Monday, September 2, 2024

 ಮಾಯಾ ನಗರಿ ಮುಂಬೈ ನಲ್ಲಿ  ಗ್ಲೋಬಲ್ ಫ಼ಿನ್ ಟೆಕ್ ಹಬ್ಬ .

ಭಾರತ ವಿಶ್ವಗುರು ಆಗುವುದೋ ಇಲ್ಲವೋ ಎಂಬ ಪ್ರಶ್ನೆಯನ್ನು ಬದಿಗೊತ್ತಿ, ಭಾರತ ಟೆಕ್ ಗುರು ಆಗುವುದೇ ಎಂದು ಯಾರಾದರೂ ಕೇಳಿದರೆ ಮರುಮಾತಿಲ್ಲದೆ ಉತ್ತರ  ಹೌದು ಎಂಬುದೇ ಆಗಿರುತ್ತದೆ, ಅದರಲ್ಲೂ ಮುಂಬೈನ ಬಿ ಕೆ ಸಿ ಯಲ್ಲಿ ನಡೆದ ಮೂರು ದಿನಗಳ ಟೆಕ ಉತ್ಸವ "ಗ್ಲೋಬಲ್ ಫಿನ್ಟೆಕ್ ಫೆಸ್ಟ್" ನಡೆದ ರೀತಿ ನೋಡಿದರೆ ಭಾರತದ ಮೇಲೆ ತಾಯಿ  ಸರಸ್ವತಿಯ ವಿಶೇಷ ಅನುಗ್ರಹ ಇದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಸಾಮಾನ್ಯವಾಗಿ ಲೋಕ ರೂಢಿಯಾಗಿ ಹೇಳುವ ಮಾತು ಬೆಂಗಳೂರಿನ ಜನಸಂದಣಿಯಲ್ಲಿ ನಿಂತು ಒಂದು ಕಲ್ಲು ಎಸೆದರೆ ಅದು ಟೆಕ್ಕಿ ಮೇಲೆ ಬೀಳುವ ಸಂಭವವೇ ಹೆಚ್ಚು, ಅಂತೆಯೇ ಮೊನ್ನೆ ನಡೆದ ಫಿನ್ಟೆಕ್ ಉತ್ಸವದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಸುತ್ತ ಮುತ್ತಲಿನ ಹೋಟೆಲ್ನಲ್ಲಿ ಹಾಗು ಜನಸಂದಣಿ  ಯಲ್ಲಿ ನೀವು ಯಾರಿಗಾದರೂ ಸುಮ್ಮನೆ ಮಾತಾಡಿಸಿದರೆ ಅದು ದೇಶದ ವಿದೇಶದಿಂದ ಬಂದ CEO, CTO, ಪ್ರಾಡಕ್ಟ್ ಹೆಡ್, ಸ್ಟಾರ್ಟ್ -ಅಪ್  ಗಳ ಉದ್ಯೋಗಿಗಳು, ಮಾರ್ಕೆಟಿಂಗ್ ಮ್ಯಾನೇಜರ್ ಗಳು , ಐಟಿ ಸಲಹೆಗಾರರು, ಆರ್ಕಿಟೆಕ್ಟ್ ಗಳು ಹಾಗು ನಾನಾ ವಿಭಾಗಗಳಲ್ಲಿ ಪರಿಣಿತಿ ಹೊಂದಿದ್ದ ಪ್ರತಿನಿಧಿಗಳಾಗಿದ್ದರು.  ಅದರಲ್ಲೂ ಮಾತಾಡಿಸಿದವರಲ್ಲಿ ಸಿಂಹ ಪಾಲಿನಷ್ಟು ಜನ ಹೇಳಿದ್ದು ನಾವು ಬೆಂಗಳೂರಿನಲ್ಲಿ ಡೆವಲಪ್ಮೆಂಟ್ ಸೆಂಟರ್ ಹೊಂದಿದ್ದೇವೆ ಎಂದು ಹಾಗು ಬಹಳಷ್ಟು ಕಂಪನಿಗಳು ಬೆಂಗಳೂರಿನದವೇ ಆಗಿದ್ದವು. ಅಷ್ಟರಮಟ್ಟಿಗೆ ಬೆಂಗಳೂರಿಗೆ ಬೆಂಗಳೂರೇ ಸಾಟಿ.

