Saturday, April 25, 2020

ಅಂತರ್ಧ್ವನಿ Part 2 - ಮನವ ಕದ್ದು ಒಲವ ಗೆದ್ದ ಪುಸ್ತಕ ಪರಿಚಾರಕ ನೀ...


ಅಂತರ್ಧ್ವನಿ Part 2 - ಮನವ ಕದ್ದು ಒಲವ ಗೆದ್ದ ಪುಸ್ತಕ ಪರಿಚಾರಕ ನೀ...   

ನಾನು ಮತ್ತು ವಸು ಕೊನೆಗೂ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ "M A in

Economics  " ಸ್ನಾತಕೋತ್ತರ ಪದವಿಗೆ ಸೀಟ್ ಗಿಟ್ಟಿಸಿಕೊಂಡಿದ್ದೆವು ,
ಹಾಸ್ಟೆಲ್ನಲ್ಲಿ ಇರುವುದು ಬೇಡ ಹಾಗಿದ್ದರೆ ಮಾತ್ರ ಕಾಲೇಜಿಗೆ ಸೇರಿ ಎಂದು ನಮ್ಮಿಬರ
ಮನೆಯಲ್ಲಿ ಕಟ್ಟಪಣೆ, ಶಿವಮೊಗ್ಗೆಯ ವಸುವಿನ ದೊಡ್ದಪನ ಮನೆಯಲ್ಲಿ ಉಳಿದು ಅಲ್ಲಿಂದ
ಅಡ್ಡಾಡಿಕೊಂಡು ನಿಮ್ಮ ಓದನ್ನು ಮುಂದ್ವರಿಸಲು ಅಡ್ಡಿಯಿಲ್ಲ ಎಂದು ಅವರ ಅಪ್ಪ ಗೆರೆ
ಎಳೆದಂತೆ ಮಾತಾಡಿದ್ದರು, ಆದರೆ ವಸುವಿಗೆ ಅದು ಇಷ್ಟವಿರಲಿಲ್ಲ , ದೊಡ್ಡಪ್ಪ
"ಗುರ್ರಪ್ಪ" ಕಣೆ ನಮ್ಮಪ್ಪನ ಸಿಟ್ಟು ನೀ ನೋಡಿದ್ದೀಯಾ ಇದರ ಹತ್ತು ಪಟ್ಟು ಹೆಚ್ಚು
ದೊಡ್ಡಪ್ಪನ ಸಿಟ್ಟು ಎಂದು ನೀ ಪರಿ ಪರಿಯಾಗಿ ನಿನ್ನಮ್ಮ ಮತ್ತು ನನ್ನಮ್ಮನ ಬಳಿ
ಹೇಳಿದೆ, ನನ್ನಮನ ಮನಸು ಕಲ್ಲು ಸಕ್ಕರೆ ಅವಳ ಮುಂದೆ ಕಷ್ಟವೆಂದು ಬಾಯಿಬಿಟ್ಟರೆ
ಆಕೆಯಿಂದ ಬರುವುದು ಅಕ್ಕರೆ , ಬರಿ ಸಕ್ಕರೆ , ಅಮ್ಮ ಕೂಡಲೇ ತರೀಕೆರೆಯ ನನ್ನ
ಚಿಕ್ಕಮ್ಮನಿಗೆ ಎಲ್ಲ ವಿಷಯ ಸವಿಸ್ತಾರವಾಗಿ , ಹೇಳಿದಳು , ಚಿಕ್ಕಮ್ಮ ಓ ಬರಲಿ ಬಿಡು
ಇಲ್ಲೇ ಇರಲಿ , ಇಲ್ಲಿ ನಾನು ಪುಟ್ಟಿ ಮಾತ್ರ , ಇವರು ಗೊತ್ತಲ್ಲ ಇವರಿಗೆ ಒಂದೂವರೆ
ವರ್ಷದ assignement ಸಿಂಗಾಪೂರ್ ಕೈ ಬೀಸಿ ಕರೆಯಿತೆಂದು ಹೋಗಿದ್ದಾರೆ ನಮಗೂ ಸ್ವಲ್ಪ
ಬೇಸರ ಕಳೆಯುತ್ತೆ , ಇಬ್ಬರಿಗೂ ಪ್ರತ್ಯೇಕ ಕೋಣೆಯಿದೆ ಅವರ ನೆಪದಲ್ಲಾದರೂ ನೀನು ಬಂದು
ಹೋಗಿ ಮಾಡ್ತಿಯಾ ಎಂದಳು .



