ಗದ್ದುಗೆ ಕಳೆದುಕೊಂಡು ಪಡೆದುಕೊಂಡಿದ್ದು ಶಿವಸೈನಿಕನೇ ಆದರೆ ಗೆದ್ದು ಬೀಗಿದ್ದು ಮಾತ್ರ ಭಾ ಜ ಪ .
ಕಳೆದ ನಾಲ್ಕೈದು ದಿನಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ಗದ್ದುಗೆ ಪ್ರಹಸನ ಕೊನೆಗೂ ಮುಕ್ತಾಯಗೊಂಡಿದೆ , ಆದರೆ ಕೊನೆಯ ಹಂತದ ಕ್ಲೈಮಾಕ್ಸ್ ಮಾತ್ರ ಯಾವ ಮಾಧ್ಯಮಗಳು ಅಷ್ಟೇ ಏಕೆ ಭಾ ಜ ಪ ಬಳಗಕ್ಕೋ ತಿಳಿದಿರಲಿಲ್ಲ ಎಂಬುದು ಈ ಕ್ಷಣದ ರೋಚಕ ಸುದ್ದಿ. ಹಾಗೆ ನೋಡಿದರೆ ಶಿವಸೇನೆ ಹಾಗು ಭಾ ಜ ಪ ಮೈತ್ರಿಯು ಲಾಗಾಯ್ತಿನಿಂದಲೂ ಇದ್ದದ್ದೇ ಶಿವಸೇನೆ ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಬಹುದೆಂದು ಯಾವೊಬ್ಬ ಶಿವಸೈನಿಕನೂ ಕನಸು ಮನಸಿನಲ್ಲಿ ಎಂದಿಗೂ ಯೋಚಿಸಿರಲಾರನು, ಆದರೆ ಉದ್ಧವ ಠಾಕ್ರೆ ಒಂದು ಕೈ ನೋಡಿಯೇ ಬಿಡುವ ಎಂದು ಏನ್ ಸಿ ಪಿ , ಕಾಂಗ್ರೆಸ್ ನೊಂದಿಗೆ ಸೇರಿ ಮಾಡಿಕೊಂಡ ಮೈತ್ರಿಯಿಂದಾಗಿ ಮಹಾ ಅಘಾಡಿ ಸರ್ಕಾರ ಎರಡು ವರುಷಗಳ ಹಿಂದೆ ಮೈದೆಳೆದಿತ್ತು ಫ್ರಂಟ್ ಸೀಟ್ ಡ್ರೈವರ್ ಆಗಿ ಉದ್ಧವ ಠಾಕ್ರೆ ಇದ್ದರು ಬ್ಯಾಕ್ ಸೀಟ್ ಡ್ರೈವ್ ಮಾಡಿದ್ದೂ ಶರದ್ ಪವಾರ್ ಎಂಬುದು ವೇದ್ಯವಾದ ವಿಷಯ ಅಷ್ಟೇ ಅಲ್ಲ ಅಧಿಕಾರದ ಆಸೆಗೆ ಸಿದ್ಧಾಂತವನ್ನು ಬಲಿ ಕೊಟ್ಟರೆ ಏನಾದೀತು ಎಂಬುದಕ್ಕೆ ಉದ್ಧವ ಠಾಕ್ರೆ ಒಂದು ನಿದರ್ಶನ.
