಷಯ ತಹ ಬಂದಿಗೆ
ಬಂದಿಲ್ಲವೆಂಬುವುದು ಬಹು ದೊಡ್ಡ ವಿಪರ್ಯಾಸ ,

ಹಾಗೆ ನೋಡಿದರೆ ಅಂದು ನಡೆದ ಕಾರ್ಗಿಲ್ ಕದನಕ್ಕೂ  ಇಂದಿನ ಪುಲ್ವಾಮಾ ದಾಳಿ  ಹಾಗು ತದ
ನಂತರದ ಬಾಲಕೋಟ್ ದಾಳಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಲವೊಂದು ಬದಲಾವಣೆಗಳಾಗಿವೆ
,ಅಂದು ಕಾಲ್ಕೆರೆದು ತಂಟೆ ಮಾಡಿ ಜಗಳಕ್ಕೆ ಬಂದವರು ಪಾಕಿಗಳೇ ಅಂದರೆ ಕಾರ್ಗಿಲ್
ಯುದ್ಧದ  ಸಮಯದಲ್ಲಿ ಪಾಕಿಸ್ತಾನದ ಸೈನಿಕರೇ ಕಾರ್ಗಿಲ್ನ ಆಯಾ ಕಟ್ಟಿನ ಜಾಗದಲ್ಲಿ
ಸದ್ದಿಲದೆ ಬಂದು ಕುಳಿತಿದ್ದರು , ಮೊದಲಿಗೆ ಬಹುಶ ಇವರು ಮುಜಾಹಿದ್ದೀನ್ಗಳಿರಬೇಕು
ಎಂದು ಭಾರತ ಭಾವಿಸಿತ್ತು , ಆದರೆ ಅಷ್ಟೇ ವೇಗವಾಗಿ ಗೊತ್ತಾದ ಸಂಗತಿಯೆಂದರೆ ಅವರು
ಮುಜಾಹಿದ್ದೀನ್ಗಗಳಲ್ಲ ಆದರೆ ಪಾಕಿ ಸೈನಿಕರು ಎಂದು , ಇವರನ್ನು ಹಿಮ್ಮೆಟಿಸಲು
ಆಪರೇಷನ್ ವಿಜಯ್ ಎಂಬ ಸಂಕಲ್ಪ ತೊಟ್ಟು ಭಾರತ ಯುದ್ಧಕ್ಕೆ ನಿಂತಿತು ಮತ್ತು ಸರಿ
ಸುಮಾರು ಎರಡು ತಿಂಗಳುಗಳ ಯುದ್ಧದ ನಂತರ ಭಾರತ ವಿಜಯೋತ್ಸವವನ್ನು ಆಚರಿಸಿತು , ಇಲ್ಲಿ
ಗಮನಿಸ ಬೇಕಾದ ಸಂಗತಿಯೆಂದರೆ ಪ್ಯಾರಾ ಮಿಲಿಟರಿ ಫೋರ್ಸ್ , ನೇವಿ, ಹಾಗೂ ಇಂಡಿಯನ್ ಏರ್
ಫೋರ್ಸ್ ಎಲ್ಲವು ಯುದ್ದದಲಿ ತೊಡಗಿದ್ದರು ಪ್ರಮುಖವಾಗಿ ಪ್ಯಾರಾ ಮಿಲಿಟರಿ ಫೋರ್ಸ್
ಯುದ್ಧದಲ್ಲಿ ಬಳಸಲ್ಪಟ್ಟಿತ್ತು , ತದ ನಂತರ ನೇವಿ ಆಪರೇಷನ್ ತಲವಾರ್ ಮೂಲಕ ಕರಾಚಿ
ಬಂದರನ್ನು ಕಟ್ಟಿ ಹಾಕಿತ್ತು, ಕೊನೆಯ ಹಂತದಲ್ಲಿ ಇಂಡಿಯನ್  ಏರ್ ಫೋರ್ಸ್ ಕೈ