ಈ ಎಲ್ಲ ವೃತಾಂತವನ್ನು ಇಬ್ಬರ ಮನೆಯಲ್ಲೂ ಸವಿವರವಾಗಿ ತಿಳಿಸಿ, ಎಲ್ಲರನ್ನು
ಒಪ್ಪಿಸಿದಾಯಿತು , ವಸುಂಧರೆಯ ಅಮ್ಮ ಕೂಡ ಹೌದು ಹೌದು , ಹೆಣ್ಣು ಮಕ್ಕಳು , ಹೆಣ್ಣು
ಮಕ್ಕಳ ಕಣ್ ಅಳತೆಯಲ್ಲೇ ಇದ್ದರೆ ಚೆಂದ ಎಂದರು , ಎಲ್ಲ ಬುಕ್ ಬೆಡ್ಡಿಂಗ್ ರೆಡಿ ಮಾಡಿ
ಇಬ್ಬರ ಮನೆಯವರು ಬಸ್ಟ್ಯಾಂಡಿನ ವರೆಗೂ ಬಂದು ಬೀಳ್ಗೊಟ್ಟರು , ಆದರೆ ಇಬ್ಬರ
ಅಪ್ಪಂದಿರು ಬಸ್ಸ್ಟ್ಯಾಂಡ್ ವರೆಗೆ ಮಾತ್ರ ಎಂದವರು ತರೀಕೆರೆ ವರೆಗೂ ಬಂದಿದ್ದರು , ಆಗ
ತಿಳಿಯಿತು ಇದೆಲ್ಲ ಅಮ್ಮನ ಹುನ್ನಾರವೆಂದೇ , ನಾವು ಬೇಡ ನೀವೇ ಹೋಗಿ ಎಂದು ಇಬ್ಬರ
ಮನೆಯಲ್ಲಿ ಮಾತಾಡಿ ಕೊಂಡಂತಿತ್ತು , ನಮ್ಮನು ನಮ್ಮ ಚಿಕ್ಕಮನ ಸುಪರ್ದಿಯಲ್ಲಿ ಒಪ್ಪಿಸಿ
ಕೂಡಲೇ ಅಲ್ಲಿಂದ ನಮಪ್ಪ ಮತ್ತು ವಸುವಿನ ಅಪ್ಪ ಹೊರಟರು , ಹೊರಡುವಾಗ ಚಿಕ್ಕಮನಿಗೆ
ಅಪ್ಪ , ನಾಳೆ ರಾಧಾ ಮತ್ತು ವಸುವಿನ ಅಮ್ಮಂದಿರು ಬರ್ತಾರೆ ಒಂದೆರಡು ದಿನ ಇದ್ದು
ಹೋಗ್ತಾರೆ ಎಂದಾಗಲೇ ಗೊತ್ತಾದದ್ದು ಅಮ್ಮ ಇಲ್ಲಿ ಬರಲಿದ್ದಾಳೆಂದು , ಅಮ್ಮ ನೀ
ಷರ್ಲಾಕ್  ಹೋಮ್ಸ್ ಅಸಿಸ್ಟಂಟ್ ಆಗಿರಬೇಕಿತ್ತು ಅಂದು ಕೊಂಡೆ ಗುಟ್ಟು ಬಿಟ್ಟು ಕೊಡದ
ಗುಟ್ಟಮ್ಮ ನಿಮ್ಮಮ್ಮ , ನಮ್ಮಮ್ಮ ಎಂದಳು ವಸು .



