Monday, April 8, 2019

ಇನ್ನೆಷ್ಟು ದಿನ ಗರೀಬಿ ಹಟಾವೋ ?


ಅದು ಐದನೇ ಪಂಚ ವಾರ್ಷಿಕ ಯೋಜನೆ, ಆ ಯೋಜನೆಯಲ್ಲೆಯೇ ಕಾಂಗ್ರೆಸ್ ಸರ್ಕಾರ ಗರೀಬಿ ಹಟಾವೋ (ರಿಮೂವಲ್ of ಪಾವರ್ಟಿ) ಎಂಬ ಘೋಷ ವಾಕ್ಯವನ್ನು ಮೊಳಗಿಸಿತ್ತು, ಬಡತನ ನಿರ್ಮೂಲನೆಯನ್ನೇ ಐದನೇ ಪಂಚವಾರ್ಷಿಕ ಯೋಜನೆಯ ಮೂಲ ಧ್ಯೇಯೋದ್ದೇಶವನ್ನಾಗಿ ಹಮ್ಮಿಕೊಂಡು ಕಾರ್ಯಪ್ರವರ್ತವಾಗಿತ್ತು , ಆದರೆ ತದ ನಂತರ ತುರ್ತುಪರಿಸ್ಥಿತಿಯ ಹೊಡೆತಕ್ಕೆ ಸಿಕ್ಕಿ ಕಾಂಗ್ರೆಸ್ ರಾಜ ಗಾದಿ ಬಿಡಬೇಕಾಗಿ ಬಂತು ಆದ್ದರಿಂದ ಗರೀಬಿ ಹಟಾವೋ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿಲ್ಲ , ಆದರೆ ತುರ್ತು ಪರಿಸ್ಥಿತಿಯ ಛಾಯೆಯಿಂದ ಕೆಡವಿಕೊಂಡು ಎದ್ದು ಬಂದ ಕಾಂಗ್ರೆಸ್ 1980 ರಲ್ಲಿ ಮತ್ತೆ ಗರೀಬಿ ಹಟಾವೋ ಎಂಬ ರಣ ಕಹಳೆ ಮೊಳಗಿಸಿತು, ಅಂದರೆ ಅದಾಗಿ ಇಂದಿಗೆ ಸರಿ ಸುಮಾರು 29 ವರ್ಷಗಳೇ ಆದವು , 1980  ರಿಂದ ಇಲ್ಲಿಯವರೆಗೆ ಈ 29 ವರ್ಷಗಳಲ್ಲಿ ನೋಡ ಹೊರಟರೆ ಒಟ್ಟಾರೆಯಾಗಿ ಕಾಂಗ್ರೆಸ್ ಆಡಳಿತ ನಡೆಸಿದ್ದೆ ಹೆಚ್ಚು, ಇದೆಲ್ಲ ಇಂದು ಏಕೆ ನೆನಪಾಯಿತೆಂದರೆ ಕಾಂಗ್ರೆಸ್ ಪಕ್ಷ ಬಿಡುಗಡೆ ಗೊಳಿಸಿದ ಚುನಾವಣಾ ಪ್ರಣಾಳಿಕೆ , ಅಂದಿಗೂ ಇಂದಿಗೂ ಏನು ವ್ಯತ್ಯಾಸ ಎಂದು ನೋಡಲು ಹೊರಟರೆ ಮತ್ತದೇ ರಾಗ ಅದೇ ಹಾಡು ಗರೀಬಿ ಹಟಾವೋ ಎಂಬುದನ್ನೇ ಈಗ "ನ್ಯಾಯ" ಎಂಬ ಧ್ಯೇಯ ವಾಕ್ಯದೊಂದಿಗೆ ಹೊರ ತಂದಿದೆ , ಒಂದು ರೀತಿಯಲ್ಲಿ ಓಲ್ಡ್ ವೈನ್ ಇನ್ ನ್ಯೂ ಬೋಟೊಲ್ ಎಂದರೆ ತಪ್ಪಾಗಲಾರದು , ಇತ್ತೀಚಿನ ದಿನಗಳಲಲ್ಲಿ ಚುನಾವಣಾ ಪ್ರಣಾಳಿಕೆಗಳು ತಮ್ಮ ಮಹತ್ವವನ್ನೇ ಕಳೆದುಕೊಂಡಿದೆ ಎಂಬುದು ಎಲ್ಲರು ಒಪ್ಪುವ ವಿಷಯ , ಏಕೆಂದರೆ ಎಲ್ಲ ಪಕ್ಷಗಳು ಗದ್ದುಗೆ ಏರಿದ ಮೇಲೆ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲ ಅಂಶಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ, ಆ ನಿಟ್ಟಿನಲ್ಲಿ ನೋಡ ಹೋದರೆ ಇತ್ತೀಚಿಗೆ ಸ್ಥಾಪನೆಗೊಂಡ ಉಪೇಂದ್ರ ನೇತ್ರದ್ವದ UPP ಯೇ ಪರವಾಗಿಲ್ಲ , ನಾವು ಚುನಾವಣಾ ಪ್ರಣಾಳಿಕೆಯನ್ನು ಹೊರತರುವುದಿಲ್ಲ ಎಂದಿದೆ ಅದಲ್ಲದೆ ಜನರ ಕಷ್ಟ ಕೋಟಲೆಗಳನ್ನು ಜನರಿಂದಲೇ ಕೇಳಿ ನಂತರ ಅದಕ್ಕೆ ಉಪಾಯವನ್ನು ಕಂಡು ಹಿಡಿದು ಅವುಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುತ್ತೇವೆಂದು