Friday, April 3, 2020

"ಅಂತರ್ಧ್ವನಿ" ಭಾಗ 1- ಆಟ ನೋಡಲು ಬಂದವಳ, ನೋಟ ಕದ್ದು ಹೃದಯದೋಟಕ್ಕೆ ಲಗ್ಗೆ ಇಟ್ಟವನೆ.

ಭಾಗ ೧ - ಲಾಕ್ ಡೌನ್ ಸಮಯದಲ್ಲಿ ,  ಹೀಗೊಂದು "ಅಂತರ್ಧ್ವನಿ" ಎಂಬ ನೀಳ್ಗಥೆ , ಸಾಧ್ಯವಾದಷ್ಟು ಬಿಡಿ ಬಿಡಿಯಾಗಿ ಒಂದೊಂದೇ  ಭಾಗವನ್ನುಟೈಪಿಸಿ ನನ್ನ ಬ್ಲಾಗ್ನಲ್ಲಿ ಹಾಗು ಫೇಸ್ ಬುಕ್ ನಲ್ಲಿ ಹಾಕುತ್ತೇನೆ , ಓದಿ ಇಷ್ಟವಾದರೆ ಲೈಕುಗಳ ಬದಲು ಏನಿಷ್ಟವಾಯಿತೆಂದು ತಿಳಿಸಿದರೆ ಇನ್ನಷ್ಟು ಬರೆಯಲು ಪ್ರೋತ್ಸಾಹ ಸಿಕ್ಕೀತು - ಮನೆಯಲ್ಲೇ ಇರಿ ಇದು ಬಂಧನದ ಸಮಯವಲ್ಲ , ಅನುಬಂಧನದ ಸಮಯ ...


ಅಂತರ್ಧ್ವನಿ - 

ಆಟ ನೋಡಲು ಬಂದವಳ, ನೋಟ ಕದ್ದು ಹೃದಯದೋಟಕ್ಕೆ ಲಗ್ಗೆ ಇಟ್ಟವನೆ.

ಅದು ಚೆನ್ನಗಿರಿಯ , ಚೆನ್ನಗಿರಿ ತಾಲೂಕಿನ ಅಂತರ ಕಾಲೇಜು ಕ್ರೀಡಾ ಸ್ಪರ್ಧೆ , ಅಂದು
ಮುಂಜಾನೆಯಿಂದಲೇ, ಅಮಿತೋತ್ಸಹದಿಂದ ನಾವೆಲ್ಲರೂ ಕಾಲೇಜಿನಿಂದ ಹೊರಡುವಾಗ ಮೈಮನಗಳು "
ಬಾರ್ ಬಾರ್ ಹೊ , ಬೋಲೋ ಯಾರ್ ಹೊ ಅಪನೇ ಜೀತ್ ಹೊ, ಊನಕಿ ಹಾರ್ ಹೊ , ಕೊಹಿ ಹಮ್ ಸೆ
ಜೀತ್ ನ ಪಾಏ ಚಲೋ ಚಲೋ ಚಲೇ ಚಲೋ" ಎಂದು ಗುನುಗುತ್ತಿತ್ತು , ನನ್ನ ತಂಡದ ಸ್ಪರ್ಧೆ ಖೋ
ಖೋ ಆಟದ ಎಲ್ಲ ಹಂತವನ್ನು ಮುಗಿಸಿ ಕೊನೆಯ ಎರಡು ಹಂತದ ಪಂದ್ಯಕ್ಕೆ ತೇರ್ಗಡೆಯಾಗಿತ್ತು
, ಇನ್ನು ಸಾಕಷ್ಟು ಸಮಯವಿದೆಯಲ್ಲ ಎಂದು ನಮ್ಮ ಕಾಲೇಜಿನ ಹುಡುಗರನ್ನು ಪ್ರೋತ್ಸಾಹಿಸಲು
"ವಾಲಿಬಾಲ್" ತಂಡದ ಆಟ ನೋಡಲು ಬಂದೆವು , ಅಂದಿನ ಆ ಒಂದು ಆಟ ನನ್ನ ಹೃದಯದ ಓಟವನ್ನು
ಬದಲಿಸಬಲ್ಲದೆಂದು ನಾನಂದುಕೊಂಡಿರಲಿಲ್ಲ .

ಆಟ ಶುರುವಾಯಿತು , ಸಹಜವಾಗಿಯೇ ನನ್ನ ತಂಡದವರ ಪರ "ಚೀರ್ಸ್" ಶುರುವಾಗಿತ್ತು, ಲಲನೆಯರ
ಚೀರ್ಸ್ ಗೆ ಮನಸೋತ ಹುಡುಗರ ಗುಂಪು ರಣರಂಗವೇನೋ ಎಂಬಂತೆ ಪೈಪೋಟಿಗೆ ಬಿದ್ದರು. ಆದರೆ
ಅದೆಲ್ಲಿದೆ ಗಡ್ಡವರ್ಮನೆ , ನಮ್ಮ ತಂಡದ ಅತ್ಯುತ್ತಮ್ಮ ಸರ್ವ್ ಗೆ ಎದುರಾಳಿ
ತಂಡದವನಾದರೂ ಶಭಾಷ್ ಶಭಾಷ್ "what a serve" beauty , guys look at that, this
is what I was telling  ಎಂದು ನೀನು ಇಂಗ್ಲಿಷ್ನಲ್ಲಿ ಉಲಿಯುತಿರೆ, ಆಟ ನೋಡಲು
ಬಂದವಳ ನೋಟ ಕದಿಯುವ ಮುನ್ಸೂಚನೆ ಕೊಟ್ಟಿದ್ದೆ, ನನಗೆ ಗಡ್ಡವೆಂದರೆ ಅಲೆರ್ಜಿ , ಗಡ್ಡ
ಬಿಟ್ಟವರ ಕಂಡರೆ ನಾನು ಗಾವುದ ಗಾವುದ ದೂರ, ಅದೇನೋ ಗಡ್ಡವೆಂದರೆ ಸಿಟ್ಟು,
ಗಡ್ಡವೆಂದರೆ ದುಗುಡ, ಗಡ್ಡವೆಂದರೆ ಭಯ , ಆದರೆ ಅಂದು ನಿನ್ನ ನೋಡಿದಾಗಂದಿನಿಂದ ಈ
ಹೃತಿಕ್ , ಆಮಿರ್ ಖಾನ್, ರಣಭೀರ್, ಶಾರುಖ್ ಎಂಬ ಕ್ಲೀನ್ ಷೇವ್ಡ್ boys ಗಳನ್ನೂ
ನಿನ್ನ ಮುಂದೆ ನಿವಾಳಿಸಿ ತೆಗೆಯಬೇಕೆಂದೆನಿಸುತ, ಅಂದು ಆ ವೆರೆಗಿದ್ದ ಗಡ್ಡದ ಮೇಲಿನ
ವಿರೋಧಾಭಾಸಗಳೆಲ್ಲ ಮಾಯವಾಗಿ ಗಡ್ಡವೆಂದರೆ ಸ್ಟ್ರಾಂಗ್, ಗಡ್ಡವೆಂದರೆ ಪೌರುಷ,
ಗಡ್ಡವಿದ್ದರೇನೇ ಹುಡುಗ ಎಂದೆನಿಸಿತು, ನಾನು ನಾನಾಗಿರದೆ ನಿನ್ನ ತಂಡದ ಸಂಭ್ರಮಕ್ಕೂ
ದನಿಯಾಗತೊಡಗಿದೆ, ಆಗ ಉಲಿದಳು ರಾಧಿಕೆ "ವಸು" ಗಡ್ಡ ಡೇಂಜರ್ ಕಣಮ್ಮಿ , ಗಡ್ಡ
ಬಿಟ್ಟವರು ಕಿಲಾಡಿಗಳು ನಂಬಬಾರದು ಎಂದು, ನಾನು ಆಕೆಯನ್ನು ಛೆ ಛೆ ಆಟ ಅಷ್ಟೇ ಕಣೇ
ಸುಮ್ಮನೆ ನಮ್ಮ ಹುಡುಗ್ರು ರೊಚ್ಚಿಗೆದ್ದು ಆಟವಾಡಲಿ ಎಂದು ಅವರಿಗೆ "ಚೀರ್ಸ್" ಎಂದೇ,
ರಾಧಿಕೆ ನನ್ನ ಮನದ ತುಮುಲಗಳು ಅರ್ಥವಾಗದಷ್ಟು ದಡ್ದಳಲ್ಲ , ಆಯ್ತು ಮುಂದುವರೆಸು ಎಂದು
ಕುಹುಕ ನಗೆ ಬೀರಿದಳು , ಅಂದು ಮೊದಲ ಬಾರಿ ನನ್ನ ಮೊಗ ಕೆಂಪೇರಿ , ನಾಚಿ ನೀರಾಗಿತ್ತು,
ಅಲೆಲೆ ವಸು ಎಂದು ನನಗೆ ನಾನೆ ಹೇಳಿಕೊಂಡಿದ್ದೆ.

