Tuesday, December 7, 2021

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯ ಹೊಸ್ತಿಲಲ್ಲಿ , ಬದಲಾವಣೆಯ ಸಿಹಿಗಾಳಿ.

ನೀವು ಬೆಂಗಳೂರಿನಲ್ಲಿದ್ದು ಅದರಲ್ಲೂ ಬಸವನಗುಡಿ , ವಿಜಯನಗರ, ಮಲ್ಲೇಶ್ವರ ಹಾಗು ರಾಜಾಜಿನಗರದ ಭಾಗದಲ್ಲಿ ಇದ್ದರೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಆಗು ಹೋಗುಗಳ  ಬಗ್ಗೆ ಆಗಾಗೇ ಕೇಳಿರುತ್ತೀರಿ, ಆದರೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೆಲಸ ಕಾರ್ಯಗಳು  ಬಸವನಗುಡಿ  ದಾಟಿ ಸದ್ದು ಮಾಡಿದ್ದು ಬಹಳ ಕಡಿಮೆ, ಇದೆಲ್ಲದಕ್ಕೂ ವ್ಯತಿರಿಕ್ತವೆಂಬಂತೆ  ಈ ಬಾರಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ  ಪ್ರಪ್ರಥಮ ಬಾರಿಗೆ ಬಸವನಗುಡಿಯ ಬೇಲಿ ದಾಟಿ ಕರ್ನಾಟಕದಾದ್ಯಂತ ಆರೋಗ್ಯಕರ ಚರ್ಚೆ ಮತ್ತು ಚಿಂತನೆಗಳಿಗೆ ನಾಂದಿ ಹಾಡಿದೆ , ಹಾಗು ಹೀಗೊಂದು ಸಂಘಟನೆಯು ಉಂಟು ಎಂಬ ಮನವರಿಕೆ ಅದೆಷ್ಟೋ ಬ್ರಾಹ್ಮಣ ಸಂಘ ಸಂಸ್ಥೆಗಳಿಗೆ ಸಮುದಾಯಕ್ಕೆ ಪ್ರಪ್ರಥಮವಾಗಿ ಮನವರಿಕೆಯಾಗಿದೆ ಎಂದರೆ ತಪ್ಪಿಲ್ಲ. ಇದು ನಿಜಕ್ಕೂ ಗಮನಾರ್ಹ, ಹೀಗಾಗಲು ಕಾರಣ ಶ್ರೀಯುತ ಅಶೋಕ ಹಾರನಹಳ್ಳಿ ಎಂದರೆ ತಪ್ಪಾಗಲಾರದು , ಅದು ಅವರಿಗಿರುವ ಗರಿಮೆ ಮತ್ತು ಅವರ ಹಿರಿಯರಿಂದ ಬಂದ ಬಳುವಳಿಯೂ ಹೌದು , ಇವರ ತಂದೆ  ಶ್ರೀ ಹಾರನಹಳ್ಳಿ ರಾಮಸ್ವಾಮಿಯವರು ಅವರ ರಾಜಕೀಯ ಚಿಂತನಾ ಲಹರಿ , ಸಾಹಿತ್ಯ ಪ್ರೇಮ, ಸಂಘಟನಾ ಕೌಶಲ್ಯ , ಗ್ರಾಮೀಣ ಪ್ರೇಮ , ಸದಾ ಸಮಾಜ ಮತ್ತು ಜನಾಂಗದ ಶ್ರೇಯೋಭಿವೃದ್ಧಿಗಾಗಿ  ತುಡಿಯುವ ಗುಣಗಳನ್ನು ಹೊಂದಿದ್ದರು. ಇವೆಲ್ಲ ಕೌಶಲ್ಯಗಳು  ಅಶೋಕ ಹಾರನಹಳ್ಳಿಯವರಿಗೆ ಬಳುವಳಿಯಾಗಿ ಬಂದಿದೆ. ರಾಜಕೀಯ ಪ್ರವೇಶದ ಅವಕಾಶಗಳಿದ್ದಾಗ್ಯೂ ಅವೆಲ್ಲವನ್ನು ಬದಿಗೊತ್ತಿ ಆಯ್ಕೆ ಮಾಡಿಕೊಂಡಿದ್ದು ವಕೀಲ ವೃತ್ತಿ ಮತ್ತು ರಾಜಕೀಯೇತರ ಸಮಾಜ ಸೇವೆ.


ಇತ್ತೀಚಿಗೆ ಬದಲಾದ ಸನ್ನಿವೇಶದಲ್ಲಿ (On 2nd  July 2021)  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅನಿವಾರ್ಯವಾಗಿ ಹಂಗಾಮಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿತು   ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಸರ್ವಸಮ್ಮತವಾಗಿ ಸೂಚಿತವಾದ ಹೆಸರು  "ಶ್ರೀ ಅಶೋಕ ಹಾರನಹಳ್ಳಿ". ಹಾಗಾದರೆ ಈಗೇಕೆ ಚುನಾವಣೆ ಎಂದರೆ ? ಪ್ರತಿ ಮೂರು ವರ್ಷಗಳ ನಂತರ ಈ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗಳಾಗಬೇಕು. 

ಹಿರಿಯ ನ್ಯಾಯವಾದಿಗಳು, ಹಲವು ಶಿಕ್ಷಣ ಸಂಸ್ಥೆಗಳನ್ನು, ಗೋಶಾಲೆಗಳನ್ನು ನಡೆಸುತ್ತಿರುವವರು  ಯಾವ ಒಂದು ಬಿಡಿಗಾಸಿನ ಅಪೇಕ್ಷೆಯಿಲ್ಲದೆ  ಮಠ ಮಾನ್ಯಗಳ ಹಾಗು ರಾಮ ಮಂದಿರದ ಪರವಾಗಿ ವಕಾಲತ್ತು ವಹಿಸಿದವರು ಹಲವು ಯುವ ನಾಯಕರಿಗೆ ದಾರಿ ದೀಪವಾದವರು , ಹೀಗೆ ಯಾವುದೇ ದೃಷ್ಟಿ ಕೋನದಿಂದ ನೋಡಿದರು, ಅಶೋಕ ಹಾರನಹಳ್ಳಿ ಅವರು  ಅವಿರೋಧವಾಗಿ ಆಯ್ಕೆ ಆಗಬೇಕಾಗಿತ್ತು ಆದರೆ ಹೀಗೇಕೆ ಎಂದು ನಾನೆ ಅವರನ್ನು ಪ್ರಶ್ನೆ ಮಾಡಿದ್ದೆ, ಹಲವಾರು ಬ್ರಾಹ್ಮಣ ಮುಖಂಡರು, ಸಂಸ್ಥೆಗಳು  ಕೂಡ ಇದೆ ಪ್ರಶ್ನೆಯನ್ನು ಅವರ ಮುಂದಿಟ್ಟಿದ್ದರು , ಆಗ ಅವರಿಂದ ಬಂದ ಉತ್ತರ ನಿಜಯವಾಗಿಯೂ ಪ್ರಶಂಸನೀಯ. ಯಾವತ್ತಿಗೂ ಚುನಾವಣೆಗಳೆಂಬುದು ಒಂದು understanding ನಲ್ಲಿ ನಡೆಯಬಾರದು, ಪ್ರಜಾಪ್ರಭುತ್ವದ ತಳಹದಿಯಲ್ಲಿ ಚುನಾವಣೆಗಳ ಮೂಲಕ  ಸ್ಪಷ್ಟ ಬಹುಮತದಿಂದ ಆಯ್ಕೆಯಾದಾಗ ಸಂಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗಳನ್ನೂ ತರಬಹುದು ಎಂಬುದು ಅವರ ಉತ್ತರವಾಗಿತ್ತು. ಅದಷ್ಟೇ ಅಲ್ಲ ತಮ್ಮ ಅಗಾಧವಾದ ನಲವತ್ತು ವರುಷಗಳ ವಕೀಲ ವೃತ್ತಿಯ ಅನುಭವದ ಮೇಲೆ ಹೇಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ ಒಂದು ಸಂವಿಧಾನಿಕ ಕಾಯಕಲ್ಪವನ್ನು ಕೊಡಬೇಕು ಆ ಮೂಲಕ ಸಂಘಟನೆ ಹಾಗು ಸಂಘಟನೆಯ ಯೋಜನೆಗಳು  ಕರ್ನಾಟಕದ  ವಿಪ್ರ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು ಎಂದು  ವಿವರಿಸಿದಾಗ ನನಗನಿಸಿದ್ದು ಅಶೋಕ ಹಾರನಹಳ್ಳಿ ಅವರನ್ನು ಆಯ್ಕೆ ಮಾಡದೇ ಇದ್ದಲ್ಲಿ ಅವರಿಗೇನು ನಷ್ಟವಿಲ್ಲಾ ಆದರೆ ನಷ್ಟಕ್ಕೆ ಒಳಗಾಗುವುದು ಕರ್ನಾಟಕದ ಸಮಸ್ತ ವಿಪ್ರ ಸಮುದಾಯ.ಹೀಗೆ ಬ್ರಾಹ್ಮಣ ಸಮಾಜದ ಒಳಿತಿಗಾಗಿ ಸದಾ ತುಡಿಯುವ ಅಶೋಕ್ ಹಾರನಹಳ್ಳಿ ವಿಪ್ರ ಸಮುದಾಯದ ಸೇವೆಗೆ ಕಾಯ ವಾಚಾ ಮನಸಾ ಕಟಿ ಬದ್ಧರಾಗಿ ನಿಂತಿದ್ದಾರೆ. ಬಹುಷಃ ಇದು ಕರ್ನಾಟಕದ  ತ್ರಿಮತಸ್ಥ ಬ್ರಾಹ್ಮಣರಿಗೆ  ಬಂದೊದಗಿರುವ ಸುವರ್ಣ ಅವಕಾಶ ಎಂದರೆ ತಪ್ಪಾಗಲಾರದು.  ಈ ಅವಕಾಶವನ್ನು ಕರ್ನಾಟಕದ ಸಮಸ್ತ ವಿಪ್ರ ಬಾಂಧವರು ಉಪಯೋಗಿಸಿಕೊಳ್ಳುತ್ತೀರೆಂದು ನನ್ನ ಅನಿಸಿಕೆ ಅಂದ ಹಾಗೆ ಸಭೆಗಳಿಗೆ   ಬರುತ್ತಿರುವ ಜನರೆಲ್ಲರೂ 12 /12 /2021 ರಂದು (ಮೊದಲ ಹಂತ )  ಹಾಗು  19 /12 /2021 ರಂದು  (ಎರಡನೆಯ ಹಂತ  ) ಚುನಾವಣೆಗೂ  ಬಂದರೆ ಅಶೋಕ್ ಹಾರನಹಳ್ಳಿ ಅವರ ಗೆಲುವು ಶತಸಿದ್ಧ.


ಕಾರ್ತಿಕ್ ಎಸ್ ಬಾಪಟ್ 

ಹವ್ಯಾಸಿ ಲೇಖಕ.




No comments:

Post a Comment