ಹೇಳುತ್ತಿದೆ UPP . ಉಪೇಂದ್ರ ಮಾಧ್ಯಮದವರೊಂದಿಗೆ ಮಾತಾಡುವಾಗ ನಮಗೆ ryaali ಗಳಲ್ಲಿ ಹಾಗು ರೋಡ್ ಶೋ ಗಳಲ್ಲಿ ನಂಬಿಕೆಯಿಲ್ಲ ಎಂದು ಹೇಳುತ್ತಾರೆ , ಮೇಲ್ನೋಟಕ್ಕೆ ಈ ನಿಲುವು ಮೂರ್ಖತನದ್ದು ಎಂದು ಕಂಡು ಬಂದರು ಅವರ ತರ್ಕದಲ್ಲಿ ಒಪ್ಪಿಕೊಳ್ಳುವ ಅಂಶವಿದೆ ಎಂದು ನೀವೇ ಮನಗಾಣಬಹುದು. , ryaali ರಹಿತ ಮತ್ತು ರೋಡ್ ಶೋ ರಹಿತ ಚುನಾವಣೆಗಳನ್ನು ನಾವು ಊಹಿಸಲು ಅಸಾಧ್ಯ ಏಕೆಂದರೆ ಚುನಾವಣೆಗಳೆಂಬುದು ಪ್ರಜಾತಂತ್ರದ ಬಹುದೊಡ್ಡ ಹಬ್ಬಗಳಲೊಂದು , ಆದರೆ ಈ ryaali ಗಳು ಮತ್ತು ರೋಡ್ ಷೋಗಳು ಇತ್ತೀಚಿನ ದಿನಗಳಲ್ಲಿ ತನ್ನ ಪ್ರಸ್ತುತತೆಯನ್ನೇ ಕಳೆದುಕೊಂಡಿದೆ , ಹೀಗೆ ತನ್ನ ಪ್ರಸ್ತುತತೆಯನ್ನು ಕಳೆದು ಕೊಳ್ಳಲು ಕಾರಣವೇನೆಂದು ಬಿಡಿಸಿ ಹೇಳುವು ಅಗತ್ಯವಿಲ್ಲ , ryaali ಗಳ ಮತ್ತು ರೋಡ್ ಶೋ ಗಳನ್ನೂ  ಯಶಸ್ವಿಯಾಗಿ ಮಾಡುವ ವೃತ್ತಿಪರ ಗುತ್ತಿಗೆದಾರರೇ ಹುಟ್ಟಿಕೊಂಡಿದ್ದಾರೆ ಎಂದರೆ ನೀವೇ ಊಹಿಸಿ ಒಂದು ರೋಡ್ ಶೋ ನಡೆಸಲು ಎಷ್ಟು ಹಣ ಖರ್ಚಾದೀತೆಂದು.

ಅದಿರಲಿ ಮತ್ತೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶಗಳಿಗೆ ಬರುವುದಾದರೆ "ನ್ಯಾಯ" ಎಂಬ ಪ್ರಮುಖ ಅಂಶ ಎಲ್ಲೆಡೆ ಸದ್ದು ಮಾಡುತ್ತಿದೆ , ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ ತಿಂಗಳಿಗೆ ಆರು ಸಾವಿರ ಮೀರದಂತೆ , ವರ್ಷಕ್ಕೆ 72  ಸಾವಿರ ರೂಪಾಯಿನ್ಗಳನ್ನು ದೇಶದಲ್ಲಿಯ 20 % ರಷ್ಟುಬಡ ಕುಟುಂಬಗಳಿಗೆ ಕೊಡುವುದಾಗಿ ಹೇಳಿಕೊಂಡಿದೆ , ಇದು ಇಡೀ ಭಾರತದಲ್ಲಿಯೇ ಬಹು ಚರ್ಚಿತ ವಿಷಯ , ಈ ವಿಷಯದ ಮೇಲೆ ಕಾಂಗ್ರೆಸ್ ಕೆಲವೊಂದಿಷ್ಟು ವೋಟುಗಳನ್ನು ಬಾಚುವ ತಂತ್ರ ಮುಂದಿಡುತ್ತಿದೆ , ಆದರೆ ಒಂದಂಶವನ್ನು ಗಮನಿಸಬೇಕು " ಸಮರ್ಪಕ ಅಭಿವೃದ್ಧಿಯ" ಬಗ್ಗೆ ಮಾತನಾಡಬೇಕಾದ ರಾಜಕೀಯ ಪಕ್ಷಗಳು ಮತ್ತದೇ ಓಲಯ್ಕೆಯ ರಾಜಕಾರಣವನ್ನು ಮಾಡುತ್ತಿದೆ , ಸಮಪ್ರಕವಾಗಿ ಎಲ್ಲರನ್ನೊಳಗೊಂಡ ಅಭಿವೃದ್ಧಿಯಾದರೆ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಒಂದಿಲ್ಲೊಂದು ರೀತಿಯಲ್ಲಿ ಇದರ ಉಪಯೋಗಗಳು ತಲುಪುತ್ತವೆ , ಆದರೆ ನ್ಯಾಯ ನಂತಹ ಯೋಜನೆಗಳು ಕೇವಲ ಆ ಒಂದು ಗುಂಪಿಗೆ ಮಾತ್ರ ಸೀಮಿತವಾಗಿ ಅದು ಅಸಮರ್ಪಕ ರೂಪದಲ್ಲಿ ದೇಶದ ಬೆಳವಣಿಗೆಯನ್ನು ಕುಂಠಿತಗೊಳಿಸುವ ಅಪಾಯವಿದೆ, ಹಾಗೆ ನೋಡಿದರೆ ಕಾಂಗ್ರೆಸ್ ಸರ್ಕಾರವೇ ತಂದಂತಹ "ಮಹತ್ಮಾ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಸ್ಕೀಮ್" ಒಂದು ಅತ್ಯುತ್ತಮ ಯೋಜನೆ ಎನ್ನುವುದರಲ್ಲಿ ಎರಡು ಮಾತಿಲ್ಲ , ಕಾರಣವಿಷ್ಟೇ ಅಲ್ಲಿ ನಿರುದ್ಯೋಗಿಗೆ ಕೈ ತುಂಬ ಕೆಲಸ ಕೊಟ್ಟು ಅವನಿಗೆ ಸಂಭಾವನೆಯು ಸಿಗುತಿತ್ತು ಇಲ್ಲಿ ಯಾರು ಮೈಗಳ್ಳರಾಗುವ ಪ್ರಮೇಯ ಬರುವುದಿಲ್ಲ ಆದರೆ ನ್ಯಾಯ ನಂತಹ ಯೋಜನೆಗಳಿಂದಾಗಿ ದುಡಿಯುವ ಕೈಗಳಿಗೆ ಮುಷ್ಕರ ಹೂಡಲು ತಾನೇ ಹಾಸಿಗೆ ಹಾಸಿ ಕೊಟ್ಟಂತಾಗುತ್ತದೆ.

ಹೀಗೆ ಇದು ನ್ಯಾಯ ನ ಕಥೆ ಯಾದರೆ ಸುಮ್ಮನಿರಲಾರದೆ ಹುಳ ಬಿಟ್ಕೊಂಡ್ರು ಎಂಬಂತೆ ಸೆಕ್ಷನ್ 124 A  ಅನ್ನು ಕಿತ್ತು ಹಾಕುವ ಬಗ್ಗೆಯೂ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ , ಅಂದರೆ ಇನ್ನುಮುಂದೆ ಯಾರಾದರೂ ರಾಜದ್ರೋಹವೆಸಗಿದರೆ ರಾಜದ್ರೋಹದಡಿಯಲ್ಲಿ ಯಾರನ್ನು ಬಂಧಿಸುವಂತಿಲ್ಲ , 124 A , ನ ನಂತರ ಮತ್ತೊಂದು ಉಲ್ಲೇಖಿಸಿಲ್ಪಟ್ಟ ಅಂಶವೆಂದರೆ  armed force special act 1958 ಅನ್ನು ತಿದ್ದು ಪಡಿ ಮಾಡಲಾಗುವುದೆಂದು ಅಂದರೆ ಸಶಸ್ತ್ರ ಪಡೆಗೆ ಕೆಲವು ವಿಶೇಷ ಅಧಿಕಾರವನ್ನು ಸರ್ಕಾರ ಕಾನೂನಿನ ಅಡಿಯಲ್ಲಿ ಕಲ್ಪಿಸಿಕೊಟ್ಟಿದೆ, ಗಮನಾರ್ಹ ಅಶವೆಂದರೆ ಜಮ್ಮು ಕಾಶ್ಮೀರದಲ್ಲಿ ಹಾಗು ಕೆಲವು ಆಯ್ದ ರಾಜ್ಯ್ಗಳಲ್ಲಿ AFSA ಜಾರಿಯಲ್ಲಿದೆ, ಹೀಗೆ ಇಂತಹ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ಎತ್ತಿಕೊಂಡು ಕಾಂಗ್ರೆಸ್ ತಾನಾಗಿಯೇ ವಿರೋಧ ಪಕ್ಷಗಳಿಗೆ ಆಹಾರವಾಗಿದೆ , ನ್ಯಾಯ್ ನಂತಹ ಕಾರ್ಯಕ್ರಮಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಿ ಕಂಡು ಬಂದರು ಇನ್ನುಳಿದ ಸೂಕ್ಷ್ಮ ವಿಷಯಗಳನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದರಿಂದ ಚೌಕಿದಾರರಿಗೆ ಕಾಂಗ್ರೆಸ್ ತನ್ನ ವಿರುದ್ಧ ಹೋರಾಡಲು ತಾನೇ ಅಸ್ತ್ರವನ್ನು ಕೊಟ್ಟಂತಾಗಿದೆ , ಇದೆಲ್ಲದರ ನಡುವೆ ಭಾ ಜ ಪ ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ , ಆದರೆ ಮತದಾರ ಪ್ರಣಾಳಿಕೆಗಳ ಬೆನ್ನೇರಿ ಮತದಾನ ಮಾಡುವನೆಂದು ಕೊಂಡರೆ ಅದು ಶುದ್ಧ ಮೂರ್ಖತನ ಏಕೆಂದರೆ ರಾಜಕೀಯ ಪಕ್ಷದ ಪ್ರಣಾಳಿಕೆಗಳು ಅಪ್ರಸ್ತುತವಾಗಿ ದಶಕವೇ ಕಳೆದು ಹೋಗಿದೆ.