ಪಿ ಸಿ (ಪೇಮೆಂಟ್ ಕೌನ್ಸಿಲ್ ಒಫ್ ಇಂಡಿಯಾ - PCI ), ಏನ್ ಪಿ ಸಿ (ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಒಫ್ ಇಂಡಿಯಾ  NPCI ) ಹಾಗು ಎಫ್ ಸಿ ಸಿ ( ಫ಼ಿನ್ಟೆಕ್ ಕನ್ವರ್ಜೆನ್ಸ್ ಕೌನ್ಸಿಲ್ ಒಫ್ ಇಂಡಿಯಾ - FCC ) ಸಹಭಾಗಿತ್ವದಲ್ಲಿ ನಡೆದ  ಫಿನ್ಟೆಕ್ ಉತ್ಸವದಲ್ಲಿ ಬರೋಬ್ಬರಿ 80000  ಜನ ಮೂರು ದಿನಗಳ ಕಾಲ ಪಾಲ್ಗೊಂಡಿದ್ದರು. ಇದೆಲ್ಲದರ ಶ್ರೇಯಸ್ಸುಪಿ ಸಿ , ಏನ್ ಪಿ ಸಿ   ಹಾಗು ಎಫ್ ಸಿ ಸಿ  ಯೊಂದಿಗೆ ಆರ್ ಬಿ   ಗೂ  ಸೇರಬೇಕು , ಸಾಮಾನ್ಯವಾಗಿ ಯಾವುದೇ ದೇಶದ ಸೆಂಟ್ರಲ್ ಬ್ಯಾಂಕ್ ಗಳೊಂದಿಗೆ  ಮುಕ್ತವಾಗಿ ವ್ಯವಹರಿಸುವುದು ತುಸು ಕಷ್ಟ, ಆದರೆ ನಮ್ಮ ಆರ್ ಬಿ   ಹಾಗಲ್ಲ ಭಾರತದ ಸಮಗ್ರ ಆರ್ಥಿಕತೆಯನ್ನು ನಿಯಂತ್ರಿಸುವುದಲ್ಲದೆ  ಕಾಲದಿಂದ ಕಾಲಕ್ಕೆ ನವ ನವೀನ ಆವಿಷ್ಕಾರಗಳನ್ನು ಬಳಸಿಕೊಂಡು ಅದನ್ನು ಆರ್ಥಿಕತೆಯ ಅವಿಭಾಜ್ಯ ಅಂಗವಾಗಿ ಪೋಣಿಸುವ ಹಾಗು ಪ್ರೋತ್ಸಾಹಿಸುವ ಕೀರ್ತಿಯೂ ಸಹ ಆರ್ ಬಿ   ಗೆ ಸಲ್ಲಬೇಕು . ಅಂತಹ  ಪ್ರಯತ್ನದ ಭಾಗವೇ ಏನ್ ಪಿ ಸಿ . ಏನ್ ಪಿ ಸಿ ಅಂದರೆ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಒಫ್ ಇಂಡಿಯಾ ಹಾಗಂದರೆ  ಪಕ್ಕನೆ ಗೊತ್ತಾಗಲಿಕ್ಕಿಲ್ಲ ಆದರೆ ಯು ಪಿ ಅಥವಾ ಭೀಮ್ ಅಪ್ಲಿಕೇಶನ್ (BHIM) ಅಂದರೆ ಎಲ್ಲರಿಗೂ ಅರ್ಥವಾಗುತ್ತದೆ. ಯು ಪಿ ಪೇಮೆಂಟ್ ಸಿಸ್ಟಮ್ ಎಂಬುವುದು ಏನ್ ಪಿ ಸಿ ಕೊಡುಗೆ, ಹಾಗೆ ನೋಡಿದರೆ ಏನ್ ಪಿ ಸಿ ಎಂಬ ಸಂಸ್ಥೆ 2007 ರಲ್ಲಿಯೇ ಅಸ್ಥಿತ್ವಕ್ಕೆ ಬಂದಿತ್ತು ಮೊದಲು ಸಂಸ್ಥೆ ಆರ್ ಬಿ ಅಂಗ ಸಂಸ್ಥೆ ಡಿ ಆರ್ ಬಿ ಟಿ  ಅಡಿಯಲ್ಲಿ ಕಾರ್ಯ ನಿರ್ವಹಿಸುತಿತ್ತು ಆದರೆ 2009 ರಲ್ಲಿ  ಆರ್ ಬಿ ನೇರ ಅಂಗ ಸಂಸ್ಥೆಯಾಗಿ ಮಾರ್ಪಾಡಾದ ನಂತರ ಪೇಮೆಂಟ್ ಲೋಕದಲ್ಲಿ ಅಚ್ಚರಿಗಳ ಮೇಲೆ ಅಚ್ಚರಿಯನ್ನು ಸೃಷ್ಟಿಸುತ್ತ ಬಂದಿತು. ಅದರಲ್ಲೂ 2016 ರಲ್ಲಿ ಪರಿಚಯಿಸಿದ ಯು ಪಿ   ಪೇಮೆಂಟ್ಸ್ ಸಿಸ್ಟಮ್ ಭಾರತದಲ್ಲಿ ಫ಼ಿನ್ ಟೆಕ್ ಕ್ರಾಂತಿಗೆ ನಾಂದಿ ಹಾಡಿತು ಎಂದರೆ ತಪಲ್ಲ, ಪರಿಣಾಮವಾಗಿ ಇಂದು ಭಾರತದ ಯು ಪಿ   ಪೇಮೆಂಟ್ಸ್ ಸಿಸ್ಟಮ್ ದೇಶ ವಿದೇಶಗಳಲ್ಲಿ ಡಿಂಡಿಮ ಬಾರಿಸಿದೆ. ಇದೀಗ ಮೊನ್ನೆ ನಡೆದ ಮೂರು ದಿನಗಳ ಗ್ಲೋಬಲ್ ಫ಼ಿನ್ಟೆಕ್ ಫೆಸ್ಟಿವಲ್ ನಲ್ಲಿ ಭಾರತ್ ಬಿಲ್ ಪೆ ಫಾರ್ ಬಿಸಿನೆಸ್ ಹಾಗು ಯು ಪಿ   ಸರ್ಕಲ್ ಎಂಬ ಎರಡು ಉತ್ಪನ್ನಗಳ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಮುಂದಿನ ದಿನಗಳಲ್ಲಿ ಯು ಪಿ   ನಂತೆಯೇ ವ್ಯಾಪಾರಸ್ಥರಿಗೂ ಹತ್ತು ಹಲವು ಅನುಕೂಲವನ್ನು ಹಾಗು ಇದರ ಸುತ್ತಲೇ ವ್ಯವಹಾರಗಳಿಗೆ ಸಂಬಂಧ ಪಟ್ಟ  ಪೆಟಿಎಂ , ಫೋನ್ ಪೆ , ಭಾರತ್ ಪೆ  ಅಂತೆಯೇ ಇನ್ನಷ್ಟು ವ್ಯಾಪಾರ ವ್ಯವಹಾರ ಕೇಂದ್ರಿತ ಫ಼ಿನ್ಟೆಕ್ ಕಂಪನಿಗಳ ಉಗಮಕ್ಕೆ ನಾಂದಿ ಹಾಡಿದರೆ ಯಾರು ಆಶ್ಚರ್ಯ ಪಡಬೇಕಾಗಿಲ್ಲ.

 

