Saturday, December 25, 2021

 ಬಸವನಗುಡಿಯ ಅಭೇದ್ಯ ಕೋಟೆಯ ಭೇದಿಸಿದ ಹಾರನಹಳ್ಳಿ.



ಅದು 1989  ಬಸವನಗುಡಿಯ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮೈ ಕೊಡವಿ ಮತ್ತೆ ಎದ್ದು ನಿಂತಿತ್ತು 224 ರಲ್ಲಿ 178 ಸೀಟ್ಗಳನ್ನು ಗೆದ್ದು ಕೊಂಡು ಭಾರಿ ಬೀಗಿತ್ತು , ಆದರೆ ಕಾಂಗ್ರೆಸ್ನ ಹಿರಿಯ ಮುತ್ಸದ್ದಿ ಹಾರನಹಳ್ಳಿ ರಾಮಸ್ವಾಮಿಗಳಿಗೆ ಬಸವನಗುಡಿ ಕ್ಷೇತ್ರ ಕೈ ಹಿಡಿಯಲಿಲ್ಲಅಂದು ರಾಮಸ್ವಾಮಿಗಳು ಗೆದ್ದಿದೆ ಆಗಿದ್ದರೆ ಕರ್ನಾಟಕ್ಕೆ ಅತ್ಯುತ್ತಮ್ಮ ಮುಖ್ಯಮಂತ್ರಿ ದೊರಕುತ್ತಿದ್ದರೇನೋ ಎಂದು ಈಗಲೂ ಅರಸೀಕೆರೆ , ಹಾಸನ ಮತ್ತು ಹಳೆಯ ಕಾಂಗ್ರೆಸ್ಸಿಗರು ಹಾಗು ಭಾ   ಮಿತ್ರರು ಹಾರನಹಳ್ಳಿ ಅವರ ವಿಷಯ ಬಂದಾಗ ಆಗಾಗ ಪ್ರಸ್ತಾಪಿಸುತ್ತಿರುತ್ತಾರೆ , ಅದಿರಲಿ ಇಂದು ಅದರ ಪ್ರಸ್ತಾಪವೇಕೆ ಎಂದರೆ ಮೊನ್ನೆ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ.

 ಹಿಂದೆ ನಡೆದ  ಬ್ರಾಹ್ಮಣ ಮಹಾಸಭಾ ಚುನಾವಣೆ ಒಂದೋ ಅವಿರೋಧವಾಗಿ , ಅಥವಾ ಏಕಪಕ್ಷೀಯ ಚುನಾವಣೆಯ ರೀತಿಯಲ್ಲಿ ನಡೆಯುತ್ತಿತ್ತು ಆದರೆ  ಬಾರಿ ಹಿರಿಯ ನ್ಯಾಯವಾದಿ ಶ್ರೀ ಅಶೋಕ ಹಾರನಹಳ್ಳಿ ಅವರ ಸ್ಪರ್ದೆಯಿಂದಾಗಿ ಇಡೀ ರಾಜ್ಯದಲ್ಲೇ ಸಂಚಲನವನ್ನು ಮೂಡಿಸಿತ್ತು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ  ಪ್ರಪ್ರಥಮ ಬಾರಿಗೆ ಬಸವನಗುಡಿಯ ಬೇಲಿ ದಾಟಿ ಕರ್ನಾಟಕದಾದ್ಯಂತ ಆರೋಗ್ಯಕರ ಚರ್ಚೆ ಮತ್ತು ಚಿಂತನೆಗಳಿಗೆ ನಾಂದಿ ಹಾಡಿತ್ತು ಅಷ್ಟೇ ಅಲ್ಲ ಯಾವ ಒಂದು ವಿಧಾನಸಭಾ ಹಾಗು ಲೋಕಸಭಾ ಚುನಾವಣೆಗಳಿಗೆಕಡಿಮೆ ಇಲ್ಲದಂತೆ ಪ್ರಚಾರ ದೊರೆಯಿತು