ನನ್ನೀ ನೋಟ ಎಗ್ಗಿಲದೆ ಮುಂದ್ವರಿದಿತ್ತು , ನನ್ನ ಮೇಲೆ ಆ ವರುಣನಿಗೆ ಏನು ಸಿಟ್ಟೋ
ಎಂಬಂತೆ ಅಲ್ಲಿಯವರೆಗೂ ಇಲ್ಲದ ಮಳೆ ಧೋ ಎಂದು ಸುರಿಯಿತು, ಸ್ನೇಹಿತರೆಲ್ಲರೂ ಧಿಕ್ಕಾ
ಪಾಲಾಗಿ ಓಡುತ್ತಿರೆ ನಾನು ಮಾತ್ರ ಅಲ್ಲೇ , ಆದರೆ ನೀನೆ ಓಡಿ ಹೋಗಲು ನಿಂತಾಗ
ನಾನೋಡದಿದ್ದರೆ ಹೇಗೆ? , ಹೀಗೆ ನೀ ಓಡುತ್ತಿದೆ , ಒಮ್ಮೆಲೇ ನೀ "ವಸು" ಎಂದೇ ,
ಹೃದಯದಲ್ಲಿ ನೂರ್ ವೀಣೆ ಮೀಟಿದಂತಾಯಿತು , ಹಿಂತಿರುಗಿ ನಾ ನೋಡಲು ಕಣ್ಣಲೇ ಏನೆಂದು
ಕೇಳಲು ಅಯ್ಯೋ ಸಾರಿ ನೀವಲ್ಲ ನನ್ ದೋಸ್ತು ಕಣ್ರೀ ವಸುಧೇಂದ್ರ ಎಂದೇ , ಆಗ ನಾನು
ಮನಸಲ್ಲೇ ಯಾವನ್ ಅವ್ನು ವಸುಧೇಂದ್ರ  ಮನಸಲ್ಲೇ ಶಪಿಸಿ ಮಳೆಯಿಂದ ಇನಿತು ದೂರ ಸರಿದೆ.

ಧುತ್ತೆಂದು ಬಂದ ಮಳೆ ವಿರಾಮ ತೆಗೆದುಕೊಂಡಿತು, ಆಟ ಮುಂದ್ವರಿಯಿತು, ನೋಟ ಕ್ಷಣ
ಕ್ಷಣಕ್ಕೂ ನೂರ್ಮಡಿಯಾಗುತ್ತಿತ್ತು , ಕೊನೆಗೆ ನಿನ್ನ ತಂಡವೇ ಗೆದ್ದಿತು, ಆದರೆ ನಿನಗೆ
ಕಿಂಚಿತ್ ಹಮ್ಮಿಲ್ಲ ಬಿಮ್ಮಿಲ್ಲ , ನನ್ನ ತಂಡದವರಿಗೆ ನಿನ್ನ ಕಾಂಪ್ಲಿಮೆಂಟ್
ಮುಂದುವರೆದಿತ್ತು, ನಿನ್ನ ಕಾಲೇಜಿನ ಲಲನೆಯರು "ಸಮೀರ್" ಇಟ್ ವಾಸ್ ರಿಯಲಿ ಗುಡ್ ಗೇಮ್
ಎಂದು ಕೈ ಕುಲುಕುತ್ತಿದರು, ಆದರೆ ನೀನು ಮಾತ್ರ ಹೌದ್ರಿ, ಥಾಂಕ್ ಯು  ಥಾಂಕ್ ಯು
ಅನ್ನುತ್ತಿದೆ.  ಆದರೆ ಅಂದು ಮೊದಲಬಾರಿಗೆ ನನ್ನಲಿದ್ದ ಹೆಣ್ತನದ ಪೋಸ್ಸ್ಸಿವೆನೆಸ್ಸ್
ಜಾಗ್ರತವಾಗಿತ್ತು, ಆದರೂ ಪರವಾಗಿಲ್ಲ ಸಮೀರ್ ಅಂಡ್ ವಸುಂಧರಾ ಚೆನ್ನಾಗಿದೆ ಹೆಸರು
ಎಂದು ಮನಸಲ್ಲೇ ಮಂಡಿಗೆ ತಿನ್ನುತ್ತಿದೆ, ಅಷ್ಟ್ರಲ್ಲಿ ಅಚಾನಕ್ಕಾಗಿ ನಮ್ಮ ಕಂಗಳು
ಎರಡನೇ ಬಾರಿ ಘಾಡವಾಗಿ ಸಂಧಿಸಿದ್ದವು , ನಿನ್ನ ಕಂಗಳಲ್ಲಿ ಪ್ರೀತಿ ಮೊಳಕೆಯೊಡೆದು
ನಕ್ಷತ್ರ ಮೂಡುವ ಮುನ್ಸೂಚನೆ ಕಾಣುತ್ತಿತ್ತು.