ಯು ಪಿ   ಪರಿಚಯದಿಂದ ಆದ ಇನ್ನೊಂದು ಅತಿ ದೊಡ್ಡ ಉಪಕಾರವೆಂದರೆ, ಬೇಕೋ ಬೇಡವೋ ಬೀದಿ ಬದಿಯ ವ್ಯಪಾರಿಯೂ ಬ್ಯಾಂಕ್ನಲ್ಲಿ ಖಾತೆ ತೆರೆಯುವ ಅವಶ್ಯಕತೆಯನ್ನು ಹುಟ್ಟು ಹಾಕಿದ್ದು, ಪರಿಣಾಮವಾಗಿ ಅಸಂಘಟಿತ ವ್ಯಾಪಾರಿಗಳು ಬ್ಯಾಂಕಿಂಗ್ ಪರಿಧಿಯ ಒಳಗೆ ಒಳಗೊಳ್ಳುವಂತಾಗಿ  ದಳ್ಳಾಳಿಗಳಿಂದ ಸಾಲ ಪಡೆಯುವ ಪರಿಪಾಠ ಕೊಂಚ ಮಟ್ಟಕ್ಕೆ ತಗ್ಗಿದಂತಾಯಿತು. ಯು ಪಿ ವ್ಯಾಪಕತೆ ಎಷ್ಟರ ಮಟ್ಟಿಗಿದೆಯೆಂದರೆ ಪ್ರಪಂಚದಲ್ಲಿ ನಡೆಯುವ ಒಟ್ಟಾರೆ  ರಿಯಲ್ ಟೈಮ್ ಅಂದರೆ ಆಗಿದ್ದಂಗೆ ನೈಜ ಸಮಯದಲ್ಲಿ ನಡೆಯುವ ಡಿಜಿಟಲ್ ವಹಿವಾಟಿನಲ್ಲಿ  ಭಾರತದ ವಹಿವಾಟು ಅರ್ಧದಷ್ಟಿದೆಯಂತೆ, ಅಂದರೆ  ಭಾರತದ ಡಿಜಿಟಲ್  ಮೂಲಭೂತ ಸೌಕರ್ಯಗಳು  ಮುಂದುವರಿದ ದೇಶದ ಡಿಜಿಟಲ್ ಕ್ಷಮತೆಯನ್ನೇ ಮೀರಿಸಿದೆ. ಅಲ್ಲದೆ ಭಾರತದ ಫಿನ್ಟೆಕ್ಕ್ಷೇತ್ರದ ಬೆಳವಣಿಗೆ ಕಳೆದ ಒಂದು ದಶಕದಲ್ಲಿಯೆ ಸರಿ ಸುಮಾರು 500 ಪಟ್ಟು ಬೆಳೆದಿದೆ ಹಾಗು  $31 ಶತಕೋಟಿ ಹೂಡಿಕೆಗಳನ್ನು ಫಿನ್ಟೆಕ್ಕ್ಷೇತ್ರ ಆಕರ್ಷಿಸಿದೆ. ಇದೆಲ್ಲವನು ಗಮನಿಸಿದರೆ ಅತೀ ಶೀಘ್ರದಲ್ಲಿ  ಭಾರತ  ಜಾಗತಿಕ ಫಿನ್ಟೆಕ್ ಕ್ಷೇತ್ರದ  ಪವರ್ಹೌಸ್ ಆಗುವುದರಲ್ಲಿ ಯಾವುದೇ ಅನುಮಾನ ಬೇಡ.

ಒಟ್ಟಾರೆಯಾಗಿ ಆಗಸ್ಟ್ 28 ,29  ಹಾಗು 30 ರಂದು  ಮುಂಬೈ ಜಿಯೋ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಫಿನ್ಟೆಕ್ಹಬ್ಬ ಹಲವಾರು ಭರವಸೆಗಳನ್ನು ಹುಟ್ಟು ಹಾಕಿದೆ. ಕಾರ್ಯಕ್ರಮದಲ್ಲಿ ಆಧಾರ್ ಪರಿಕಲ್ಪನೆಯ ಹರಿಕಾರ ನಂದನ್ ನೀಲಕೇಣಿ ಮಾತನಾಡಿ ಫಿಂಟೆರ್ನೆಟ್ ಎಂಬ ಪರಿಕಲ್ಪನೆಯನ್ನು ಎಳೆಎಳೆಯಾಗಿ ವಿವರಿಸಿದರು. ಫಿಂಟೆರ್ನೆಟ್ ಪರಿಕಲ್ಪನೆ ಯೆಶಸ್ವಿಯಾಗಿ ಅಳವಡಿಸಿದ್ದೆ ಆದರೆ ಮುಂಬರುವ ದಿನಗಳಲ್ಲಿ ಹಣಕಾಸು ವ್ಯವಸ್ಥೆಯ ಭವಿಷ್ಯವನ್ನೇ ಬದಲಾಯಿಸಲಿದೆ, ಹಾಗಾದರೆ ಏನಿದು ಫಿಂಟೆರ್ನೆಟ್ ಅಂದರೆ ನೀವು ಒಂದು ಬ್ಯಾಂಕಿನಲ್ಲಿ ಹಣವನ್ನು  ಡೆಪಾಸಿಟ್ ಮಾಡಿರುತ್ತೀರಿ ಎಂದಿಟ್ಟುಕೊಳ್ಳಿ ಅದಕ್ಕೊಂದು ಡಿಜಿಟಲ್ ಟೋಕನ್ ಅಳವಡಿಸುವುದು ಅಂದರೆ ನಾಳೆ ಟೋಕನ್ ಅನ್ನು ನೀವು ಎಲ್ಲಿ ಬೇಕಾದರೂ ವಿನಿಮಯ ಮಾಡಿಕೊಳ್ಳಬಹುದು. ಅಂತೆಯೇ ನಿಮ್ಮ ಆಸ್ತಿ ಪಾಸ್ತಿಗಳಿಗೂ ಒಂದು ಡಿಜಿಟಲ್ ಟೋಕನ್ ಮಾಡುವುದು , ಮೂಲಕ ಕೊಡು ಕೊಳ್ಳುವಿಕೆಯನ್ನು ಸರಳ ಮಾಡಿ ಯಾವುದೇ ರೀತಿಯ ಆಸ್ತಿ ಪಾಸ್ತಿ ಇರಲಿ ಅದನ್ನು ಟೋಕನೈಸ್ ಮಾಡಿ ಅದನ್ನು ಡಿಜಿಟಲ್ ವ್ಯಾಪ್ತಿಗೆ ಒಳಪಡಿಸುವುದು. ಮೇಲ್ನೋಟಕ್ಕೆ ಇದು ಸಾಧ್ಯವೇ ಎಂದು ಹಲವಾರು ಪ್ರಶ್ನೆಗಳು ಏಳಬಹುದು ಆದರೆ ಯು ಪಿ   ಪ್ರಾರಂಭವಾದಗಲು ಇದೇ ರೀತಿಯ ಪ್ರಶ್ನೆಗಳೆದ್ದಿದ್ದವು, ಆಶ್ಚರ್ಯವೆಂದರೆ  ಒಂದಾನೊಂದು ಕಾಲದಲ್ಲಿ ಕಾಂಗ್ರೆಸ್ನ ಕನಸಿನ ಕೂಸಾಗಿದ್ದ ಆಧಾರ ವ್ಯವಸ್ಥೆಯನ್ನು ಬಿ ಜೆ ಪಿ ವಿರೋಧಿಸಿತ್ತು. ಆದರೆ ಅದೇ ಆಧಾರ ಸೌಕರ್ಯವನ್ನು ಬಳಸಿ ಬಿ ಜೆ ಪಿ ಡಿಜಿಟಲ್ ಇಂಡಿಯಾ ಸೃಷ್ಟಿಸಲು ಮುಂದಾದಾಗ ಸಂಸತ್ತಿನಲ್ಲಿ ಅಂದಿನ ಮಾಜಿ ವಿತ್ತ ಸಚಿವ ಚಿದಂಬರಂ ಹಳ್ಳಿಗಳಲ್ಲಿ ವಿದ್ಯುತ ಸೌಕರ್ಯವೇ ಇರುವುದಿಲ್ಲ ಇದೆಲ್ಲ ಹೇಗೆ ಸಾಧ್ಯ ಎಂದು ಪ್ರಶ್ನೆ ಎತ್ತಿದ್ದರು, ಆದರೆ ಇಂದು ಅದು ಸಾಧ್ಯವಾಗಿದೆ ಅಷ್ಟೇ ಅಲ್ಲ ಇಡೀ ಜಗತ್ತೇ ಬೆರಗಾಗಿ ಭಾರತದತ್ತ ನೋಡುತ್ತಿದೆ, ಇಂದು ಜನರಿಗೆ ಆಧಾರ ಕಾಂಗ್ರೆಸ್ನ್ ಕೂಸು ಎಂಬುದು ಮರೆತು ಹೋಗಿದೆ, ಕಾರಣ ವಿರೋಧ ಮಾಡಲೆಂದೇ ವಿರೋಧ ಮಾಡಿದರೆ ಅದು ಹೀಗೆ ಆಗುವುದು.