ಸರಿ ಸುಮಾರು ಎರಡು ದಶಕಗಳ ಕಾಲ ಮಹಾರಾಷ್ಟ್ರದ ರಾಜಕೀಯದಲ್ಲಿ ತನ್ನದೇ ಛಾಪನ್ನು ಒತ್ತಿದ್ದ ಬಾಳ ಠಾಕ್ರೆ ಉಸಿರಾಡುತ್ತಿದುದ್ದೇ ಹಿಂದುತ್ವ ಮಾತು ಮರಾಠಿಗರ ಒಳಿತನ್ನು. ಎಂತಹದೇ ಸಂದರ್ಭವಿರಲಿ ಗದ್ದುಗೆಗೋಸ್ಕರ ಬಾಳ ಸಾಹೇಬ್ ಸಿದ್ದಾಂತವನ್ನು ಬಲಿ ಕೊಟ್ಟಿರಲಿಲ್ಲ ಆದರೆ 2019 ರ ಚುನಾವಣೆಯಲ್ಲಿ ಆದದ್ದೇ ಬೇರೆ ಶಿವಸೇನೆ ಗೆದ್ದ ನಂತರ ಉದ್ಧವ ಬಾಳ ಸಾಹೇಬರ ಹಾಗು ಆ ಶಿವಸೈನಿಕ ನಂಬಿದ್ದ ಸಿದ್ಧಾಂತದೊಡನೆ ರಾಜಿ ಮಾಡಿಕೊಂಡು ಶಿವಸೈನಿಕನಿಗೆ ಆಘಾತ ತಂದೊಡ್ಡಿದರು , ಅಸಲಿಗೆ ಈ ಎರಡು ವರುಷಗಳ ಕಾಲ ಅಘಾಡಿ ಸರ್ಕಾರ ಇದ್ದದ್ದೇ ಹೆಚ್ಚು ಎಂಬುದು ಕೆಲವರ ವಾದ , ಕೊರೋನಾ ಇರದೇ ಇದ್ದರೆ ಅಗಾಡಿ ಸರ್ಕಾರದ ಲಗಾಡಿ ಎಂದೋ ಎದ್ದು ಹೋಗುತ್ತಿತ್ತು ಎಂಬುದು, ಅದಕ್ಕೆ ಕಾರಣವೂ ಉಂಟು ಯಾವ ಚುನಾವಣೆಗಳಲ್ಲಿ ಕಾಂಗ್ರೆಸ್ ನೊಂದಿಗೆ ಕೈ ಕೈ ಮಿಲಾಯಿಸಿ ಚುನಾವಣೆಯನ್ನು ಎದುರಿಸುತ್ತಿದರೋ ಇಂದು ಅದೇ ಕಾರ್ಯಕರ್ತರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಶಿವಸೈನಿಕರಿಗೆ ಸುತರಾಂ ಒಪ್ಪಿಗೆ ಇರಲಿಲ್ಲ , ಆದರೆ ಶಿವಸೈನಿಕರ ಮಾತನ್ನು ಕೇಳುವರ್ಯಾರು , ಕೊನೆಗೆ ಬೇಸತ್ತ ಶಾಸಕರು ನಾಯಕನೊಬ್ಬ ಸೆಟೆದು ನಿಲ್ಲುವುದನ್ನು ಕಾಯುತ್ತಿದ್ದರು ಆಗ ಕಂಡಿದ್ದೆ ಶಿಂಧೆ , ಅದಕ್ಕೆ ಪೂರಕ ವಾತಾವರಣ ಹಾಗು ಸಂಪನ್ಮೂಲ ಒದಗಿಸಿಕೊಟ್ಟಿದು ಭಾ ಜ ಪ ಎಂಬುದು ಮತ್ತೆ ಹೇಳಬೇಕಾಗಿಲ್ಲ , ಆದರೆ ಕೊನೆಯ ಕ್ಷಣದಲ್ಲಿ ಉದ್ಧವ್ ಠಾಕ್ರೆ ಮಾಡಿದ ಭಾವನಾತ್ಮಕ ಭಾಷಣ ಭಾ ಜ ಪ ಹಾಗು ಶಿಂಧೆ ಬಣಕ್ಕೆ ಮುಂದಿನ ದಿನಗಳಲ್ಲಿ ಚುನಾವಣಾ ಕಣದಲ್ಲಿ ಪೆಟ್ಟು ಕೊಡುವ ಎಲ್ಲ ಸಂಭವಗಳು ಇದ್ದವು.