ಜೋಡಿಸಿತು , ಆದರೆ IAF ಭಾರತದ ಗಡಿ ದಾಟಿ ಹೋಗಿರಲಿಲ್ಲ ಆದರೆ ಭಾರತದ ಗಾಡಿಯಲ್ಲೇ
ಇದ್ದು ಕೊಂಡು ಬಾಂಬರ್ಗಳನ್ನು ಲಾಂಚ್ ಮಾಡಿತ್ತು , ಹೀಗೆ ಸತತ ಎರಡು ತಿಂಗಳ ಹೋರಾಟದ
ನಂತರ ಟೈಗರ್ ಹಿಲ್ಸ್ ನ ಮೇಲೆ ಭಾರತದ ತ್ರಿವರ್ಣ ಧ್ವಜ ಮತ್ತೆ ರಾರಾಜಿಸಿತು ,
ಅದಕ್ಕೂ ಮುಂಚೆ ಎರಡು ಬಾರಿ ಯುದ್ಧದಲ್ಲಿ ಸೋತ ಪಾಕಿಸ್ತಾನ ಭುದ್ದಿ ಕಲಿತಿರಲಿಲ್ಲ
ಮತ್ತೆ ಕಾಶ್ಮೀರ ವಿಷಯವನ್ನು ಎತ್ತಿ ಕೊಂಡು ಕಾರ್ಗಿಲ್ ಕದನಕ್ಕೆ ಅಣಿಯಾಗಿತ್ತು ,
ಕಾರ್ಗಿಲ್ ಕದನದಲ್ಲಿ ಇನ್ನಿಲದಂತೆ ಹೊಡೆತ ತಿಂದ ಪಾಕ್ ಇಲ್ಲಿಯವರೆಗೂ ತನ್ನ
ಚಾಳಿಯನ್ನು ಬಿಟ್ಟಿಲ್ಲ ಆದರೆ ಸತತ ಸೋಲುಗಳಿಂದ ಪಾಕಿಸ್ತಾನ ಕಂಡು ಕೊಂಡಿದ್ದೇನೆಂದರೆ
, ಅಜಾನುಬಾಹು ಭಾರತವನ್ನು ನೇರ ನೇರವಾಗಿ ಯುದ್ದದಲಿ ನಿಂತು ಹಣಿಯಲು ಸಾಧ್ಯವಿಲ್ಲ ,
ಆದ್ದರಿಂದ ಉಗ್ರಗಾಮಿ ಸಂಘಟನೆಗಳು ಹಾಗು ಸ್ಲೀಪರ್ ಸೆಲ್ಗಳು ಭಾರತಾದ್ಯಂತ ಬೇರೂರುವಂತೆ
ಮಾಡುವುದು , ಹಾಗು ಭಾರತವೆಂಬ ಅಜಾನುಬಾಹುವನ್ನು ಚಾಕುವಿನಿಂದ ಚುಚ್ಚಿ ಚುಚ್ಚಿ
ಬ್ಲೀಡ್ ಮಾಡುವುದು, ಹೀಗೆ ಪಾಕಿಸ್ತಾನವೆಂಬ ಪಾಪಿಸ್ತಾನ ಭಾರತವನ್ನು ಅಧೀನ ಗೊಳಿಸುವ
ಒಂದಂಶದ ಕಾರ್ಯಕ್ರಮವನ್ನು ಸ್ವಾತಂತ್ರಾನಂತರ ಹಮ್ಮಿಕೊಂಡು ಬರುತ್ತಲೆ ಇದೇ ಆದರೆ ಇಂದು
ಭಾರತ ಬದಲಾಗಿದೆ ಪತ್ತರ್ ಕ ಜವಾಬ್ ಪತ್ತರ್ ಸೆ ಹಿ ಎಂದು ಕುಳಿತಿಲ್ಲ , ಆದರೆ ಪತ್ತರ್
ಕ ಜವಾಬ್ ಬಂದೂಕ್ ಅವರ್ ಬಾರೂದ್ ಸೆ ಎಂದು ಮೇಲೆರಗುತ್ತಿದೆ , ಇದನ್ನು ನೀವು