ಫಿನ್ಟೆಕ್ಹಬ್ಬದ ಕೊನೆಯ ದಿನ ಪ್ರಧಾನ ಮಂತ್ರಿಗಳು ಮಾತನಾಡಿ ಮಾತನಾಡಿ ನೆರೆದಿದ್ದ ಟೆಕ್ಕಿಗಳ ಕೆಲಸವನ್ನು ಕೊಂಡಾಡಿ ಟೆಕ್ಕಿಗಳಲ್ಲಿ ಇನ್ನಷ್ಟು ಉತ್ಸಾಹ ತುಂಬಿದ್ದು ವಿಶೇಷವಾಗಿತ್ತು. ಅಲ್ಲದೆ  ಇದು ಐದನೇ ಫಿನ್ಟೆಕ್ಹಬ್ಬ ಇನ್ನು ಹತ್ತನೇ ಫಿನ್ಟೆಕ್ಹಬ್ಬಕ್ಕೆ ನಾನು ಬರುತ್ತೇನೆ ಎಂದು ಮೋದಿ ಭರವಸೆ ಕೊಟ್ಟಾಗ ನೆರೆದಿದ್ದ ಟೆಕ್ಕಿಗಳು ಮೋದಿ ಹೈ ತೊ ಮುನ್ಕಿನ್ ಹೈ ಎಂದು ಜಯ ಘೋಷ ಕೂಗಿದರು. ಹತ್ತನೇ ಫಿನ್ಟೆಕ್ಹಬ್ಬಕ್ಕೂ ನಾನು ಬರುತ್ತೇನೆ ಎಂದು  ಪ್ರಧಾನ ಮಂತ್ರಿಗಳು ಹೇಳಿದ ಒಳ ಮರ್ಮ  2029 ಕ್ಕೂ ಮತ್ತೆ ಮೋದಿ ಎಂಬುದಾಗಿತ್ತು . ಅದೇನೇ ಇರಲಿ ನೆರೆದಿದ್ದ ಹಲವರಲ್ಲಿ ಏನಾದರೂ ಸಾಧಿಸುವ ಛಲ ಕಣ್ಣಲಿ ಪ್ರಜ್ವಲಿಸುತಿತ್ತು, ಅದೆಲ್ಲದಕ್ಕೂ  ಮಾಯಾನಗರಿ ಮುಂಬೈ ಸಾಕ್ಷಿ ಆಗಿತ್ತು.

https://epaper.samyukthakarnataka.com/editionname/Bangalore/SMYK_BANG/page/6/article/SMYK_BANG_20240902_06_1

ಕಾರ್ತಿಕ್ ಎಸ್ ಬಾಪಟ್.