ಕಾರ್ತಿಕ್ ಎಸ್ ಬಾಪಟ್

Picture Courtesy : Shutterstock.com

Friday, April 5, 2019

ದೇಶ ಮೊದಲು , ಪಕ್ಷ ನಂತರ ವ್ಯಕ್ತಿ ಕೊನೆಯಲ್ಲಿ ಎಂದು ತತ್ವಸಿದ್ದಾಂತಕ್ಕೆ ಬೆಲೆ ಕೊಡುವ "ಅದಮ್ಯ ಚೇತನಗಳು" ಸುಲಭವಾಗಿ ಸಿಗಲಾರರು ... ನೀವೇನಂತೀರಿ



ಅನ್ನ, ಅಕ್ಷರ ಅರೋಗ್ಯ ಎಂದು ಕಂಕಣ ತೊಟ್ಟು ಅವಿರತವಾಗಿ ಸಮಾಜಸೇವೆಯಲ್ಲಿ ತೊಡಗಿರುವ ಅದಮ್ಯ ಚೇತನದ ರೂವಾರಿ "Dr ತೇಜಸ್ವಿನಿ ಅನಂತ್ ಕುಮಾರ್" ರವರಿಗೆ ಟಿಕೆಟ್ ನಿರಾಕರಣೆ ಇದು ಊಹಿಸಲು ಅಸಾಧ್ಯವಾದ ವಿಷಯ ಆದರೆ ಇದು ವಾಸ್ತವ. Dr ತೇಜಸ್ವಿನಿ ಅನಂತ್ ಕುಮಾರ್ ಎಂಬ ಹೆಸರು ಬೆಂಗಳೂರು ದಕ್ಷಿಣವಷ್ಟೇ ಅಲ್ಲ ಇಡೀ ಕರ್ನಾಟಕಕ್ಕೆ ಚಿರಪರಿಚಿತ, ಮೇಲ್ನೋಟಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರು ಇಷ್ಟೊಂದು ಚಿರಪರಿಚಿತವಾಗಿರಲು ಕಾರಣ ಅವರ ಪತಿ ಅನಂತ್ ಕುಮಾರ್  ಎಂದು ಕಂಡು ಬಂದರು, ವಾಸ್ತವದಲ್ಲಿ ಈ ವಾದ ಪೊಳ್ಳು ಎಂದು ಮನಗಾಣಲು ಯಾರಿಗೂ ಹೆಚ್ಚು ಸಮಯ ಹಿಡಿಯುವುದಿಲ್ಲ ಏಕೆಂದರೆ ತೇಜಸ್ವಿನಿ ಅನಂತ್ ಕುಮಾರ್ ಅವರು  ಕಾಲೇಜಿನ ದಿನಗಳಿಂದಲೂ A B V Pಸಿದ್ಧಾಂಥವನ್ನು ಮೆಚ್ಚಿಕೊಂಡು ಅಪ್ಪಿಕೊಂಡು  A B V P ಹಾಗು ಬಿ ಜೆ ಪಿ ಯ ನಿಲುವಗಳೊಂದಿಗೆ ಹೆಜ್ಜೆ ಹಾಕಿದವರು , ಮುಂದೆ ಅನಂತ್  ಕುಮಾರ್ ಅವರನ್ನು ವರಿಸಿದ ಮೇಲೆ ಅವರೊಂದಿಗೆ ಸಾಂಸಾರಿಕ ಹಾಗು ಸಾಮಾಜಿಕ ಬಂಡಿಯನ್ನು ಯಶಸ್ವಿಯಾಗಿ ಓಡಿಸಿಕೊಂಡು ಹೋದರು, ಯಾವಾಗ ಆನಂತ್ಕುಮಾರ್ ಅವರನ್ನು ವರಿಸಿದರೋ ಅಂದಿನಿಂದಲೇ ಸದ್ದಿಲದೆ ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನು ತಾವು ತೊಡಗಿಸಿಕೊಂಡರು , ಆಗ ಸಹಜವಾಗಿ ಅನಂತ್ ಕುಮಾರ್ ಅವರು ರಾಜಕೀಯದ ಅಂಗಳದಲ್ಲಿ ಇದ್ದಿದ್ದರಿಂದ , ತೇಜಸ್ವಿನಿ ಯವರ ಹೆಸರು ಹಿನ್ನಲೆಗೆ ಸರಿದು ಅನಂತ್ ಕುಮಾರ್ ಅವರ ಹೆಸರೇ ಮುನ್ನೆಲೆಗೆ ಬರುತಿತ್ತು ಅದು ಸಹಜವೂ ಹೌದು ಆದರೆ ನಿಜವಾದ ಸಂಗತಿಯೆಂದರೆ ಅನಂತ್ ಕುಮಾರರಷ್ಟೇ , ಅಥವಾ ಅನಂತ್ ಕುಮಾರರಿಗಿಂತಲೂ ತೇಜಸ್ವಿನಿ ಯವರು ಬೆಂಗಳೂರು ದಕ್ಷಿಣ ಕ್ಷೇತ್ರದಲಿಲ್ಲ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು ಎಂಬುದು, ಹಾಗು  ಅನಂತ್ ಕುಮಾರ್ ಅವರ ಸತತ ಗೆಲುವಿನ ನಾಗಾಲೋಟದಲ್ಲಿ ತೇಜಸ್ವಿನಿಯವರ ಪಾತ್ರವನ್ನು ತಳ್ಳಿ ಹಾಕುವಂತಿಲ್ಲ , ತೇಜಸ್ವಿನಿ ಅನಂತ್ ಅವರು ಅನಂತ್ ಕುಮಾರ ಅವರ ಬೆನ್ನೆಲುಬಾಗಿ ಸಾಥ್ ನೀಡುತಿದರಿಂದಲೇ ಅನಂತ್ ಕುಮಾರ್ ಅವರು ಚುನಾವಣೆಗಳ ಮೇಲೆ ಚುನಾವಣೆಗಳು ಬಂದೆರಗಿದರೂ ತಮ್ಮ ಕ್ಷೇತ್ರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಪಕ್ಷ ಸಂಘಟನೆ , ಕ್ಯಾಬಿನೆಟ್ ಮೀಟಿಂಗ್, ಬೇರೆ ರಾಜ್ಯದ ಮೇಲುಸ್ತುವಾರಿ ಎಂದು ಕಾಲಿಗೆ ಚಕ್ರ ಕಟ್ಟಿ ಕೊಂಡಂತೆ ಓಡಾಡುತ್ತಿದ್ದರು , ಅನಂತರಿಗಿದ್ದ ಹಿರಿಯ ಭಾ ಜ ಪ ನಾಯಕರ ಸಂಪರ್ಕದಿಂದಾಗಿ ಅನಂತರು ಬೆಂಗಳೂರಿನಲ್ಲಿದ್ದಿದ್ದಕ್ಕಿಂತ ಹೆಚ್ಚಾಗಿ ಡೆಲ್ಲಿ ಯಲ್ಲಿಯೇ ಇರುತ್ತಿದ್ದರು , ಅಷ್ಟೇ ಅಲ್ಲ ಕರ್ನಾಟಕದ ಕೆಲಸವೆಂದರೆ ದಣಿವರಿಯದೆ ಯಾವ ಪಕ್ಷದವರೇ ಬಂದು ಕೇಳಲಿ ದೂಸ್ರಾ ಮಾತಿಲ್ಲದೆ ನಡೆಸಿ ಕೊಡುತ್ತಿದ್ದರು, ಹೀಗೆ ಕ್ಷೇತ್ರದ ಹಾಗು ಸಂಸಾರ ನೌಕೆಯ ಜವಾಬ್ದಾರಿ ಎರಡನ್ನು ಸೀಮಿತ ಪರಧಿಯಲ್ಲಿ ಅನಂತ್ ಕುಮಾರ್ ಅವರು ತಮ್ಮ ಶ್ರೀಮತಿ ಯವರಿಗೆ ವಹಿಸಿದ್ದರು , ಆ ವಿಷಯದಲ್ಲಿ ಅನಂತ್ ಕುಮಾರ್ ಅವರು ನಿಜವಾಗಿಯೂ ಅದ್ರಷ್ಟವಂತರು .

