Friday, April 14, 2017

ಈಶನೂರಲ್ಲಿ ಕೇಶವನಿಗೊಲಿದ ಮತದಾರ - ಪೊಲಿಟಿಕಲ್ ಕಮೆಂಟರಿ

 ಒಂದು ಕಡೆ ಸ್ವಾಭಿಮಾನಕ್ಕೆ ಪೆಟ್ಟಾಯಿತು ಹಾಗು ಅವಮಾನವಾಯಿತು ಎಂದು ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ರಾಜೀನಾಮೆಯಿಂದ ನಂಜನಗೂಡು ಶಾಸಕನಿಲ್ಲದೆ ತಬ್ಬಲಿಯಾದರೆ, ಗುಂಡ್ಲುಪೇಟೆಯಲ್ಲಿ ಸಚಿವ ಮಹಾದೇವ ಪ್ರಸಾದ್ ನಿಧನದಿಂದಾಗಿ ಶಾಸಕ ಸ್ಥಾನ ತೆರವಾಯಿತು, ಹೀಗೆ ಬೇಡದ ಚುನಾವಣೆ ನಂಜನಗೂಡು ಮತ್ತು ಗುಂಡ್ಲು ಪೇಟೆ ಜನರಿಗೆ ಬಂದೆರಗಿತು, ಗುಂಡ್ಲುಪೇಟೆಯದು ವಿಧಿಯಾಟವಾದರೆ ನಂಜನಗೂಡಿನದು ವ್ಯಕ್ತಿಗತ ಜಿದ್ದಿಗೆ ಬಿದ್ದು ಬರ ಮಾಡಿಕೊಂಡ ಬೇಡದ ಚುನಾವಣೆ ಎಂದು ಜನರೀಗ ಮಾತನಾಡುತ್ತಿದ್ದರೆ , ಶ್ರೀನಿವಾಸ ಪ್ರಸಾದ್ ಅವರೇ ಹೇಳುವ ಹಾಗೆ ಅವರದು ಇದು ಕೊನೆಯ ಚುನಾವಣೆ ಮತ್ತೆ ಚುನಾವಣಾ ಕಣಕ್ಕೆ ನಾನಿಲ್ಲ ಎಂದು ಘೋಷಿಸಿಕೊಂಡೇ ಕಣಕಿಳಿದಿದ್ದರು ಅಂದರೆ ೨೦೧೭ ರ ಉಪ ಚುನಾವಣೆಯೇ ಅಂತಿಮ ಹಾಗು ೨೦೧೮ರಲ್ಲಿ ಬರುವ ಚುನಾವಣೆಯಲ್ಲಿ ಅವರು ಸ್ಪರ್ದಿಸುವದಿಲ್ಲ ಎಂದು , ಹಾಗಾದರೆ ಕೇವಲ ವ್ಯಕ್ತಿಗತ ಜಿದ್ದಿಗೆ ಬಿದ್ದು ರಾಜೀನಾಮೆ ಕೊಡುವ ಅವಶ್ಯಕತೆಯೇನು ಎಂದು ಮತದಾರ ಅಂದು ಕೊಂಡನೋ ಏನು ಹಾಗೆ ಅಂದು ಕೊಂಡರೆ ಮತದಾರನ ಭಾವನೆ ಯಲ್ಲಿ ಯಾವ ದೋಷವು ಕಾಣದು, ಅದಿರಲಿ ಹಾಗೆ ಘೋಷಿಸಿಕೊಂಡ ಹೇಳಿಕೆಯೇ ಅವರಿಗೆ ಮುಳುವಾಯಿತೆ? ಏಕೆಂದರೆ ನೀವು ಯಾವುದೇ ಉಪ ಚುನಾವಣೆಯನ್ನು ತೆಗೆದುಕೊಳ್ಳಿ ಅಲ್ಲಿ ಭಾಗಷ ಅಳುವ ಪಕ್ಷದ್ದೇ ಮೇಲುಗೈ, ಮತದಾರ ಇಲ್ಲಿ ಇನ್ನುಳಿದ ಒಂದೋ ಎರಡೂ ವರ್ಷದಲ್ಲಿ ತನ್ನ ಕ್ಷೇತ್ರಕ್ಕೇನೂ ಲಾಭವಾಗುತ್ತದೆ ಎಂದು ನೋಡುತ್ತಾನೆಯೇ ಹೊರತು ಬೇರೇನೂ ಅಲ್ಲ,, ಅದರೊಂದಿಗೆ ಸ್ಥಳೀಯ ಸಮಸ್ಯೆಗಳು, ವಿಷಯಗಳು ಮುನ್ನೆಲೆಗೆ ಬಂದು ರಾಜ್ಯ ವ್ಯಾಪ್ತಿ ಹಾಗು ರಾಷ್ಟ್ರ ವ್ಯಾಪ್ತಿ ಚಾಲ್ತಿಯಲ್ಲಿದ್ದ ವಿಷಯಗಳು ಗೌಣವಾಗುತ್ತ ಹೋಗುತ್ತದೆ, ನಂಜನಗೂಡು ಹಾಗು ಗುಂಡ್ಲುಪೇಟೆಯಲ್ಲಾದದ್ದು ಅದೇ - ಇಲ್ಲದಿದ್ದರೆ ಎರಡು ದಶಕಗಳ ಹಿಂದೆ ಆದ ಬದನವಾಳು ಘಟನೆಯ ಕಹಿ ನೆನಪು ಚಾಲ್ತಿಗೆ ಬರುತ್ತಿತ್ತೇ? ಅದೇನೇ ಇರಲಿ ಶ್ರೀನಿವಾಸ ಪ್ರಸಾದ ಅವರ ಸೋಲು ವಯುಕ್ತಿಕ ಕಾರಣಗಳಿಗಾಗಿ ತೊಡೆ ತಟ್ಟಿ ಮುನ್ನಡೆದರೆ ಬಂದೆರಗುವ ಪರಿಣಾಮಕ್ಕೆ ಸಾಕ್ಷಿಯಾಗಿ ನಿಲ್ಲಲಿದೆ, ಹಾಗಾದರೆ ಶ್ರೀನಿವಾಸ ಪ್ರಸಾದರೆ ತಮ್ಮ ಸೋಲಿಗೆ ಹೊಣೆಯೇ ಎಂದು ನೋಡಲು ಹೊರಟರೆ ಉತ್ತರ ಕ್ಲಿಷ್ಟ ಏಕೆಂದರೆ, ಹಿರಿಯ ನಾಯಕರೊಬ್ಬರಿಗೆ ತೋರಬೇಕಾದ ಗೌರವ ಸಿಗಲಿಲ್ಲ ಎಂಬ ಅವರ ಅಳಲು ಸರಿಯಾಗಿಯೇ ಇದೆ ಆದರೆ ಕೇವಲ ಈ ಒಂದು ವಿಷಯಕ್ಕೆ ನಮ್ಮನ್ನೇಕೆ ಇನ್ನೊಂದು ಬೇಡದ ಚುನಾವಣೆಯ ಹೊಸ್ತಿಲಿಗೆ ತಂದು ನಿಲ್ಲಿಸುತ್ತೀರಿ ಎಂಬ ವಾದ ನಂಜನಗೂಡಿನ ಮತದಾರನದಿರಬಹುದು ಹಾಗು ರಾಜೀನಾಮೆ ಕೊಟ್ಟ ಸಂಧರ್ಭವು ಕೂಡ ಹಾಗೆ ಇದೆ ಗೆದ್ದರು ಮತ್ತೆ ಒಂದು ವರ್ಷದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತದೆ, ಹಾಗು ಕೊನೆಗೆ ಇವರು ಹೋಗಿ ಲ್ಯಾಂಡ್ ಆಗುವುದು ವಿರೋಧ ಪಕ್ಷದಲ್ಲಿ ಆದರಿಂದ ಇವರಿಗೇಕೆ ಮತ ಕೊಡುವ ಉಸಾಬರಿ ಎಂದು ಜಾಣ ಮತದಾರ ಯೋಚನೆ ಮಾಡಿರಬಹದು ಏಕೆಂದರೆ ಅಲ್ಲಿ "ನೋಟಾ" ಕ್ಕೆ ಚಾಲ್ತಿ ಯಾದ ೧೦೦೦ ಮತಗಳೇ ಮತದಾರನ ಜಾಣ್ಮೆ ಗೆ ಉದಾಹರಣೆ.