ಗಮನಿಸಬೇಕಾದರೆ ಕಾರ್ಗಿಲ್ ಯುದ್ಧದಲ್ಲಿ IAF  (ಇಂಡಿಯನ್ ಏರ್ ಫೋರ್ಸ್) ಅನ್ನು
ಸೀಮಿತವಾಗಿ ಅಂದರೆ ನಮ್ಮ ಗಡಿ ಭಾಗದಲ್ಲಿ ಇದ್ದು ಕೊಂಡೆ ಪಾಪಿಸ್ತಾನದ ಮೇಲೆ ಮದ್ದು
ಗುಂಡುಗಳನ್ನು ಲಾಂಚ್ ಮಾಡಲು ಬಳಸಲಾಗಿತ್ತು ಆದರೆ ಇಂದು ನೋಡಿ ಭಾಲ್ಕೋಟ್ನ ಉಗ್ರ ದಮನ
ಕಾರ್ಯಾಚರಣೆಯಲ್ಲಿ IAF ದೇ ಪ್ರಮುಖ ಪಾತ್ರ , ಮತ್ತು ತದ ನಂತರ ರಾಜತಾಂತ್ರಿಕವಾಗಿ ಈ
ದಾಳಿಗೆ ಚೀನಾ ಒಳಗಂಡಂತೆ ಪ್ರಪಂಚಾದ್ಯಂತ ಭಾರತದ ಪರ ನಿಲುವು ಮೂಡಿ ಬರುವಂತೆ
ನೋಡಿಕೊಂಡಿದ್ದು ಮತ್ತೊಂದು ಪ್ರಶಂಸಾರ್ಹ ಹೆಜ್ಜೆಯೇ ಸರಿ , ಹೀಗೆ ಭಾರತ ದಿಟ್ಟ
ಹೆಜ್ಜೆಯನ್ನು ಇಡುತಿದ್ದರೆ ಕೆಲಸಕೆ ಬಾರದ ಟೀಕೆಗಳಿಗೆ ಕಡಿಮೆಯೇನಿಲ್ಲ ಕೆಲವು ಪಕ್ಷದ
ಮುಖಂಡರು ಸರ್ಕಾರ ನಮ್ಮನು ಕರೆದು ಮಾತನಾಡಲಿಲ್ಲ ದಾಳಿ ಮಾಡುವ ಮುಂಚೆ ನಮ್ಮನು
ಕೇಳಲಿಲ್ಲ ಎಂದು ಡಂಗುರ ಸಾರುತ್ತಿವೆ , ನಿಮ್ಮನ್ನು ಕೇಳುವದೇನು ಸ್ವಾಮಿ ಆನ್ಲೈನ್
ನಲ್ಲಿ ಒಂದು ಒಪೀನಿಯನ್ ಪೋಲ್ ಮಾಡಿಸಿಬಿಡಿ  "ಶುಡ್ ವೀ ಅಟ್ಯಾಕ್ ಆನ್ ಭಾಲ್ಕೋಟ್"
ಓರ್ ನಾಟ್ ಎಂದು , ಕಡೆಯ ಪಕ್ಷ ಭಾರತದ ಅಖಂಡತೆ ಮತ್ತು ಸುರಕ್ಷತೆ ವಿಷಯ ಬಂದಾಗ
ನೀವೆಲ್ಲರೂ ಒಟ್ಟಾಗಿ ನಿಲ್ಲ ಬೇಕಲ್ಲವೇ ? ಅದು ಬಿಟ್ಟು ಒಬ್ಬರ ಕಾಲನ್ನು ಒಬ್ಬರು
ಎಳೆದು ನಿಮ್ಮ ನಿಮ್ಮನ್ನೇ ಕೆಡವಲು ಕುಳಿತರೆ ಹೇಗೆ ಈಗ ನಾವು ಕೆಡವ ಬೇಕಾಗಿರುವುದು
ಆಂತರಿಕ ಶತ್ರುಗಳನ್ನು ಮತ್ತು ಬಾಹ್ಯ ಶತ್ರುಗಳನ್ನು ಎಂಬುದು ಯಾರು ಮರೆಯಬಾರದು.