ಎರಡೇ ಎರಡು ತಿಂಗಳ ಹಿಂದೆ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾದ ಹಾರ್ನಹಳ್ಳಿಯವರಿಗ ಸಂಘಟನೆ ಮತ್ತಷ್ಟು ಬಲ ಪಡಿಸಿ ಕರ್ನಾಟಕದ ಸಮಸ್ತ ಬ್ರಾಹ್ಮಣ ಕುಟುಂಬದ ಏಳಿಗೆಗೆ ಇನ್ನಷ್ಟು ಹೆಚ್ಚು ಶ್ರಮಿಸಬೇಕು ಎಂದೆನಿಸಿ ಚುನಾವಣೆಗೆ ಧುಮುಕಿಯೇ ಬಿಟ್ಟರು , ಹಾಗೆ ಚುನಾವಣಾ ಕಣಕ್ಕೆ ಧುಮುಕಿದಾಗ ಇದರ ಆಳ ಅಗಲ ಖುದ್ದು ಅಶೋಕ ಹಾರನಹಳ್ಳಿ ಅವರ ಊಹೆಗೆ ಮೀರಿದಾಗಿತ್ತು , ಆದರೆ ಕರ್ನಾಟಕದಾದ್ಯಂತ ಸುತ್ತಾಡಿ ಬಸವನಗುಡಿಯಲ್ಲೇಜಡವಾಗಿದ್ದ ಬ್ರಾಹ್ಮಣ ಸಭಾ ಗೆ ವೇಗವನ್ನು ಕೊಟ್ಟು ಚುನಾವಣೆ ಹಾಗು ಸಂಘಟನೆಯ  ಪ್ರಾಮುಖ್ಯತೆ ಇಡೀ ಬ್ರಾಹ್ಮಣ ಸಮುದಾಯಕ್ಕೆ ಅರಿವಾಗುವಂತೆ ಮಾಡಿತು.

ಇವರ ವೇಗ ಕಂಡು ಪ್ರತಿಸ್ಪರ್ಧಿಗಳು ಕೂಡ ಬಸವನಗುಡಿಯಾಚೆ ಮುಖ ಮಾಡುವಂತೆ ಮಾಡಿತುಮೊದಲೆರಡು ಸುತ್ತಿನಲ್ಲಿ ಅಶೋಕ ಹಾರ್ನಹಳ್ಳಿ ಅವರು ೧೫೦೦ ಮತಗಳ ಅಂತರದಿಂದ ಮುಂದಿದ್ದರು , ಆದರೆ ಪ್ರತಿಸ್ಪರ್ಧಿ ರಘುನಾಥ್ ಹಾಗು ಲಕ್ಷ್ಮಿಕಾಂತ್ ಕೂಡ ಒಟ್ಟಾರೆ ಉತ್ತಮ ಮತಗಳನ್ನು ಪಡೆದಿದ್ದರಿಂದ ಕೊನೆಯ ಸುತ್ತಿನವರೆಗೂ ಎಲ್ಲರು ಫಲಿತಾಂಶಕ್ಕಾಗಿ ಕಾಯುವಂತೆ ಮಾಡಿತು ಕೊನೆಯಲ್ಲಿ  ಅಶೋಕ್ ಹಾರನಹಳ್ಳಿಅವರು ವಿಜಯಿಯಾದರುಕೇವಲ ಎರಡೇ ಎರಡು ತಿಂಗಳ ಮುಂಚೆ ಮಹಾ ಸಭಾದ ಹೊಸ್ತಿಲ್ಲಲ್ಲಿ ಬಂದು ನಿಂತ ಹಾರನಹಳ್ಳಿ ಅವರು ಎಲ್ಲರು ನಿಬ್ಬೆರಗಾಗುವಂತೆ ಬಸವನಗುಡಿಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಎಂಬ  ಅಭೇದ್ಯ ಕೋಟೆಯನ್ನು  ಭೇದಿಸಿ ಬ್ರಾಹ್ಮಣ ಮಹಾಸಭಾ ಕರ್ನಾಟಕದ ಮನೆ ಮಾತಾಗುವಂತೆ ಮಾಡಿದರು.

ಹಲವು ಸಂಘ ಸಂಸ್ಥೆಗಳಿಗೆ ತನ್ನದೇ ಆದ ಕೊಡುಗೆಯನ್ನು ಕೊಟ್ಟಿರುವಹಳ್ಳಿಯಿಂದ ದಿಲ್ಲಿಯವರೆಗೆ ತನ್ನದೇ ಆದವರ್ಚಸ್ಸನ್ನು ಹೊಂದಿರುವ ಹಾರನಹಳ್ಳಿಯವರತ್ತ ಇಡೀ ಬ್ರಾಹ್ಮಣ ಸಮಾಜ ಬದಲಾವಣೆಗಾಗಿ ನೋಡುತ್ತಿದೆ , ಮುಂಬರುವ ದಿನಗಳಲ್ಲಿ ಹಾರನಹಳ್ಳಿ ಅವರು ಈಗಾಗಲೇ ಸಿದ್ಧಪಡಿಸಿಕೊಂಡಿರುವ ಬದಲಾವಣೆಯ ನೀಲ ನಕ್ಷೆಯಶಸ್ವಿಯಾಗಿ ಮೈದೆಳೆಯಲಿ ,  ಮೂಲಕ ಬ್ರಾಹ್ಮಣ ಸಮಾಜದ ಏಳಿಗೆಯಾಗಲಿ ಎಂದು  ಸಮಸ್ತ ಬ್ರಾಹ್ಮಣ ಸಮಾಜ ಹಾರೈಸುತ್ತಿದೆ .

 

ಕಾರ್ತಿಕ್ ಬಾಪಟ್.






No comments:

Post a Comment