ಒಂದು ದಿನದ ನಂತರ ಇಬ್ಬರ ಅಮ್ಮಂದಿರು ತರೀಕೆರೆಯ ಚಿಕ್ಕಮನ ಮನೆಗೆ ಲಗ್ಗೆಯಿಟ್ಟರು ,
ಕಾಲೇಜು ಪ್ರಾರಂಭವಾಗಲು ಇನ್ನೆರಡು ದಿನವಿತ್ತು , ನೀವು ಕಾಲೇಜಿಗೆ ಹೊರಡಿ, ನೀವು
ಅತ್ತ ಹೋಗೊತ್ತಿದಂತೆ , ನಾವು ಇತ್ತ ಚೆನ್ನಗಿರಿಗೆ , ಹೋಗಲಿದ್ದೇವೆ ಎಂದರು ,
ನನಗ್ಯಾಕೋ ಡೌಟ್ ಇವರೇನಾದರೂ ಸ್ಕೀಮ್ ಹಾಕಿದರೆ ಅಂತ ವಸು, ನಾವು ಕಾಲೇಜಿಗೆ ಹೋದ ಮೇಲೆ
, ನಮ್ಮನ್ನು ಹಿಂಬಾಲಿಸಲಿದ್ದಾರೆ ಎಂಬ ಡೌಟ್ ಎಂದೆ , ವಸು ಇಲ್ಲ ಇಲ್ಲ ಹಾಗೇನಿಲ್ಲ
ಎಂದಳು , ವಸು ಅಂದುಕೊಂಡಂತೆ ಅವರಿಬ್ಬರೂ ಮರಳಿ ಗೂಡಿಗೆ ಸೇರಿದ್ದರು , ಇತ್ತ ಕಾಲೇಜ್
ಕ್ಯಾಂಪಸ್ ಹಸಿರನ್ನು ಹೊತ್ತು ಕೈ ಬೀಸಿ ಕರೆಯುತ್ತಿತ್ತು , ತರೀಕೆರೆಯಿಂದ ಶಂಕರಘಟ್ಟ
ಕೇವಲ 30  ನಿಮಿಷದ ದಾರಿ , ಸುಂದರ ಪ್ರಕೃತಿಯ ಸೊಬಗನ್ನು ಸವಿಯುತ್ತ , ಕಂಗಳಲ್ಲಿ
ಸಾವಿರ ಕನಸನ್ನು ಹೊತ್ತು ಮೈ ಮನಗಳು ಗಮ್ಯದೆಡೆಗೆ ಗುರಿಯಿಟ್ಟಿದ್ದವು



 ಶಂಕರಘಟ್ಟ ಯೂನಿವರ್ಸಿಟಿ ಸ್ಟಾಪ್ ಎಂದು ಕಂಡಕ್ಟರ್ ಕೂಗಿ ಕೊಂಡನು, ನಾನು ವಸು
ಕೆಳಗಿಳಿದು ಇನ್ನೇನು ಕ್ಯಾಂಪಸ್ ನ ಬಳಿ ಹೋಗಬೇಕು , ವಸು ನಡಿಯೇ "ಚಹಾ" ಕುಡಿಯೋಣ
ಇಲ್ಲೆಲ್ಲಾ ಬರಿ ಕಾಫಿ , ಚಹಾ ಕುಡಿಯದ ಹೊರತು ನನ್ನ ತಲೆಯೇ ಓಡಲ್ಲ ಎಂದಳು ,
ಬಸ್ಸ್ಟ್ಯಾಂಡ್ ಗೆ ಆತು ಕೊಂಡಂತೆ ಇತ್ತು ಪುಟ್ಟ ಚಹಾದಂಗಡಿ, ಅದರ ಹೆಸರು "ಮಂಜಣ್ಣ"
ಕ್ಯಾಂಟೀನ್ ಆದಕೆ ಆತು ಕೊಂಡು ಸುಂದರವಾಗಿ ಅಲಂಕರಿಸಿದ್ದ ಪುಸ್ತಕದ ಅಂಗಡಿ , ಅದರ
ಹೆಸರು "ಅಕ್ಷರ" ಅದರ ಅಡಿ ಬರಹ  "ಕೈ  ಮುಗಿದು ಒಳಗೆ ಬಾ ಇದು ಅಕ್ಷರದ ಅಂಗಡಿ, ನಾವು
ಕೊಡುವೆವು ಕಲ್ಲು ಸಕ್ಕರೆ ದಂಡಿ ದಂಡಿ" ಆ ಪುಸ್ತಕದಂಗಡಿಯ ಅಡಿ ಬರಹ ನನ್ನನು ಬಹುವಾಗಿ
ಆಕರ್ಷಿಸಿತ್ತು , ಮಂಜಣ್ಣ ಅಂಗಡಿ "ಟೀ" A1  ಆಗಿತ್ತು , ಅಣ್ಣ ಟೀ ಸೂಪರ್ ಅಂದಳು ವಸು
, ಮಂಜಣ್ಣ ಹೌದ ಅಂದರು , ಆಗ ಗೊತ್ತಾಯಿತು ಸಕಲ ವೃತಾಂತ ಮಂಜಣ್ಣ is  ಫ್ರಮ್
ದಾವಣಗೆರೆ ಥಟ್ ಐಸ್ ವೈ ಟೀ is  ಸೂಪರ್ ಎಂದು , ಹೀಗೆ ಟೀ ಕುಡಿದು ಕಾಲೇಜಿನ
ಅಂಗಳಕ್ಕೆ ಕಾಲಿಟ್ಟೆವು , ನಮ್ಮಿಬರಲ್ಲೂ ಮೊದಲ ದಿನ ಮೌನ , ಆದರೆ ವಸುಂಧರೆಗೆ ತನ್ನ
ಗಡ್ಡದೊರೆ ಕಂಡೊಡನೆ ಮರುಭೂಮಿಯಲ್ಲಿ ಓಯಸಿಸ್ ಕಂಡಂತಾಗಿತ್ತು (ಕಳೆದ ಸಂಚಿಕೆಯಲ್ಲಿ
ವಸು ಇದನ್ನು ಹೇಳಿ ಕೊಂಡಿದ್ದಾಳೆ, ನೀಳ್ಗಥೆ ಪ್ರಾರಂಭವಾಗಿರುವುದೇ ಅವಳಿಂದ) ಆಗ ನಾನು
ಮತ್ತೊಮೆ ಉಲಿದಿದ್ದೆ ವಸು ಗಡ್ಡ ಡೇಂಜರ್ ಕಣಮ್ಮಿ , ಇದರ ಮೇಲೆ ನಿನ್ನಿಷ್ಟ ಎಂದು
ಆದರೆ ವಸು ಕೇಳಬೇಕಲ್ಲ .