ಮುಖ್ಯವಾಗಿ ಉದ್ಧವ ಠಾಕ್ರೆ ತಮ್ಮ ಭಾಷಣದಲ್ಲಿ ಹೇಳಿದ್ದು ಬಾಳ ಸಾಹೇಬರ ಮಗನನ್ನು ಗದ್ದುಗೆಯಿಂದ ಕೆಳಗಿಳಿಸಬೇಕೆಂದು ನಮ್ಮವರೇ ನಿರ್ಧರಿಸದರೆ ನಾವೇನು ಮಾಡುವುದು ಹಾಗು ಶಿವಸೈನಿಕ ಬಾಳಸಾಹೇಬರ ಪುತ್ರನನ್ನು ಗದ್ದುಗೆಯಿಂದ ಕೆಳಗಿಳಿಸಿದ ಪುಣ್ಯ ನಿಮಗೆ ದಕ್ಕುವುದಾದರೆ ದಕ್ಕಲಿ ಆ ಪುಣ್ಯ ನಿಮಗೆ ಪ್ರಾಪ್ತಿಯಾಗಲಿ , ಹಾಗು ನೀವು ಎದೆಯುಬ್ಬಿಸಿ ಶಿವಸೇನೆಯನ್ನು ಹುಟ್ಟು ಹಾಕಿದ ಬಾಳಸಾಹೇಬರ ಮಗನನ್ನು ಕೆಳಗಿಳಿಸಿದ ಕೀರ್ತಿ ನಮಗೆ ಸಿಕ್ಕಿತು ಎಂದು ಬೀಗುವ ತೃಪ್ತಿ ನಿಮಗೆ ಪ್ರಾಪ್ತಿಯಾಗಲಿ ಆ ಸಂತೋಷದ ಪೇಡೆಯನ್ನು ನೀವೇ ತಿನ್ನಿರಿ ಏಕೆಂದರೆ ಇದು ನಿಮ್ಮ ತಪ್ಪಲ್ಲ ನಿಮ್ಮ ಮೇಲೆ ಅಷ್ಟಾಗಿ ನಂಬಿಕೆಯಿಟ್ಟ ನನ್ನದೇ ತಪ್ಪು ಆದರೆ ನೀವು ಭಾ ಜ ಪ ದೊಂದಿಗೆ ಸರ್ಕಾರ ರಚಿಸಿದ ನಂತರ ಶಿವಸೈನಿಕನನ್ನು ಮತ್ತೆ ಮುಖ್ಯ ಮಂತ್ರಿ ಮಾಡಬಲ್ಲರೇ? ಇಲ್ಲ ಅದು ಎಂದಿಗೂ ಸಾಧ್ಯವಾಗದು ಎಂದು, ಹೀಗೆ ಉದ್ಧವ್ ಠಾಕ್ರೆ ತಮ್ಮ ವಿದಾಯ ಭಾಷಣದುದ್ದಕ್ಕೂ ಭಾವನಾತ್ಮಕ ವಿಷಯಗಳನ್ನು ಉಲ್ಲೇಖಿಸಿ ಅನುಕಂಪವನ್ನು ಗಿಟ್ಟಿಸುವ ಪ್ರಯತ್ನವನ್ನು ಮಾಡಿದ್ದರು .ಆದರೆ ತಾನೊಂದು ಬಯಸಿದರೆ ದೈವವೊಂದು ಬಯಸಿತು ಎಂಬಂತೆ ಹಲವು ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಫಡ್ನವಿಸ್ ಇದೆಲ್ಲದರ ಅರಿವಿದ್ದು ಸದ್ದಿಲ್ಲದೇ ಮುಖ್ಯಮಂತ್ರಿ ಗದ್ದುಗೆಗೆ ಹೆಸರು ಸೂಚಿಸಿದ್ದು ಮಾತ್ರ ಏಕನಾಥ ಶಿಂದೆಯದ್ದೂ , ಆ ಮೂಲಕ ಒಂದೇ ಏಟಿಗೆ ಮೂರು ನಾಲ್ಕು ಹಕ್ಕಿಗಳನ್ನು ಹೊಡೆದ ಕೀರ್ತಿ ಫಡ್ನವಿಸ್ ತಂಡಕ್ಕೆ ಸಲ್ಲುತ್ತದೆ , ಕಳೆದೆರಡು ದಿನಗಳಿಂದ ಈ ಪ್ರಹಸನವನ್ನು ಗಮನಿಸುತ್ತಿದ್ದ NCP ಹಾಗು Congress ಸದ್ದಿಲ್ಲದೇ ಮತ್ತೆ ಬ್ರಾಹ್ಮಣರನ್ನು ಪ್ರಭಲ ಹುದ್ದೆಗೆ ಭಾ ಜ ಪ ತಂದು ಕೂರಿಸುತ್ತಿದೆ ಎಂದು ಪುಕಾರು ಹರಿಯ ಬಿಟ್ಟು ಭಾ ಜ ಪ ಎಂದಿಗೂ ಮೇಲ್ವರ್ಗದ ಪರ ಎಂಬ ಅಭಿಪ್ರಾಯ ಬರುವಂತೆ ಬಿಂಬಿಸುವ ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿತು, ಆದರೆ ಭಾ ಜ ಪ ಶಿಂದೆ ಎಂಬ ಆಟೋ ರಾಜನಿಗೆ ಮುಖ್ಯ ಮಂತ್ರಿ ಗದ್ದುಗೆಯನ್ನು ಬಿಟ್ಟು ಕೊಟ್ಟು ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ಬುಡ ಮೇಲು ಮಾಡಿದೆ.