ಇದೆಲ್ಲದರ ನಡುವೆ ನಮ್ಮ ಆಟ ಶುರುವಾಯಿತು, ಆಟದಲ್ಲಿ ಮಗ್ನನಾಗಿದ್ದೆ ಆದರೆ ಆಟದಲ್ಲಿ
ಖೋ ಖೋ ಎಂದು ಖೋ ಕೊಡುವಾಗ ಬಾಯಿ ತಪ್ಪಿ "ಸಮೀರ್" "ಸಮೀರ್" ಎಂದಿದ್ದೆ, ಆಗ ರಾಧಿಕೆ
ಮತ್ತೊಮೆ ಉಲಿದಿದ್ದಳು "ವಸು" ಆವಾಗಲೇ ಹೇಳ್ದೆ ಗಡ್ಡ ಡೇಂಜರ್ ಬೇಡ , ಮತ್ತೆ ನಾ
ಭ್ರಮಾ ಲೋಕದಿಂದ ಹೊರಬಂದು ಆಟದಲ್ಲಿ ಮಗ್ನನಾಗಿ ಖೋ ಖೋ ಚಾಂಪಿಯನ್ ಆಗಿ ಹೊರ
ಹೊಮ್ಮಿದ್ದೆವು, ಅಂದು ನಾನು ಮತ್ತು ನಮ್ಮ ತಂಡ  ಆಟದಲ್ಲಿ ಗೆದ್ದಿದ್ದೆವು, ಆದರೆ
ಗೆಳೆಯ ನಾ ನಿನ್ನ ನೋಟಕ್ಕೆ ಸೋತಿದ್ದೆ, ಕೊನೆಗೆ ಎಲ್ಲವು ಮುಗಿಯಿತು, ಕ್ರೀಡಾಕೂಟ
ಮುಗಿದು ಹೊರಡಬೇಕು, Mr ಸಮೀರ್ ದಿಸ್ ಇಸ್ ವಸುಂಧರಾ ಫ್ರಮ್ ಎಂದು
ಪರಿಚಯಿಸಿಕೊಳ್ಳಬೇಕೆಂದೆನಿಸಿತು, ಆದರೆ ಅಂದಿನವರೆಗೂ ಇರದ ಸಂಕೋಚ ಅಂದು ನನ್ನನು
ಅಪೋಷನ್ ತೆಗೆದು ಕೊಂಡಿತ್ತು, ಆಗಂದುಕೊಂಡೆ ಅದೇ ಅಲ್ಲವೇ ಹೆಣ್ತನದ ಕುರುಹು ಎಂದು,
ನನ್ನ ಪಾಡಿಗೆ ನಾನು ಹೊರಟಿದ್ದೆ , ನೀನು ನಿನ್ನ ಪಾಡಿಗೆ ಹೊರಟಿದ್ದೆ , ಮತ್ತೆಂದಿಗೂ
ನಾವು ಸಂಧಿಸುವುದಿಲ್ಲವೇನೋ ಎಂಬ ಭಾವನೆ ನನನ್ನು ಖಿನ್ನಳನ್ನಾಗಿಸಿತ್ತು , ಆದರೆ ಪರಮ
ನಾಸ್ತಿಕಳಾದ ನನ್ನ ಕಿವಿಯಲ್ಲಿ "ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು
ಇದಕೆ ಸಂಶಯ ಬೇಡ" ಎಂಬ ದಾಸರ ಪದ ಗುನುಗಿದಂತಾಯಿತು , ಈ ಗುನುಗು ಭರವಸೆಯ ಬೆಳಕನ್ನು
ಮೂಡಿಸಿತ್ತು, ಆದರೆ ನೀ ಸಿಗದಿದ್ದರೆ ಎಂಬ ವಿರಹಾನುಭಾವ ಕಾಡುತ್ತಲೇ ಇತ್ತು,