 ಹೀಗೆ ಕಾಲೇಜು ಬ್ಯಾಕ್ ಟು ತರೀಕೆರೆ , ಮಂಜಣ್ಣ ಟೀ ಶಾಪ್ ಸ್ವಲ್ಪ ಹರಟೆ ಸಾಗುತಿತ್ತು
, ಅಂದೊಂದು ದಿನ ಮಂಜಣ್ಣನ ಅಂಗಡಿಯಲ್ಲಿ ಕುಳಿತು ಇಬ್ಬರು ಟೀ ಹೀರುತ್ತಿದೆವು , ನನ್ನ
ನೋಟ ಬಸ್ಸ್ಟ್ಯಾಂಡ್ ನತ್ತ ಹೊರಳಿತು , ಆಗಂದುಕೊಂಡೆ ಈ ಬಸ್ ಸ್ಟಾಂಡ್ ಗಳ ಹೆಸರು ಬಸ್
ಸ್ಟಾಂಡ್ ಎಂದು ಏಕಿಡಬೇಕು , "ಕನಸಿನೆಡೆಗೆ ಕೊಂಡೊಯುವ" ಕನಸಿನ ಗಾಡಿ ನಿಲ್ಲುವ ಸ್ಥಳ
"ಕನಸು ಸ್ಟಾಂಡ್" ಏಕಾಗಬಾರದು ಎಂದು ವಸುವಿಗೆ ಕೇಳಿದೆ , ಮೊದಲಾದರೆ ಆಕೆ ತಲೆ
ಕೆಟ್ಟಿದೆಯಾ ನೀನು ಎಕನಾಮಿಕ್ಸ್ ಕನ್ನಡ litrature ತರಹ ಮಾತಾಡಬೇಡ
ಅನ್ನುತಿದ್ದಳೇನೋ, ಆದರೆ ಮೊದಲ ಬಾರಿಗೆ ಆಕೆ ಹೌದು ಕಣೆ , ನೀ ಹೇಳಿದ್ದು ಸರಿ ಊರು
ಸಣ್ಣದಿರಬಹುದು , ಆದರೆ ಈ ಊರಿನ ಬಸ್ ಸ್ಟ್ಯಾಂಡ್ನಲ್ಲಿ ಬಂದು ನಿಂತಿರುವ ಕಂಗಳಲಿ
ಒಂದೊಂದು ಕನಸಿದೆ ಎಂಬಂತೆ ಭಾಸವಾಗುತ್ತಿದೆ ನೋಡು , ಅದೋ ಆ ಹುಡುಗಿಯನ್ನು ನೋಡು,
ನಮ್ಮ್ಮನ ಕನಸಿನ ಸಂಪ್ರದಾಯಿಣಿ ಪ್ರೇಮ ಶ್ರಾವಣಿಯಂತೆ ಭಾಸವಾಗುತ್ತಿದಾಳೆ , ಅವಳೆಷ್ಟು
ಸುಂದರವೋ ಅವಳ ಕಂಗಳಲಿ ಪ್ರತಿಫಲಿಸುತ್ತಿರುವ ಕನಸು ಅಷ್ಟೇ ಸುಂದರ , ಅವಳ ಕನಸುಗಳಿಗೆ
ರೆಕ್ಕ ಪುಕ್ಕ ಕೊಟ್ಟರೆ ಅವಳ ಹಿಡಿಯುವರಿಲ್ಲ ನೋಡು ಎಂದಳು , ಆಗ ಬೆರಗಾಗುವ ಸರದಿ
ನನ್ನದು, ನಾನು ಆಗ ಕೇಳಿಯೇ ಬಿಟ್ಟೆ ಮೈ ಡಿಯರ್ ವಸು ನೀನ್ ಯಾವಾಗ kannada
litrature ಆದೆ ಎಂದು , ವಸು ಅದು ಚಮತ್ಕಾರ ಕಣಮ್ಮಿ ಎಂದಳು . ಅಂದು ಮೊಟ್ಟ ಮೊದಲ
ಬಾರಿಗೆ ಎಲ್ಲಿಂದಲೋ ಎರಡು ಕಂಗಳು ನನ್ನನ್ನು ನೋಡಿದಂತೆ ಭಾಸವಾಯಿತು, ಹೆಣ್ತನಕೊಂದು
ವರ , ಹೆಣ್ಣಿಗೆ ಅತೀ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳು ಗಕ್ಕನೆ ಅರ್ಥವಾಗುತ್ತವೆ,
ವಸುವಿಗೆ ಈ ವಿಷಯ ತಿಳಿಸಿದೆ , ಅವಳು ಸುತ್ತಮುತ್ತ ಕಣ್ಣಾಡಿಸಿ ಗಡ್ಡದೊರೆ ಅಲಿಲ್ಲ
ಎಂದು ಖಾತ್ರಿ ಪಡಿಸಿಕೊಂಡು , ಹೌದು ಹೌದು ಎರಡಲ್ಲ ಹತ್ತು ಕಣ್ ನೋಡ್ತಿವೆ "ರಾಧು"
ಎಂದಳು , ನಡಿ ನಡಿ ಎಂದಳು , ಆದರೆ ಮತ್ತೆ ಮತ್ತೆ ನನಗನಿಸಿದ್ದು ಎಲ್ಲೋ ಯಾವುದೊ ಎರಡು
ಕಂಗಳು ನನ್ನ ನೋಡುತ್ತಿವೆ ಎಂದು ಇನ್ನೇನು ಹೊರಡ ಬೇಕು, ಗಮನ ಮತ್ತೆ ಆ ಪುಸ್ತಕದಂಗಡಿಯ
ಸುಂದರ ಹೆಸರು "ಅಕ್ಷರ" ಕೈ ಮುಗಿದು ಒಳಗೆ ಬಾ , ಇದು ಪುಸ್ತಕದ ಅಂಗಡಿ ಎಂಬ ಸಾಲು
ಮತ್ತೆ ನನ್ನನ್ನು ಆವರಿಸಿಕೊಂಡಿತು .