ಹೀಗೆ ಭಾರತ ನವ ಭಾರತವಾಗಿ ದಿಟ್ಟ ಹೆಜ್ಜೆಗಳನ್ನು ಮತ್ತು ದಿಟ್ಟ ನಿರ್ಧಾರವನ್ನು
ತೆಗೆದುಕೊಳ್ಳುತ್ತಾಳೆ ಇದೇ , ಮತ್ತು ಮೊನ್ನೆಯ ಭಾಲ್ಕೋಟ್ ಉಗ್ರ ದಾಳಿ ನಮ್ಮ ಸೈನ್ಯವೇ
ಮಾಡಿರಬಹುದು ಹಾಗು ಅದರ ಸಂಪೂರ್ಣ ಶ್ರೇಯ ನಮ್ಮ ಭಾರತದ ಸೈನ್ಯಕ್ಕೆ ಸಲ್ಲ ಬೇಕು
ಇದರಲ್ಲಿ ಎರಡು ಮಾತಿಲ್ಲ , ಆದರೆ ಇದರ ಶ್ರೇಯಸ್ಸನ್ನು ಮೋದಿ ಸರ್ಕಾರಕ್ಕೂ ನಾವು
ಕೊಡಲೇಬೇಕು ಕಾರಣವಿಷ್ಟೇ " when it comes to making tough decision
political will matters a lot " ಹೀಗೆ ದೇಶಕ್ಕೆ ದೇಶವೇ ಪ್ರಧಾನಿಯ ಬೆನ್ನಿಗೆ
ನಿಂತಿರುವಾಗ , ತಮ್ಮ ಬೇಳೆ ಬೇಯಿಸಿಕೊಳ್ಳಲು ನಮಗೆ ಏರ್ ಸ್ಟ್ರೈಕ್ ನ ಪ್ರೂಫ್ ಕೊಡಿ ,
ಮತ್ತೊಂದು ಕೊಡಿ ಎಂದರೆ ಪ್ರಜೆಗಳು ಸುಮ್ಮನಿರುವರೇ , ಇನ್ನಾದರೂ ಇಂತಹ ಖುಹಕ ನುಡಿ
ಮುತ್ತುಗಳನ್ನಾಡದೆ ದೇಶ ಕಟ್ಟಲು ಮುಂದಾದರೆ ಇರುವ ಅರೆ ಕಾಸು ಮರ್ಯಾದೆ ಉಳಿದೀತು.

ಅದಿರಲಿ ಯಾರು ಏನೇ ಮಾತಾಡಲಿ ಭಾರತದ ಸೌರ್ವ ಭಾವಮತ್ವಕ್ಕೆ ಮತ್ತು ದೇಶ ಪ್ರೇಮಕ್ಕೆ
ಎಂದೆಂದಿಗೂ ಧಕ್ಕೆಯಾಗಲಾರದು ಎಂದು " ವಿಂಗ್ ಕಮ್ಯಾಂಡರ್ ಅಭಿನಂದನ್ "  ರಂತಹ ಯೋಧರು
ಮತ್ತೆ ಮತ್ತೆ ನೆನಪಿಸುತ್ತಿರುತ್ತಾರೆ,   ವಿಂಗ್ ಕಮ್ಯಾಂಡರ್ ಅಭಿನಂದನ್ ಒಂದಿಡೀ
ತಲೆಮಾರಿಗೆ ಇಂದು ಸ್ಪೂರ್ತಿಯಾಗಿದ್ದಾರೆ , ಹಾಗು ಮುಂದೆ ಅದೆಷ್ಟೋ ತಲೆಮಾರಿಗೆ
ಸ್ಪೂರ್ತಿಯಾಗಲಿದ್ದಾರೆ, ಅದು ಭಾರತದ ಮಣ್ಣಿನ ಗುಣ ಆದ್ದರಿಂದಲೇ ಅಲ್ಲವೇ ಅಟಲ್ ಜಿ
ಹೇಳಿದ್ದು ವಂದನ್ ಕಿ ಧರ್ತಿ ಹೇ ಅಭಿನಂಧನ್ ಕಿ ಧರ್ತಿ ಹೇ ಎಂದು... ಕೊನೆಯದಾಗಿ
ಕೇಳಿಬರುತ್ತಿರುವ ಜನಾಭಿಪ್ರಾಯವೆಂದರೆ , ನೀವು ಮೋದಿ ಸರ್ಕಾರದ ಯೋಜನೆಗಳನ್ನು ಹೆಜ್ಜೆ
ಹೆಜ್ಜೆ ಗೆ ಪ್ರಶ್ನಿಸಿ ಉತ್ತರ ಕಂಡು ಕೊಳ್ಳಿ ಅದಕ್ಕೆ ತಕರಾರಿಲ್ಲ ಆದರೆ ಭಾರತದ
ಅಸ್ತಿತ್ವಕ್ಕೆ , ಭಾರತದ ಭದ್ರತೆಗೆ ಧಕ್ಕೆ ಯುಂಟಾದಾಗ ಸ್ಥಾಪಿತ ಸರ್ಕಾರದೊಂದಿಗೆ
ಹೆಜ್ಜೆ ಹಾಕಿ ಎಂದು



ಜೈ ಹಿಂದ್


ಕಾರ್ತಿಕ್ ಯಸ್ ಬಾಪಟ್