ದಿವಸಗಳುರುಳುತ್ತಾ ಸಾಗಿತ್ತು , ಅಂದೊಂದು ದಿನ ಅಮ್ಮ ನಡಿ ರಾಯರ ಆರಾಧನೆಯಾಗುತ್ತಿದೆ
ಹೋಗಿ ಬರೋಣ ಎಂದಾಗ, ಅಂದಿನವರೆಗೂ ಇಲ್ಲ ನೀ ಹೋಗೆ ಎನ್ನುತಿದ್ದವಳು ಅಮ್ಮನೊಂದಿಗೆ
ಹೆಜ್ಜೆ ಹಾಕಿದ್ದೆ, ರಾಯರೊಂದಿಗೆ ನವನೀತ ಚೋರನ ದರ್ಶನವು ಆಗಿತ್ತು, ಆಗ ಕೇಳಿಸಿತು
ನೋಡು ಭಕ್ತಾದಿಗಳು ಮುಂದೆ ಬನ್ನಿ, ಮುಂದೆ ಬನ್ನಿ, ಎಂಬ ಕೂಗು, ಅದು ಅಂದಿನ "ವಾಟ್ ಆ
ಸರ್ವ್" ಎಂಬ ಕೂಗಿನಷ್ಟೇ ಘಾಡವಾಗಿತ್ತು , ಕತ್ತರಳಿಸಿ ನೋಡಿದೆ ಅಲ್ಲಿ ನೀನು!
ಆಗಂದುಕೊಂಡೆ ಅಂದು ನನ್ನ ಕಿವಿಯಲ್ಲಿ ದಾಸರ ಪದ ಗುನುಗಿದಕ್ಕೂ ಇಂದು ನೀ
ಇಲ್ಲಿರುವುದಕ್ಕೂ ಏನು ನಂಟು? , ಅದಿರಲಿ ಅಮ್ಮ ನನ್ನ ಜೀವನ ಪಾವನಯಾಯಿತೆಂದೆ,
ಅಮ್ಮನಿಗೆ ಆಶರ್ಯ!!! , ನೀನು ಭಕ್ತಾದಿಗಳು ಮುಂದೆ ಬನ್ನಿ ಮುಂದೆ ಬನ್ನಿ ಎನ್ನುತ್ತಲೆ
ಇದ್ದೆ , ನಾ ಮುಂದೆ ಮುಂದೆ ಬರುತ್ತಲೇ ಇದ್ದೆ ಆದರೆ ನೀ ಮಾತ್ರ ಭಕ್ತಾದಿಗಳನ್ನ
ನೋಡುತ್ತಿದೆ, ನಿನ್ನ ಭಕ್ತೆಯನ್ನು ನೀ ಮರೆತಿದ್ದೆ, ಆದರೂ ಕಣ್ ನೋಟಗಳು ಕೊನೆಗೂ
ಸಂಧಿಸಿ ಬಿಟ್ಟವು , ನೀನು ಒಂದು ಕ್ಷಣ ಒಹೋ "ಸ್ಪೋರ್ಟ್ಸ್" ಎಂದು ಹಲ್ಲು ಗಿಂಜಿ
ಮಾತಾಡಲು ನಿಲ್ಲುವೆ ಅಂದು ಕೊಂಡೆ ಆದರೆ ನೀನಂತವನಲ್ಲ , ಬರೇ ಒಂದು ಮುಗುಳ್ನಗೆ , ಆ
ನಗೆಯಲ್ಲೇ ಓ ಗೊತಾಯ್ತು ಗೊತಾಯ್ತು ಮುಂದೆ ಬನ್ನಿ ಮುಂದೆ ಬನ್ನಿ ಎನ್ನುತ್ತಿದೆ ,
ಅಂದಿನಿಂದ ರಾಯರ ಮಠಕ್ಕೆ ಪ್ರತಿ ಗುರುವಾರ ನನ್ನ ರುಜುವಾತು ಮುಂದುವರೆಯಿತು , ಆದರೆ
ಅಲ್ಲಿ ನೀನಿಲ್ಲ , ಆದರೇನು ಗುರುರಾಯರ ಮೇಲಿನ ಶ್ರದ್ಧಾ ಭಕ್ತಿ ಕಿಂಚಿತ್ತೂ
ಕಮ್ಮಿಯಾಗಲಿಲ್ಲ