ತಾನೊಂದು ಬಯಸಿದರೆ , ದೈವವೊಂದು ಬಗೆಯಿತು ಎಂಬಂತೆ , ಇನ್ನು ಉನ್ನತ ಹುದ್ದೆಯನ್ನು
ಅಲಂಕರಿಸುವ ಎಲ್ಲ ಚಾಕ ಚಕ್ಯತ್ತೆ , ನಾಯಕತ್ವದ ಗುಣಗಳನ್ನು ಹೊಂದಿದ್ದ ಅನಂತ್ ಕುಮಾರ್
ಹಠಾತ್ತನೆ ಬಾಳ ಪಯಣ ಮುಗಿಸಿ ಬಾರದ ಲೋಕಕೆ  ಹೊರಟೆ ಬಿಟ್ಟರು, ಆ ದಿನವಂತೂ ಕರ್ನಾಟಕದಮಟ್ಟಿಗೆ ಕರಾಳ ದಿನವೇ ಸರಿ, ಅವರ ಅಕಾಲ ಮರಣದ ನಂತರ ಬೆಂಗಳೂರು ದಕ್ಷಿಣ ಕ್ಷೇತ್ರ ಅಕ್ಷರಶ ಅನಾಥವಾಯಿತು , ಅವರ ಸ್ಥಾನವನ್ನು ಯಾರು ಸಮರ್ಥವಾಗಿ ತುಂಬ ಬಲ್ಲರು ಎಂಬ
ಚರ್ಚೆ ಎಲ್ಲೆಲ್ಲೂ ಕೇಳುತಿತ್ತು , ಅಲ್ಲೊಮ್ಮೆ ಇಲ್ಲೊಮೆ ವಿವಿಧ ರಂಗದ ಹಾಗು ಭಾ ಜ ಪ
ದ ಘಟಾನುಘಟಿಗಳ ಹೆಸರು ತೇಲಿ ಬಂದರು ಕಡೆಯದಾಗಿ ಭಾ ಜ ಪ ಕಾರ್ಯಕರ್ತರ ಹಾಗು
ಜನಸಾಮಾನ್ಯರ ಒಕ್ಕರಲಿನ ದನಿಯಾಗಿದ್ದು ಮತ್ತು ಬಯಸಿದ್ದು ಮಾತ್ರ ತೇಜಸ್ವಿನಿ ಅನಂತ್
ಕುಮಾರ್ ಅವರೇ ಕಣದಲ್ಲಿ ಸಮರ್ಥ್ ಅಭ್ಯರ್ಥಿಯಾಗಬೇಕೆಂದು , ತೇಜಸ್ವಿನಿ ಅನಂತ್ ರವರಿಗೆ
ಒಪ್ಪಿಗೆಯಿತ್ತೋ ಇಲ್ಲವೋ ಆದರೆ ಭಾ ಜ ಪ ದವರೇ ಅವರ ಮನೆಗೆ ಹೋಗಿ ನೀವೇ
ಅಭ್ಯರ್ಥಿಯಾಗಬೇಕೆಂದು ಒತ್ತಾಯಿಸಿದಲ್ಲದೆ , ರಾಷ್ಟ್ರ ಮಟ್ಟದಲ್ಲಿ ಅಭ್ಯರ್ಥಿಗಳ
ಹೆಸರು ಅಖೈರಿಯಾಗುವುದಕ್ಕೆ ಮುಂಚೆಯೇ  ಸುತ್ತೂರು ಮಠಕ್ಕೆ  ಹಾಗು ಆದಿ ಚುಂಚನಗಿರಿ
ಮಠಕ್ಕೆ ಪೆರೇಡ್ ಮಾಡಿಸಿದರು , ಮೊದಲು ಕೆಲವು ನಾಯಕರು ತೇಜಸ್ವಿನಿ ಅನಂತ್ ಅವರ
ಸ್ಪರ್ಧೆಯ ಬಗ್ಗೆ ಅಪಸ್ವರವೆತ್ತಿದರು ನಂತರ ಕ್ಷೇತ್ರದಲ್ಲಿ ತೇಜಸ್ವಿನಿ ಯವರೆಡೆಗಿರುವ
ಒಲವನ್ನು ಕಂಡು ದಂಗಾಗಿ ಅಲ್ಲಿಂದ ಅಲ್ಲಿಗೆ ಸರಿಪಡಿಸಿಕೊಂಡರು , ಯಡಿಯೂರಪ್ಪನವರಂತೂ
ಒಂದೇ ಹೆಸರು ಶಿಫಾರಸು ಮಾಡಿದ್ದೇವೆ ಅದುವೇ ತೇಜಸ್ವಿನಿ ಅನಂತ್ ಕುಮಾರ್ ಎಂದು ಸಾರಿ
ಸಾರಿ ಹೇಳಿದರು , ಇನ್ನೇನಿದ್ದರೂ ಔಪಚಾರಿಕವಾಗಿ ತೇಜಸ್ವಿನಿ ಆನಂತ್ಕುಮಾರ್ ಅವರ
ಹೆಸರು ಘೋಷಣೆಯೊಂದೇ ಬಾಕಿ ಎಂಬಂತಾಗಿತ್ತು , ಆದರೆ ಅರ್ಧ ರಾತ್ರಿಯಲ್ಲಿ ಸಿಡಿಲಿನಂತೆ
ಬಡಿದಪ್ಪಳಿಸಿದ ಸುದ್ದಿ ತೇಜಸ್ವಿನಿ ಅನಂತ್ ಕುಮಾರ್ ಅವರು ಟಿಕೆಟ್ ವಂಚಿತರಾದರೆಂದು ,
ಈ ಸುದ್ದಿ ಅನೇಕ ಅನಂತ್ ಹಾಗು ತೇಜಸ್ವಿನಿ ಯವರ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಂತೂ
ಸುಳ್ಳಲ್ಲ.

ಇದೇ ಕೆಲವು ದಿನಗಳ ಹಿಂದೆ ಬಾಯಿತಪ್ಪಿಯೋ ಅಥವಾ ಬೇಕಂತಲೂ ಮಹಿಳಾ ದಿನಾಚರಣೆಯೆಂದುರೇವಣ್ಣನವರು ಸುಮಲತಾ ಬಗ್ಗೆ ಬಹಳ ಲಘುವಾಗಿ ಮಾತಾಡಿದರು ಎಂದು ಭಾ ಜ ಪ ಗುಲ್ಲೆಬ್ಬಿಸಿದರು , ಅಂದು ರೇವಣ್ಣನವರು ಆಡಿದ ಮಾತು ಅಕ್ಷರಶ ತಪ್ಪೇ ಆದರೆ ಇಂದು ಭಾ ಜ ಪ ದವರು ಮಾಡಿದ್ದೇನು? ನೀವೇ ಅಭ್ಯರ್ಥಿ ಎಂದು ಬಿಂಬಿಸಿ, ತೇಜಸ್ವಿನಿ ಯವರ
ಕೈಯಲ್ಲಿ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿ ಕೊನೆಗೆ ಕೈ ಕೊಟ್ಟದು ಎಷ್ಟು ಸಮಂಜಸ
ಎಂದು ಮತದಾರ ಪ್ರಶ್ನೆ ಮಾಡುತ್ತಿದಾನೆ , ಹಾಗೆ ನೋಡಿದರೆ ಸುಮಲತಾ ಅವರ ಸ್ಪರ್ಧೆ
ಅನುಕಂಪದ ಹಿನ್ನಲೆಯಲ್ಲಿಯ ಸ್ಪರ್ಧೆ ಎಂದು ಸ್ವಲ್ಪ ಮಟ್ಟಿಗೆ ಒಪ್ಪಿ ಕೊಳ್ಳಬಹುದು
ಆದರೆ ತೇಜಸ್ವಿನಿ ಅನಂತ್ ಕುಮಾರ್ ಅವರ ಸ್ಪರ್ಧೆ ಕೇವಲ ಅನುಕಂಪದ ಹಿನ್ನಲೆಯಲ್ಲಿನ
ಸ್ಪರ್ಧೆಯಾಗಿರದೆ , ಸಮಾಜಮುಖಿ ಕಾರ್ಯಕ್ರಮದೆಡೆಗೆ ಒಲವುಳ್ಳ ಮಹಿಳೆಯೊಬ್ಬಳ ಔಚಿತ್ಯದ
ಸ್ಪರ್ಧೆಯಾಗಿ ಕಾಣುತಿತ್ತು.
ಹೀಗೆ ತೇಜಸ್ವಿನಿ ಅನಂತ್ ಕುಮಾರ್ ಅವರ ಸಾಮರ್ಥ್ಯ ಅರಿವುಳ್ಳ ನಾಡಿನ  ಗಣ್ಯರು ಮತ್ತು ಕಾರ್ಯಕರ್ತರು ಅವರನ್ನು ಭೇಟಿಯಾಗುತ್ತಿದ್ದರೆ ಮತ್ತು ತಮ್ಮ ಅಸಹಕತೆಯನ್ನು ಹಾಗು ಸಿಟ್ಟನ್ನು ವ್ಯಕ್ತ ಪಡಿಸಿದ್ದಾರೆ , ಇದೆಲ್ಲವನ್ನು ಅರಿತಿರುವ ಭಾ
ತನ್ನಿಂದಾದ ಅಭಾಸಕ್ಕೆ ಸದ್ಯಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ಕರ್ನಾಟಕ ಭಾ  ಉಪಾಧ್ಯಕ್ಕ್ಷರನ್ನಾಗಿ ನೇಮಿಸಿದೆ , ಆದರೆ ಕಾರ್ಯಕರ್ತರು ನಡೆಯಿಂದ ತೃಪ್ತರಾದಂತೆ ಕಾಣುತಿಲ್ಲ, ಅವರ ಒಕ್ಕೂರಲಿನ ದನಿ ನಿರ್ಮಲ ಸೀತಾರಾಮನ್ , ಹಾಗು ಸ್ಮ್ರಿತಿ ಇರಾನಿ ಯವರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ಸ್ಥಾನ ಕೊಟ್ಟಂತೆ ತೇಜಸ್ವಿನಿ ಅವರಿಗೆ ಮುಂದಿನ ದಿನಗಳಲ್ಲಿ ಏನ್ ಡಿ ಗೆದ್ದು ಬಂದರೆ ಕೇಂದ್ರ ದಲ್ಲಿ ಮಂತ್ರಿ ಮಾಡಿ ಅವರ ಸೇವೆಯನ್ನು ಬಳಸಿಕೊಳ್ಳಬೇಕು ಎಂಬುದಾಗಿದೆ