 ಇದೇನೇ ಇರಲಿ ಹಾಗಾದರೆ ಬಿ ಜೆ ಪಿ ಯಾ ಅಂಕ ಗಣಿತ ಉಲ್ಟಾ ಹೊಡೆದದ್ದೆಲ್ಲಿ ಎಂದು ನೋಡಲು ಹೊರಟರೆ, ಕೇವಲ ಅಂಕ ಗಣಿತದ ಬೆಂಬತ್ತಿ ಮೂಲ ನೆಲದ ಕೆಮೆಸ್ತ್ರಿಯೆಡೆ ಮುಖ ಮಾಡದೇ ಹೋಗಿದ್ದೆ ಸಮಸ್ಯೆಯ ಮೂಲ ಬಿ ಜೆ ಪಿ ಯು, ಬಿ ಯಸ್ ವೈ + ಶ್ರೀನಿವಾಸ ಪ್ರಸಾದ = ನಂಜನಗೂಡು ಈಸ್ ಈಸಿ ಕೇಕ್ ವಾಕ್ ಎಂದೆಣಿಸಿದರು, ಆದರೆ, ಈ ಅಂಕಗಣಿತದ ಕಾಂಬಿನೇಶನ್ ನೋಡಿದ ಕಾಂಗ್ರೆಸ್ ಮೊದಲು ಹಲವು ಹೆಸರನ್ನು ಹರಿಯಬಿಟ್ಟು, ಕೊನೆಗೆ ನಿಲ್ಲಿಸಿ ಗೆಲ್ಲಿಸಿದ್ದು ಕಳಲೆ ಕೇಶವ ಮೂರ್ತಿ ಯವರನ್ನು, ಹಾಗೆ ಕಾಂಗ್ರೆಸ್ ಈಶನೂರಿಗೆ ಕೇಶವನೇ ನಮ್ಮ ಕ್ಯಾಂಡಿಡೇಟ್ ಎಂದಾಗ ಪಂದ್ಯ ಹೆಚ್ಚು ರೋಚಕವಾಗುತ್ತ ಹೋಯಿತು, ಅದಕ್ಕೆ ಕಾರಣವಿಷ್ಟೇ ೨೦೧೩ ರ ವಿಧಾನಸಭೆಯ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ ಅವರಿಗೆ ಪ್ರಭಲ ಪೈಪೋಟಿಯನ್ನೊಡ್ಡಿ ಎರಡನೇ ಸ್ಥಾನಕ್ಕೆ ಸೀಮಿತವಾಗಿ, ಸತತ ಎರಡೆರಡು ಸೋಲಿನಿಂದ ಕಂಗೆಟ್ಟಿದ್ದ ಕಳಲೆ ಕೇಶವ ಮೂರ್ತಿ ಕೂಡ ಸರಿಯಾದ ಸಮಯಕ್ಕೆ ಕಾಯುತ್ತಿದ್ದರೇನೋ ಸಿಕ್ಕ ಅವಕಾಶವನ್ನು ಬಿಟ್ಟು ಕೊಡದೆ, ಹಾಗೆ ಕೇಶವ ಮೂರ್ತಿ ಯೇ ಅಭ್ಯರ್ಥಿ ಎಂದು ಘೋಷಣೆ ಯಾಗುತ್ತಿದಂತೆ ಕಾಂಗ್ರೆಸ್ ಅಂಕ ಗಣಿತದೊಂದಿಗೆ ಸ್ಥಳೀಯ "ಕೆಮಿಸ್ಟ್ರಿ" ಗು ಕೂಡ ಹೆಚ್ಚು ಒತ್ತು ಕೊಟ್ಟು ಒಂದು ವರ್ಗದ ಮತ ಹೆಚ್ಚು ದೃವೀಕರಣವಾಗುವಂತೆ ನೋಡಿಕೊಂಡಿತು, ಇದು ಅರ್ಥವಾಗಲು ಬಿ ಜೆ ಪಿ ಗಾಗಲಿ ಬಿ ಸ್ ವೈ  ಅವರಿಗಾಗಲಿ ಹೆಚ್ಚು ಸಮಯ ತೆಗೆದು ಕೊಳ್ಲಲಿಲ್ಲ

   ಇದೆಲ್ಲರ ಅರಿವಿದ್ದ ಬಿ ಸ್ ವೈ ಇನ್ನು ಸುಮ್ಮನಿದ್ದರಾಗದು ಎಂದು ೨೦೧೮ರಲ್ಲಿ ನನ್ನನು ಮುಖ್ಯಮಂತ್ರಿಯಾಗಿ ನೋಡಲಿಚ್ಚಿಸುವುದಾದರೆ ಈ ಚುನಾವಣೆಯಲ್ಲಿ ಪ್ರಸಾದ್ ಅವರನ್ನು ಬೆಂಬಲಿಸಿ ಎಂದು ಹೇಳಿ ಇದೆ ಫೈನಲ್ ಮ್ಯಾಚ್ ಎಂಬಂತೆ ಪ್ರಚಾರ ಮಾಡಿದರು, ಆದರೆ ಮತದಾರನ ಮನದಾಳದಲ್ಲಿ ಏನು ನಡೆಯುತ್ತಿತ್ತೋ ಬಲ್ಲವನ್ಯಾರು, ಅಥವಾ ಮತದಾರ ಎಂದೋ ಆದ ಘಟನೆಯನ್ನು ಮನದಾಳದಲ್ಲಿಟ್ಟುಕೊಂಡು ಶ್ರೀನಿವಾಸ್ ಪ್ರಸಾದ  ಎದುರಾಳಿಯಾಗಿ  ನಿಲ್ಲ ಬಲ್ಲ ಒಬ್ಬ ಪ್ರಭಲ ನಾಯಕನನ್ನು ಹುಡುಕುತ್ತಿತೋ ಏನೋ ಕೊನೆಗೆ ಈಶನೂರಿನ ಮತದಾರ ಒಲಿದದ್ದು ಕೇಶವನಿಗೆ


ಕೆಲವರು ಹೇಳುವ ಹಾಗೆ ಇನ್ನು ಮೇಲೆ ಒಂದು ವರ್ಗದ ಮತಗಳ ಧ್ರುವೀಕರಣ ನಡೆಯುವದಿಲ್ಲ ಎಂಬುದಕ್ಕೆ ಇದೇ ಚುನಾವಣೆ ಸಾಕ್ಷಿ ಎಂದು ಆದರೆ ಇದು ವರ್ಗ ವರ್ಗಗಳ ಮತಗಳ ಧ್ರುವೀಕರಣದ ಅಂತ್ಯವೋ ಪ್ರಾರಂಭವೋ?- ಅಂತ್ಯವಂತೂ ಅಲ್ಲ ಇದು ಪ್ರಾರಂಭವೇ, ಛೆ ನಮ್ಮ ನಾಯಕನಿಗೆ ಸೋಲಾಯಿತು ಎಂದು ಬಿ ಸ್ ವೈ ಬೆನ್ನಿಗೆ ನಿಂತಿರುವ ವರ್ಗ ನಿರ್ಧರಿಸಿದರೆ ಮತ್ತೊಂದು ಹಂತದ ಧ್ರುವೀಕರಣ ಪ್ರಾರಂಭಗೊಂಡಂತೆಯೇ ಲೆಕ್ಕ , ಇದೆಲ್ಲದರ ಮಧ್ಯೆ ಈ ಚುನಾವಣೆ ಪ್ರಭಲವಾಗಿ ಸ್ಥಾಪಿಸಿದ ಅಂಶವೆಂದರೆ ೨೦೧೮ ರ ಚುನಾವಣೆ ನಡೆಯುವುದು ಯಾರು ಏನೇ ಅಂದರು ಈ ಮೂರ್ವರಲಿ ನಿಮಗೆ ಹಿತ ಯಾರು ಎಂದು ಅಂದರೆ ಬಿ ಜೆ ಪಿ ಯಾ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿ ಸ್ ವೈ, ಜೆ ಡಿ ಯಸ್ ನಲ್ಲಿ "ಬ್ರದರ್" ಖ್ಯಾತಿಯ ಕುಮಾರಸ್ವಾಮಿ ಹಾಗು ಕಾಂಗ್ರೆಸ್ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಈ ಗೆಲುವಿನ ನಂತರ ನಡೆದ ಮುಖ್ಯಮಂತ್ರಿಯವರ ಪತ್ರಿಕಾ ಗೋಷ್ಠಿ ನೋಡಿದರೆ  ಪರೋಕ್ಷವಾಗಿ ಯಾದರು ಕಾಂಗ್ರೆಸ್ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ಎಂದು ಜನರ ಬಳಿ ಹೋಗಲಿದೆ ಎಂಬುವುದು ಸ್ಪಷ್ಟ ಆದ್ದರಿಂದ ಮುಂದಿನ ಚುನಾವಣೆಯ ಪಿಚ್ ಸಿದ್ಧವಿದೆ ಇನ್ನೇನಿದ್ದರೂ ಬ್ಯಾಟಿಂಗ್ ಹಾಗು ಬೌಲಿಂಗ್ ಬಾಕಿ ಯಾರು ಶತಕದ ಹೊಸ್ತಿಲನ್ನು ದಾಟಲಿದ್ದಾರೆ ಎಂದು ಕಾಡು