ಇನ್ನು ನೀ ಸಿಗಲಾರೆಯೇನೋ ಅಂದು ಕೊಂಡೆ , ಆದರೆ ನೀನೆಂಬ ಜೀವೋನ್ಮಾದ ನನ್ನಲಿ
ಜೀವಂತವಾಗೇ ಇತ್ತು, ಸೇವಾ ಫಲಕದಲ್ಲಿ (ರಾಯರ ಮಠದ) ಎಲ್ಲಿಯಾದರೂ ಇಂದು ಪಂಚಾಮೃತ
ಅಭಿಷೇಕ "ಸಮೀರ್" ಅವರಿಂದ ಎಂದು ಬರೆದಿದೆಯೇನೋ
ಎಂದು ಹುಡುಕುತ್ತಿದೆ, ಹೀಗೆ ಜೀವನದ ಬಂಡಿ ಸಾಗುತಿತ್ತು ನನ್ನ ಬಿ ಏ ಕೋರ್ಸ್
ಮುಗಿದಿತ್ತು , ಕುವೆಂಪು ವಿಶ್ವ ವಿದ್ಯಾಲಯ ಕೈ ಬೀಸಿ ಕರೆಯುತ್ತಿತ್ತು , ವಸುಂಧರಾ ,
ಎಂ ಏ ಇನ್ ಎಕನಾಮಿಕ್ಸ್ ಎಂದು ಅಮ್ಮ ಹೆಮ್ಮೆಯಿಂದ ಹೇಳಿಕೊಳ್ಳುತಿದ್ದಳು, ತರಗತಿಗಳು
ಪ್ರಾರಂಭವಾಗಿದ್ದವು , ಎಲ್ಲರು ನಮ್ ನಮ್ಮ ಪರಿಚಯವನ್ನು ಸ್ನಾತಕೋತ್ತರ ಪದವಿಯ
ಗುರುಗಳಿಗೆ ಹೇಳಿ ಕೊಳ್ಳುತಿದ್ದವು , ಅದೆಲ್ಲಿಂದ ಬಂದೆಯೋ ನಾನು "ಸಮೀರ್" ನನಗೆ
"ತೇಜಸ್ವಿ" ಬಹಳ ಇಷ್ಟ ಹೀಗೆ ನಿನ್ನ ಪರಿಚಯ ಸಾಗುತಿತ್ತು , ನನ್ನ ಕಣ್ಗಳಲ್ಲಿ ಸಾವಿರ
ನವಿಲುಗಳು ರೆಕ್ಕೆ ಬಿಚ್ಚಿ ಕುಣಿಯುತ್ತಿದವು , ಮನಸು ವ್ಹಾ ರೇ ಮೇರೇ ಚಿಮಣಿ
ಕಾಲೇಜಿಗೆ ಬಂದವನು ನೊಟ್ಸ್ ಗೆ ಬಾರನೆ ಎಂದೆಂದಿತು 

ಮುಂದುವರೆಯುವುದು...

ಕಾರ್ತಿಕ್ ಎಸ್ ಬಾಪಟ್ 

No comments:

Post a Comment