ಆ ಮೂಲಕ ಮರಾಠ ಸಮುದಾಯದ ಒಲವನ್ನು ಗಳಿಸಿ NCP ಯ ಮರಾಠ ಪಾಲಿಟಿಕ್ಸ್ ಗೆ ಹಿನ್ನಡೆ ಉಂಟುಮಾಡುವುದು , ಶಿವಸೈನಿಕ ಶಿಂದೆಗೆ ಅಧಿಕಾರ ಬಿಟ್ಟು ಕೊಡುವ ಮೂಲಕ ಠಾಕ್ರೆ ಪರಿವಾರಕ್ಕೆ ಸಿಗಬಹುದಾದ ಅನುಕಂಪಕ್ಕೂ ಇತಿಶ್ರೀ ಹಾಡುವುದು , ಇನ್ನೇನು ಕೆಲವೇ ಕೆಲವು ತಿಂಗಳಲ್ಲಿ ಮುಂಬೈ ಮಹಾನಗರ ಪಾಲಿಕೆಗೆ ಬರುವ ಚುನಾವಣೆಯಲ್ಲಿ ಭಾ ಜ ಪ ಮತ್ತು ಶಿವಸೇನೆ ಶಿಂದೆ ಬಣ ಮತ್ತೆ ಅಧಿಕಾರದ ಗದ್ದುಗೆಗೇರುವಂತೆ ನೋಡಿಕೊಳ್ಳುವುದು ಇವೆಲ್ಲವೂ ಶಿಂದೆ ಮುಖ್ಯಮಂತ್ರಿಯಾಗುವದರ ಹಿಂದಿನ ಲೆಕ್ಕಾಚಾರ.
ಹೀಗೆ ಇನ್ನೇನು ಡೆಲ್ಲಿಗೆ ನರೇಂದ್ರ , ಮಹಾರಾಷ್ಟ್ರಕ್ಕೆ ದೇವೇಂದ್ರ , ಕರ್ನಾಟಕಕ್ಕೆ ವಿಜಯೇಂದ್ರ ಎಂಬ ಸ್ಲೋಗನ್ನು ಫೇಸ್ ಬುಕ್ನಲ್ಲಿ ಪೋಸ್ಟ ಮಾಡಲು ಹೋದ BSY ಅಭಿಮಾನಿಗಳು ಚಕಿತರಾಗಿ ಸುಮ್ಮನಾಗಿದ್ದಾರೆ, ಆದರೆ ಇದೆಲ್ಲದರ ನಡುವೆ ಈ ಪ್ರಹಸನದಿಂದ ಭಾ ಜ ಪ ದ ಚಾಣಕ್ಯರ ಲಿಸ್ಟ್ ನಲ್ಲಿ ಫಡ್ನವಿಸ್ ಹೆಸರು ಕೂಡ ಸೇರಿಕೊಂಡಿದೆ ಬರುವ ದಿನಗಳಲ್ಲಿ ಫಡ್ನವಿಸ್ ಡೆಲ್ಲಿಯ ಪಡಸಾಲೆಯಲ್ಲಿ ಕಂಡು ಬಂದರೆ ಆಶರ್ಯವಿಲ್ಲ ಬಿಡಿ, ಅಂದ ಹಾಗೆ ಬಿ ಜೆ ಪಿ 2019 ರಲ್ಲೇ ಶಿವಸೇನೆಗೆ ಮುಖ್ಯ ಮಂತ್ರಿ ಪದವಿಯನ್ನು ಬಿಟ್ಟುಕೊಡಬಹುದಿತ್ತಲ್ಲವೇ ಎಂದು ಜನಸಾಮಾನ್ಯ ಕೇಳುತ್ತಿದಾನೆ , ಅದು ನಿಜವೇ ಆದರೆ ಶಿವಸೇನೆ ಬಿ ಜೆ ಪಿ ಪಕ್ಷದ ನ್ಯಾಚುರಲ್ ಅಲಯನ್ಸ್ ನಂತೆ ಇದ್ದವರು ಆದ್ದರಿಂದ ಶಿವಸೇನೆ ಎಂದಿಗೂ ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಲಾರರೆಂದು ಅಂದು ಬಿ ಜೆ ಪಿ ಲೆಕ್ಕ ಹಾಕಿತ್ತೇನೋ. ಅದೇನೇ ಇರಲಿ ಜನಸಾಮಾನ್ಯ ಬಯಸುವುದು ಪ್ರಜಾಪ್ರಭುತ್ವ ಪದೇ ಪದೇ ರೆಸಾರ್ಟಿನ ಕದ ತಟ್ಟದಿರಲೆಂದು.ಕಾರ್ತಿಕ್ ಎಸ್ ಬಾಪಟ್ .
Picture Courtesy: Internet