 ಸಿದ್ಧಿ ಸಾಧಿಸಿದ ಹೃದಯವಂತ

ಅದೆಷ್ಟೋ ಬಾರಿ ನಮ್ಮ ಹೃದಯಕ್ಕೆ ಏನು ಬೇಕು ಎಂದು ನಮಗೆ ಗೊತ್ತಾಗುವುದಿಲ್ಲ ಆದರೆ ಇವರು ಹಾಗಲ್ಲ , ಕ್ಷಣ ಮಾತ್ರದಲ್ಲಿ ಬೇರೆಯವರ ಹೃದಯ ನೋಡಿ ಹ್ರದಯಕ್ಕೇನೂ ಬೇಕು ಎಂದು ಹೇಳುವ ಸಿದ್ಧಿ ಸಾಧಿಸಿದ ಹೃದಯವಂತ ವೈದ್ಯ ದೇವಿ  ಶೆಟ್ಟಿ. ಬಹುಶಹ ಇಡೀ ದೇಶದಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಎಂದರೆ ಹೌ ಹಾರುತ್ತಿದ್ದ 90 ರ ದಶಕದಲ್ಲಿ ಅದಕ್ಕೊಂದು ಸರಳತೆಯ ಆಯಾಮ ತಂದು ಕೊಟ್ಟ ಶ್ರೇಯಸ್ಸು ಡಾ ದೇವಿ ಶೆಟ್ಟಿ ಅವರಿಗೆ ಸಲ್ಲಬೇಕು.  ಯಾವುದೊ ಒಂದು ಹಿಂದಿ ಚಿತ್ರದಲ್ಲಿ ಕೇಳಿದ ಸುಪ್ರಸಿದ್ದ ಸಂಭಾಷಣೆಯ ನೆನಪು " ಅಗರ್ ಕಿಸಿ ಚೀಜ್ ಕೋ ದಿಲ್ ಸೆ ಚಾಹೋ ತೊ ಪೂರಿ ಕಾಯಿನಾತ್ ಉಸೇ ತುಮಸೆ ಮಿಲಾನೇ  ಕೆ ಕೊಶಿಶ್ ಮೇ ಲಗ ಜಾತಿ ಹೆ " ಅಂದರೆ ನೀವು ಪೂರ್ಣ ಹೃದಯದಿಂದ ಏನನ್ನಾದರೂ ಬಯಸಿದರೆ ಅಥವಾ ಮಾಡಬೇಕೆಂಬ ಪಣ ತೊಟ್ಟರೆ, ಇಡೀ ವಿಶ್ವವೇ ಅದನ್ನು ನಿಮ್ಮ ಬಳಿಗೆ ತರಲು ಪ್ರಯತ್ನಿಸುತ್ತದೆ ಎಂದು ಇದರ ಅರ್ಥ ಬಹುಶಃ ದೇವಿ ಶೆಟ್ಟರ ಬಾಳಲ್ಲೂ ಅದೇ ಆಗಿರಬೇಕು. ಅವರು ಐದನೇ ತರಗತಿಯಲ್ಲಿರುವಾಗ ಅವರ ಶಾಲೆಯ  ಶಿಕ್ಷಕರು ಡಾಕ್ಟರ್ ಕ್ರಿಶ್ಚಿಯನ್ ಬರ್ನಾರ್ಡ್ ಎಂಬುವವರು ಕೇಪ್ಟೌನ್  ನಲ್ಲಿ ಮೊಟ್ಟ ಮೊದಲ ಹಾರ್ಟ್ ಟ್ರಾನ್ಸಪ್ಲಾಂಟ್ ಮಾಡಿದರು ಎಂದು ಎಳೆ ಎಳೆಯಾಗಿ ಮಕ್ಕಳಿಗೆ ಬಿಡಿಸಿ ಹೇಳಿದರಂತೆ. ಈ ಒಂದು ವಿಷಯ ಹಾಗು ಮನೆಯಲ್ಲಿನ ವಾತಾವರಣ ಇವೆಲ್ಲವೂ ಪ್ರಭಾವ ಬೀರಿ ಐದನೇ ತರಗತಿಯಲ್ಲಿದ್ದ ಬಾಲಕ ದೇವಿ ಶೆಟ್ಟಿ ಅಂದೇ ಹಾರ್ಟ್ ಸರ್ಜನ್ (ಹೃದಯ ಶಸ್ತ್ರ ಚಿಕಿತ್ಸಕ) ಆಗಬೇಕೆಂದು ನಿರ್ಧರಿಸಿದ್ದರಂತೆ, ಆದರೆ ಹಾರ್ಟ್ ಸರ್ಜನ್ ಆಗುವ ಮೊದಲು ಡಾಕ್ಟರ್ ಆಗಬೇಕೆಂದು ಅವರಿಗೆ ಗೊತ್ತಿರಲಿಲ್ಲವಂತೆ  ಆದರೆ  ಅಂತಹ ಮುಗ್ದ ಬಾಲ್ಯದಲ್ಲೇ  ಹಾರ್ಟ್ ಸರ್ಜನ್ ಆಗಬೇಕೆಂಬ ತೊಟ್ಟ ಪಣ ಹಾಗು ಸಂಕಲ್ಪ ಕಾಲದಿಂದ ಕಾಲಕ್ಕೆ ಅದು ದೃಢವಾಗುತ್ತ ಬಂದಿತ್ತು ಎಂಬುದು ಗಮನಾರ್ಹ ಸಂಗತಿ. ಅದೇ ರೀತಿ ಕೇವಲ ಪುಸ್ತಕದ ಪಾಠವನ್ನು ಮಾಡದೆ ಅಂದು  ದೂರದ ದೇಶದಲ್ಲಿ ಏನಾಗುತ್ತಿದೆ ಎಂದು ತಿಳಿದು ಅದನ್ನು ಮಕ್ಕಳವರೆಗೆ ತಲುಪಿಸಬೇಕೆಂಬ ತುಡಿತ  ಆ ಗುರುವಿಗೆ ಇತ್ತಲ್ಲ ಅದು ಬಹು ದೊಡ್ಡ ಸಂಗತಿ , ಬಹುಶಃ ಇಂತಹ ಸರಳ ಉದಾಹರಣೆ ಸಾಕು ಬದುಕಿನಲ್ಲಿ ಗುರುವಿನ ಮಹತ್ವವೇನು ಎಂದು ಸಾರಲು. 