 ಹೀಗೆ ಸಾಗುತ್ತಿತ್ತು , ಅದೇ ಅನಿಸಿಕೆ ಯಾವುದೊ ಎರಡು ಕಂಗಳು , ನನ್ನನು ನೋಡುತ್ತಿವೆ
ಆದರೆ ಹಿಂಬಾಲಿಸುತ್ತಿಲ್ಲ ಎಂಬ ಭಾವನೆ , ಹಿಂಬಾಲಿಸುತ್ತಿಲ್ಲ ಹಿಂಬಾಲಿಸಿದರೆ
ಪ್ರಾಬ್ಲಮ್ ನೋಡಿದರೆ okay  ಅಲ್ಲವ ವಸು ಎನ್ನಲು , ವಸು ಲೇ ನೀನು ಕಂಪ್ಲೀಟ್ ರಾಂಗ್
ಆಗಿದಿಯ , ನಿಜವಾಗಿಯೂ ನಿನಗೆ ತಲೆ ಕೆಟ್ಟಿದೆ  ಮೊನ್ನೆ ಎರಡು ಕಂಗಳು ನೋಡಿದವು ಅಂದೇ
ಇವತ್ತು ಹಿಂಬಾಲಿಸಿಲ್ಲ ಆದರೆ ನೋಡುತ್ತಿವೆ ಅಂತೀಯ do you think ಇದು ಬೆಟರ್ ಸೈನ್?  ಇದು okay
ಅಂತೆಲ್ಲ ಕೇಳ್ತಿಯಾ ಏನಾಗಿದೆ ನಿಂಗೆ ನಡಿ ನಡಿ ಎಂದು ಕೂಗಾಡಿದಳು , ಅಷ್ಟ್ರಲ್ಲಿ
ಅಸ್ಪಷ್ಟ ಸುಂದರ ಕಂಗಳು ಪುಸ್ತಕದಂಗಡಿಯಲ್ಲಿ ಸರಿದಂತಾಯಿತು , ಹಾಗಾದರೆ ನೀ ಪುಸ್ತಕ
ಪರಿಚಾರಕ ನಾ? ............



ಮುಂದುವರೆಯುವುದು



ಕಾರ್ತಿಕ್ ಯಸ್ ಬಾಪಟ್...


No comments:

Post a Comment