ನೋಡಬೇಕು, ಕಾಂಗ್ರೆಸ್ ಹಿಂದೆಂದೂ ಇಲ್ಲದ ಆತ್ಮವಿಶ್ವಾಸದೊಂದಿಗೆ ಸಜ್ಜಾಗಿದೆ, ಆದರೆ ಎಲ್ಲರು ಇತಿಹಾಸವನೊಮ್ಮೆ ತಿರುಚಿ ತಿರುಚಿ ನೋಡುತ್ತಿರಬೇಕು, ಏಕೆಂದರೆ ಪ್ರತಿ ಉಪ ಚುನಾವಣೆಯನ್ನು ಲೀಲಾ ಜಾಲವಾಗಿ ಗೆದಿದ್ದ ಬಿ ಜೆ ಪಿ ೨೦೧೩ ರಲ್ಲಿ ಮುಗ್ಗರಿಸಿತ್ತು, ಅಷ್ಟೇ ಏಕೆ ಉತ್ತರ ಪ್ರದೇಶದಲ್ಲಿ ೨೦೧೬ ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಮಾಜವಾದಿ ಎಲ್ಲ ಸ್ಥಾನಗಳನ್ನು ಗೆದ್ದಿತ್ತು ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ಆದದ್ದೇನು? ಅದೇನೇ ಇರಲಿ ಈ ಚುನಾವಣೆ ಒಂದೊಂದು ಬಗೆಯಲ್ಲಿ ಎಲ್ಲ ಪಕ್ಷದವರನ್ನು ಸಾರ್ವತ್ರಿಕ ಚುನಾವಣೆಗೆ ಸಜ್ಜು ಗೊಳಿಸುತ್ತಿದೆ ಹಾಗು ತಮ್ಮ ತಂತ್ರ ಪ್ರತಿ ತಂತ್ರವನ್ನು ಮರು ಪರಿಶೀಲಿಸಲು ಒದಗಿಸಿ ಕೊಟ್ಟಿದೆ, ಆದರೆ ನಮ್ಮ ಗುರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಎಂದು ಹೇಳಿ ಕೊಂಡಿರುವ ಜೆ ಡಿ ಯಸ್  ನ ನಡೆ ಯಾಕೋ ಅನುಮಾನಕ್ಕೆ ಎಡೆ ಮಾಡಿ ಕೊಡುತ್ತಿದೆ, ಕಾರಣವಿಷ್ಟೇ ಹಳೆ ಮೈಸೂರು ಪ್ರಾಂತ್ಯ ವೇ ಜೆ ಡಿ ಯಸ್ ನ ಪ್ರಭಲ ಪ್ರಾಂತ್ಯ ಇಂಥಾ ಜಾಗದಲ್ಲೇ ಅಭ್ಯರ್ಥಿ ಯನ್ನು ಹಾಕದೆ ಇದ್ದರೆ ತಪ್ಪು ಸಂದೇಶ ಕಳಿಸಿದಂತಾಗಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಆಸೆಗೆ ಮುಳುವಾಗುವುದಿಲ್ಲವೇ? ಮೇಲ್ನೋಟಕ್ಕೆ ಬೇಡದ ಚುನವಾಣೆಯ ಗೊಡವೆ ನಮಗೇಕೆ ಎಂದರು ಕಾರ್ಯಕರ್ತರಲ್ಲಿ ಗೊಂದಲ ಮೂಡದೇ ಇರಲಾರದು ಹೀಗೆ ಯಾವುದು ಒಳಿತೋ ಕೆಡುಕೋ ಅವರವರೇ ತೀರ್ಮಾನಿಸಿಕೊಳ್ಳಬೇಕು ಹಾಗು ಪ್ರಚಾರದ ಅಬ್ಬರ ಮುಗಿದಿದೆ ಇನ್ನಾದರೂ ಬರದತ್ತ ಎಲ್ಲ ಪಕ್ಷಗಳು ಗಮನಹರಿಸುವರೇ? ಅಲ್ಲಿ ಅನ್ನದಾತ ಹನಿ ನೀರಿಗೂ ಕಾದು ಕುಳಿತಿದ್ದಾನೆ.  

No comments:

Post a Comment