ಹೀಗೆ ಭಾ ದಲ್ಲಿ  ಬೆಳವಣಿಗೆಗಳು ನಡೆಯುತ್ತಿದ್ದರೆ , ಅತ್ತ ಕಾಂಗ್ರೆಸ್ನ
ಶಾಸಕರೊಬ್ಬರು ಬೆಂಗಳೂರು ದಕ್ಷಿಣದಲ್ಲಿ ಹುಡುಗನಿಗೆ ಟಿಕೆಟ್ ಕೊಟ್ಟಿದಾರೆ  ಮತ್ತು
ವ್ಯಕ್ತಿ ಗೆಲ್ಲಲು ಬಹುದು  ಎಂದಿದ್ದಾರೆ , ಅದಕ್ಕೆ ಕಾರಣವಿಷ್ಟೇ ಬೆಂಗಳೂರು ದಕ್ಷಿಣವೆಂಬುದು ಭಾ ಜ ಪ ದ ಬಲಿಷ್ಠ ಕೋಟೆ ಆ ಸಂಘಟನೆಗೆ ಅನಂತ್ ಕುಮಾರ್ ಆ ಬಗೆಯಲ್ಲಿ ನೀರೆರೆದು ಪೋಷಿಸಿದ್ದಾರೆ, ಆದರೆ ತೇಜಸ್ವಿನಿ ಅನಂತ್ ಕುಮಾರರಿಗೆ ಟಿಕೆಟ್ ನಿರಾಕರಿಸಿದ್ದರಿಂದಾಗಿ, ಅನಂತ್ ಅಭಿಮಾನಿಗಳು ಶಸ್ತ್ರ ತ್ಯಾಗ ಮಾಡಿ ತಟಸ್ಥ ನಿಲುವು ತಾಳಿದರೆ ಕಾಂಗ್ರೆಸ್ ಸ್ವಲ್ಪ ಪ್ರಯತ್ನ ಪಟ್ಟರು ಕಮಲ ಮುದುಡೀತು  ಅದೇನೇ ಇರಲಿ ಕಾಂಗ್ರೆಸ್ ಈ ರೀತಿಯ ಅನೀರೀಕ್ಷಿತ ಬೆಳವಣಿಗೆಯನ್ನು ಎದುರು ನೋಡಿರಲಿಲ್ಲ , ಹಾಗೇನಾದರೂ ಕಾಂಗ್ರೆಸ್ ಈ ರೀತಿಯ ಬೆಳವಣಿಗೆ ಎದಿರು ನೋಡಿದ್ದರೆ ಬಿ ಕೆ ಹರಿಪ್ರಸಾದ್ ಅವರಿಗೆ ಟಿಕೆಟ್ ಒಲಿಯುತ್ತಿತೋ ? ಎಂಬುವುದು ಯಕ್ಷ ಪ್ರಶ್ನೆ ,ಹೀಗೆ ಪರ , ವಿರೋಧ , ಒಳ ಬೇಗುದಿಗಳ, ಒಳ ಹೊಡೆತಗಳ  ನಡುವೆ   ಮತದಾರನ ಒಡಲಾಳದಲ್ಲಿ ಏನೇನು ನಡೆಯುತ್ತಿದೆಎಂದು ತಿಳಿಯಬೇಕಾದರೆ  ಮೇ೨೩ ರ ವರೆಗೆ ಕಾಯಲೇ ಬೇಕು  , ಆದರೆ ಒಂದಂತೂ ಸತ್ಯ ತೇಜಸ್ವಿನಿ ಅನಂತ್ಕುಮಾರ್ ಅವರಿಗೆ ಲೋಕಸಭಾದ ಟಿಕೆಟ್ ನಿರಾಕರಿಸಿದ ನಂತರ ಅವರು ನಡೆದುಕೊಂಡರೀತಿಯಿದೆಯಲ್ಲ ಅದು ತೇಜಸ್ವಿನಿ ಅನಂತ್ ಕುಮಾರ್ ಅವರ ವ್ಯಕ್ತಿತ್ವವನ್ನು ಜನಮಾನಸದಲ್ಲಿ ಇನ್ನಷ್ಟು ಘಾಡವಾಗಿ, ಪ್ರಭುದ್ಧವಾಗಿ ಬೇರೂರಿಸಿದೆ ಎಂದರೆ ತಪ್ಪಾಗಲಾರದು , ಬಹುಶಹ ರಾಜಕೀಯವೆಂಬ ರಾಜಕೀಯ ಅಪಭ್ರoಮಶಗೊಳ್ಳುತ್ತಿರುವ ಈ ಹೊತ್ತಿನಲ್ಲಿ   ದೇಶ ಮೊದಲು , ಪಕ್ಷ ನಂತರ ವ್ಯಕ್ತಿ ಕೊನೆಯಲ್ಲಿ ಎಂದು ತತ್ವಸಿದ್ದಾಂತಕ್ಕೆ ಬೆಲೆ ಕೊಡುವ "ಅದಮ್ಯ ಚೇತನಗಳು" ಸುಲಭವಾಗಿ ಸಿಗಲಾರರು ... ನೀವೇನಂತೀರಿ


ಕಾರ್ತಿಕ್ ಎಸ್ ಬಾಪಟ್
Picture courtesy: Adamya Chetana website