ಹೀಗೆ ಇದು ಡಾಕ್ಟರ್ ಆಗುವಲ್ಲಿ  ದೇವಿ ಶೆಟ್ಟರಿಗೆ  ಇದ್ದ ಪ್ರೇರಣೆಯ ಸಂಗತಿಗಳಾದರೆ ಲಂಡನ್ನಲ್ಲಿ ಯಶಸ್ವಿ ಪ್ರಾಕ್ಟಿಸ್  ಬಿಟ್ಟು ಭಾರತಕ್ಕೆ ಅದರಲ್ಲೂ ಕೋಲ್ಕತ್ತಾಗೆ ಕೆಲಸ ಅರಸಿ ಬಂದದ್ದು ಮತ್ತೊಂದು ಕುತೂಹಲಕಾರಿ ಸಂಗತಿ. ದೇವಿ ಶೆಟ್ಟರು ಲಂಡನ್ ಸೇರಿದ್ದು ಹೆಚ್ಚಿನ ಅನುಭವ ಹಾಗು ಪರಿಣಿತಿಗಾಗಿ ಮಾತ್ರ,  ಆದ್ದರಿಂದ ಅವರಿಗೆ ಭಾರತಕ್ಕೆ ಮರಳ ಬೇಕೆಂಬ ತುಡಿತ ಬಲವಾಗಿತ್ತು. ಈ ನಿಟ್ಟಿನಲ್ಲಿ ಅವರು ನಮ್ಮ ಬೆಂಗಳೂರಿನ ಸೆಂಟ್ ಜಾನ್ಸ್ ಮೆಡಿಕಲ್ ಹಾಸ್ಪಿಟಲ್ ನಲ್ಲೂ ಕೆಲಸಕ್ಕೆ ಸೇರಲು ಪ್ರಯತ್ನಿಸಿದ್ದರಂತೆ, ಆದರೆ ಅಂದು ಸೆಂಟ್ ಜಾನ್ಸ್   ಹಾಸ್ಪಿಟಲ್ ಯು ಆರ್ ಟೂ ಯಂಗ್ ಟು ಬಿ ಹಾರ್ಟ್ ಸರ್ಜನ್ ಎಂದು ಹೇಳಿತ್ತಂತೆ. ಕೆಲವು ದಿನಗಳ ನಂತರ ಲಂಡನ್ ನ  ಗಯ್ಸ್ ಹಾಸ್ಪಿಟಲ್ ಸರ್ಜನ್ ಒಬ್ಬರು ದೇವಿ ಶೆಟ್ಟರಿಗೆ ಬರ್ಲಾ ಫ್ಯಾಮಿಲಿ ಕೋಲ್ಕತ್ತಾದಲ್ಲಿ ಬಹು ದೊಡ್ಡ ಹಾರ್ಟ್ ರಿಸರ್ಚ್ ಸೆಂಟರ್ ಸ್ಥಾಪಿಸುತ್ತಿದ್ದರೆ ನೀವೇಕೆ ಸೇರಬಾರದು ಎಂದು ಕೇಳಿದರಂತೆ, ಆಗ ದೇವಿ ಶೆಟ್ಟಿ ಬರ್ಲಾ ಯಾರು ನನಗೆ ತಿಳಿದಿಲ್ಲ ನಾನು ಸೇರುವುದಿಲ್ಲ ಅಂದರಂತೆ ಮತ್ತೆ ಒಂದು ವರ್ಷದ ನಂತರ ಬಿರ್ಲಾ ಕುಟುಂಬ ಮತ್ತೆ ಲಂಡನ್ ಗೆ ಭೇಟಿ ನೀಡಿದರಂತೆ ಆಗ ಅಲ್ಲಿನ ಸರ್ಜನ್ ಹಿಂದೆ ಮಾಡಿದ್ದ ತಪ್ಪು ಮಾಡಲಿಲ್ಲ, ಬರ್ಲಾ ಎನ್ನದೆ ಬಿರ್ಲಾ ಕುಟುಂಬ ಆಸ್ಪತ್ರೆ ಕಟ್ಟುತ್ತಿದೆ ಮತ್ತೊಮ್ಮೆ ಯೋಚನೆ ಮಾಡಿ ಅಂದರಂತೆ ಆಗ ಒಹೋ ಇದು ಬಿರ್ಲಾ ಎಂದು ತಿಳಿದು ದೇವಿ ಶೆಟ್ಟಿ ಒಪ್ಪಿ ಕೋಲ್ಕತ್ತಾ ನಗರಕ್ಕೆ ಬಂದರು. ಹಾಗೆ ಬಂದ ದೇವಿ ಶೆಟ್ಟಿ ಮತ್ತೆ ಹಿಂದಿರುಗಿ ನೋಡಲಿಲ್ಲ ಕೆಲವೇ ಕೆಲವು ವರುಷಗಳಲ್ಲಿ ದೇಶವೇ ನಿಬ್ಬೆರಗಾಗಿ ನೋಡುವಂತೆ ಎತ್ತರಕ್ಕೆ ಬೆಳೆದು ನಿಂತರು. ಡಾಕ್ಟಾರಿಕೆ ಬಿಡುವಿಲ್ಲದೆ ನಡೆಯುತಿತ್ತು ಯಾವುದೊ ಸಮಾರಂಭದಲ್ಲಿ ಯಾರೋ ಮಹಾನುಭವರು ನಿಮ್ಮ ಸೇವೆ ಸಣ್ಣ ಸಣ್ಣ ಪಟ್ಟಣ ಹಾಗು  ಹಳ್ಳಿಗಳಿಗೂ ವಿಸ್ತಾರವಾಗಬೇಕು ನೀವು ಸರ್ಕಾರಕ್ಕೆ ಜಾಗಕ್ಕಾಗಿ ಅರ್ಜಿ ಸಲ್ಲಿಸಿ ಜಾಗ ಪಡೆದು ನೀವೇ ಏಕೆ ಆಸ್ಪತ್ರೆ ಕಟ್ಟಬಾರದು  ಎಂದರಂತೆ, ದೇವಿ ಶೆಟ್ಟರು ಆಯಿತು ಆಯಿತು ಎಂದು ಬಿಟ್ಟಿ ಸಲಹೆಗಳಿಗೇನು ಬರ ಎಂದು ಅಸಡ್ಡೆ ಮಾಡಿದ್ದರಂತೆ, ಆದರೆ ಆ ಮಹಾನುಭಾವರು ಎರಡು ವಾರದ ನಂತರ ಮುಖ್ಯ ಮಂತ್ರಿಗಳ ಕಛೇರಿಯಿಂದ ಮತ್ತೆ ಕರೆ ಮಾಡಿ ಜಾಗಕ್ಕಾಗಿ ಅರ್ಜಿ ಏಕೆ ಸಲ್ಲಿಸಿಲ್ಲ ಎಂದು ಕೇಳಿದರು, ಆಗ ದೇವಿ ಶೆಟ್ಟರು ಸ್ವಲ್ಪ ಗಂಭೀರವಾಗಿ  ಈ ವಿಷಯದ ಬಗ್ಗೆ ಚಿಂತನೆ ನಡೆಸಿ ತಮ್ಮ ಶ್ರೀಮತಿ ಬಳಿ ಕೂಡಿಟ್ಟಿದ್ದ ಹಣವನ್ನು ಬಳಸಿ  ಜಾಗಕ್ಕೆ ಅರ್ಜಿ ಸಲ್ಲಿಸಿದರು. ಆದರೆ ಜಾಗ ತೆಗೆದು ಕೊಂಡ ಮೇಲೆ ಕಟ್ಟಡ ಎದ್ದು ನಿಲ್ಲಬೇಕು , ಆಸ್ಪತ್ರೆಗೆ ಬೇಕಾಗುವ ಸಲಕರಣೆ ಕೊಂಡು ಕೊಳ್ಳಬೇಕು ಇದಕ್ಕೆಲ್ಲ ಹಣ ಬೇಕು ಹಾಗು ಅಂದು ಈಗಿನಂತೆ ಸ್ಟಾರ್ಟ್ ಅಪ್ ಕಾನ್ಸೆಪ್ಟ್ ಇರಲಿಲ್ಲ. ಈಗಿನಂತೆ ಹೇರಳವಾಗಿ ಹಣ ಸಹಾಯ ಮಾಡುವ ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಇರಲಿಲ್ಲ ಇದ್ದ ಒಂದೇ ಒಂದು ಮಾರ್ಗ ಬ್ಯಾಂಕ್ಗಳು ಅಥವಾ ಹಣಕಾಸು ಸಂಸ್ಥೆಗಳು. ಈ ಸಂಸ್ಥೆಗಳು  ಸಾಲ ಕೊಟ್ಟರೆ ಏನಾದರೂ ಮಾಡುವ ಆಲೋಚನೆ ಮಾಡಬಹುದಾಗಿತ್ತು. ಈ ನಿಟ್ಟಿನಲ್ಲಿ ದೇವಿ ಶೆಟ್ಟರು ಹಲವಾರು ಬ್ಯಾಂಕ್ಗಳ ಕದ ತಟ್ಟಿದರು ಪ್ರಯೋಜನವಾಗಲಿಲ್ಲ, ಆದರೆ ಅಂದಿನ ಐಸಿ ಐಸಿ ಐ ಚೇರ್ಮೆನ್ ಕೆ ವಿ ಕಾಮತ್ ಸಹಾಯ ಮಾಡಲು ಉತ್ಸುಕರಾಗಿದ್ದರು. ಆದರೆ ಎಲ್ಲ ಬ್ಯಾಂಕ್ಗಳು ಸಾಮಾನ್ಯವಾಗಿ ಸಂಪೂರ್ಣ ಹಣವನ್ನು ಸಾಲದ ರೂಪದಲ್ಲಿ ಕೊಡುವುದಿಲ್ಲ ಒಂದಿಷ್ಟು ಹಣವನ್ನು ಬಂಡವಾಳದ ರೂಪದಲ್ಲಿ ಸ್ಥಾಪಕರು ತೊಡಗಿಸಬೇಕೆಂದು ಬಯಸುತ್ತದೆ ದೇವಿ ಶೆಟ್ಟರ ವಿಷಯದಲ್ಲೂ ಅದೇ ಆಯಿತು. ಐಸಿ ಐಸಿ ಐ ನೀವೆಷ್ಟು ಬಂಡವಾಳ ತೊಡಗಿಸುತ್ತೀರಾ ಎಂದು ಕೇಳಿತು, ದೇವಿ ಶೆಟ್ಟಿ ಸುಮ್ಮನಾದರು, ಆದರೆ ಪ್ರಯತ್ನ ಮುಂದುವರೆದಿತ್ತು ಆಗ ಕಂಡಿದ್ದು ದೇವಿ ಶೆಟ್ಟರ ಸ್ನೇಹಿತರು  ಟಾಟಾ ಕ್ಯಾಪಿಟಲ್ ನ ಕೃಷ್ಣ ಕುಮಾರ್ , ಅವರ ಬಳಿ ಹೋಗಿ ಹಣ ಕೇಳಿದರಂತೆ ಅವರು ಕೂಡ ಆಯಿತು ಮಾಡೋಣ ಎಂದರು ಆದರೆ ಅವರು ಕೂಡ ಐಸಿ ಐಸಿ ಐ ನಂತೆ ನಿಮ್ಮ ಬಂಡವಾಳ ಎಷ್ಟು ಅಂದರಂತೆ, ಮತ್ತೆ ಕೆಲ ಕಾಲ ಸುಮ್ಮನಾದ ದೇವಿ ಶೆಟ್ಟಿ ಕೆಲವು ದಿನಗಳ ನಂತರ ಐಸಿ ಐಸಿ ಐ ಬಳಿ ಹೋಗಿ ಟಾಟಾ ಕ್ಯಾಪಿಟಲ್ ಒಂದಿಷ್ಟು ಹಣ ಹೂಡುತ್ತಿದ್ದಾರೆ ಅಂದರಂತೆ ಅದೇ ರೀತಿ ಟಾಟಾ ಕ್ಯಾಪಿಟಲ್ ಅವರ ಬಳಿ ಹೋಗಿ ಐಸಿ ಐಸಿ ಐ ಒಂದಿಷ್ಟು ಹಣ ಹೂಡುತ್ತಿದ್ದಾರೆ ಎಂದು ಹೇಳಿದರಂತೆ ಆಗ ಇಬ್ಬರು ಗುಡ್ ಗುಡ್ ಎಂದು ಹೇಳಿ ಸಾಲ ಕೊಡಲು ಮುಂದಾದರು ನಂತರ ನಡೆದದ್ದು ಇತಿಹಾಸ.

ದೇವಿ ಶೆಟ್ಟಿ ಅವರ  ಪರಿಶ್ರಮದ ಫಲವಾಗಿ ನಾರಾಯಣ ಹೃದಯಾಲಯ ಇಂದು ಬ್ರಹತ್ ಸಂಸ್ಥೆಯಾಗಿ ಬೆಳೆದಿದೆ. ಇಲ್ಲಿ ಎಕನಾಮಿಕ್ಸ್ ನ ಲಾರ್ಜ್ ಸ್ಕೇಲ್ ಆಫ್ ಪ್ರೊಡಕ್ಷನ್ ನ ಫ್ಯಾಕ್ಟರಿ  ವಿಧಾನವನ್ನು ಆಸ್ಪತ್ರೆಗೆ  (ಹೆಚ್ಚು ಹೆಚ್ಚು ಉತ್ಪಾದನೆ ಮಾಡುವುದರಿಂದ ವೆಚ್ಚ ಕಡಿಮೆ ಮಾಡುವ ವಿಧಾನ ) ಅಳವಡಿಸಿ ಹೃದಯ ಚಿಕಿತ್ಸೆಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಯಶಸ್ವಿಯೂ ಆಗಿದೆ, ಅಲ್ಲದೆ  ತನ್ನದಲ್ಲದ   ಕ್ಷೇತ್ರ ಸಾಫ್ಟ್ವೇರ್ ಕ್ಷೇತ್ರಕ್ಕೂ ಕೈ ಹಾಕಿ ರೋಗಿಗಳ ಎಲ್ಲ ಮಾಹಿತಿಯನ್ನು ಕಾಪಿಟ್ಟು ಅದನ್ನು ಚಿಕಿತ್ಸೆಗೆ ಬಳಸಿಕೊಳ್ಳುವ ವಿಶಿಷ್ಟ ಸಾಫ್ಟ್ವೇರ್ ಅಭಿವೃದ್ಧಿಗೂ ಮುನ್ನುಡಿ ಬರೆದಿದೆ. ಇದೀಗ ಕೆಲವೇ ದಿನಗಳ ಹಿಂದೆ ತಮ್ಮ ಸಂಸ್ಥೆಯಿಂದ "ಅದಿತಿ" ಎಂಬ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊರ ತಂದಿದೆ, ಇದು ಅತ್ಯಂತ ಕಡಿಮೆ ಪ್ರೀಮಿಯಂ ನ ಸೌಲಭ್ಯ ಎಂದು ಸಂಸ್ಥೆ ಹೇಳಿ ಕೊಂಡಿದೆ. ಸಾಮಾನ್ಯವಾಗಿ ಈ ಹೆಲ್ತ್ ಇನ್ಶೂರೆನ್ಸ್ ವ್ಯವಸ್ಥೆಯಲ್ಲಿ ಮೂವರ ಪಾಲ್ಗೊಳ್ಳುವಿಕೆ ಇರುತ್ತದೆ  ಅದರಲ್ಲಿ ಆಸ್ಪತ್ರೆಗಳು, ಇನ್ಶೂರೆನ್ಸ್ ಕಂಪನಿಗಳು ಹಾಗು ಇನ್ಶೂರೆನ್ಸ್ ಪಾಲಿಸಿ ಹೊಂದಿದ ರೋಗಿಗಳು . ಸಾಮಾನ್ಯವಾಗಿ ಈ ಮೂವರಲ್ಲಿ ಪರಸ್ಪರ ಒಬ್ಬರಿಗೊಬ್ಬರಿಗೆ ನಂಬಿಕೆ ವಿಶ್ವಾಸಗಳಿರುವುದಿಲ್ಲ ಇನ್ಶೂರೆನ್ಸ್ ಕಂಪನಿಗೆ ಆಸ್ಪತ್ರೆಯ ಮೇಲೆ ನಂಬಿಕೆ ಇರುವುದಿಲ್ಲ, ಆಸ್ಪತ್ರೆಗೆ ಇನ್ಶೂರೆನ್ಸ್ ಕಂಪನಿಗಳ ಮೇಲೆ ನಂಬಿಕೆ ಇರುವುದಿಲ್ಲ  ಇನ್ನು ರೋಗಿಗೆ ಬಿಡಿ ಇಬ್ಬರ ಮೇಲು ನಂಬಿಕೆ ಇರುವುದಿಲ್ಲ. ಇಂತಹ ಸಂಧರ್ಭದಲ್ಲಿ ಆಸ್ಪತ್ರೆಯೇ ತನ್ನ ಸಂಸ್ಥೆಯಿಂದ ಇನ್ಶೂರೆನ್ಸ್ ಸ್ಕೀಮ್ ಅನ್ನು ಹೊರ ತಂದಿರುವುದು ಆಸಕ್ತಿದಾಯಕ ಸಂಗತಿ, ಹಾಗು ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಹೇಗೆ ಕೆಲಸ ಮಾಡಬಹುದು ಎಂದು ಕಾಲ ಕ್ರಮೇಣ ಕಂಡು ಕೊಳ್ಳಬಹುದು. ಅದೇನೇ ಇರಲಿ ದೇವಿ ಶೆಟ್ಟಿ ಉದ್ದೇಶ ಇಡೀ ಜಗವೇ ಮೆಚ್ಚುವಂತಹದು ಅವರು ಹೇಳುವ ಪ್ರಕಾರ ನಮ್ಮಲಿರುವ ಸಂಪನ್ಮೂಲ ಆರೋಗ್ಯದ ಚಿಕಿತ್ಸೆಯನ್ನು ನಿರ್ಧರಿಸಬಾರದು, ಅಂದರೆ ಒಬ್ಬ ಕೋಟ್ಯಧಿಪತಿಗೆ  ಸಿಗುವ ಚಿಕಿತ್ಸೆ ಹಾಗು ದಿನ ಕೂಲಿ ಮಾಡುವ ಕಾರ್ಮಿಕನಿಗೆ ಸಿಗುವ ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಾಸವಾಗಬಾರದು. ಚಿಕಿತ್ಸೆ ಪಡೆಯುವ ಸಮಯದಲ್ಲಿ ಉಳಿದು ಕೊಳ್ಳುವ ಕೋಣೆ ಡೀಲಕ್ಸ್ , ಡೈಮಂಡ್ ಹೀಗೆ ಯಾವುದೇ ಆಗಿರಬಹುದು ಆದರೆ ಚಿಕಿತ್ಸೆ ಒಂದೇ ಆಗಿರಬೇಕು ಹಾಗು ಅದು ಕೈ ಗೆಟಕುವಂತಿರಬೇಕು ಎಂಬುದು, ಹಾಗಾಗಲಿ ಎಂಬುದೇ ಎಲ್ಲರ ಹಾರೈಕೆಯು ಕೂಡ ಏಕೆಂದರೆ ಸರ್ಕಾರ ಸರ್ಕಾರೀ ಆಸ್ಪತ್ರೆಗಳ ಮೂಲಕ ಇದನ್ನು ಸಾಧಿಸಬೇಕಾಗಿತ್ತು ಆದರೆ ಅದು ಕೇವಲ ಕನಸು ಹಾಗು ಗಗನ ಕುಸುಮ ಎಂಬತಾಗಿದೆ. ಇಂದು ಒಬ್ಬ ರೋಗಿ ಸರ್ಕಾರೀ ಆಸ್ಪತ್ರೆ ಗೆ ಹೋಗಲು ಮೀನಾ ಮೇಷ ಎಣಿಸುವುದು ಅಲ್ಲಿ ಚಿಕಿತ್ಸೆ ಹೇಗೋ ಏನೋ ಎಂದಲ್ಲ ಅಲ್ಲಿನ ಅನುಭವದಿಂದ ಅದು ಬದಲಾಗಬೇಕು. ಏಕೆಂದರೆ ಎಲ್ಲೆಡೆ ದೇವಿ ಶೆಟ್ಟಿ ಅಂತವರು ಇರಲಾಗುವುದಿಲ್ಲ, ಅಲ್ಲದೆ ಖಾಸಗಿ ಸಂಸ್ಥೆಗಳ ಆಮ್ಲಜನಕವೇ ಹಣ , ಸರ್ಕಾರೀ ಆಸ್ಪತ್ರೆಗಳ ಆಮ್ಲಜನಕವು ಹಣವೇ ಆದರೆ ಸರ್ಕಾರಕ್ಕೆ ಈ ಆಮ್ಲಜನಕ  ಆಸ್ಪತ್ರೆಗಳಿಂದಲೇ ಬರಬೇಕೆಂದಿಲ್ಲ ಸರ್ಕಾರಕ್ಕೆ ಹಣವೆಂಬ ಆಮ್ಲ ಜನಕದ ಮೂಲ ಬಹಳಷ್ಟಿದೆ. ಮೇಲಾಗಿ ಇದು ಸರ್ಕಾರದ ಕರ್ತವ್ಯವು ಹೌದು. ಒಬ್ಬ ವೈದ್ಯ ಹಾಗು ಒಂದು ಸಂಸ್ಥೆಯ ಅರಿವಿಗೆ ಬಂದ  ಅರೋಗ್ಯ ಭಾಗ್ಯದ ಸತ್ಯದರ್ಶನ ಸರ್ಕಾರಗಳ ಅರಿವಿಗೂ ಬರಬೇಕು. ಅದಾಗಬೇಕೆಂದರೆ ಮೂಡ, ದೂಡ , ನಿಗಮ ಹಾಗು  ಲ್ಯಾಟರಲ್ ಎಂಟ್ರಿ ಇವುಗಳಿಂದ ಪುರುಸೊತ್ತು ಸಿಗಬೇಕು.

https://epaper.samyukthakarnataka.com/editionname/Bangalore/SMYK_BANG/page/6/article/SMYK_BANG_20240826_06_2

ಕಾರ್ತಿಕ್ ಎಸ್ ಬಾಪಟ್.