Monday, July 29, 2024

 ಬರಿಕೈಯಲ್ಲಿ ಹಿಂತಿರುಗಿದ  ಶೇಕ ಹಸೀನಾ ,ನೆತ್ತರು ಚೆಲ್ಲಿದ ಬಾಂಗ್ಲಾ..



ಮೊನ್ನೆ ಮೊನ್ನೆ ಪ್ರಧಾನಿ ಮೋದಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ ಬಾಂಗ್ಲಾದೇಶದ ಪ್ರಧಾನಿ ಶೇಕ ಹಸೀನಾ ನಂತರ ಪಯಣಿಸಿದ್ದು ಚೀನಾ ದೇಶಕ್ಕೆ, ಹಾಗೆಂದು ಭಾರತದೊಡನೆ ಕೋಪಗೊಂಡೋ ಅಥವಾ ಅಸಮಾಧಾನ ಗೊಂಡು ಹಸೀನಾ ಮೇಡಂ ಚೀನಾ ದೇಶಕ್ಕೆ ಹೋಗಿದ್ದಲ್ಲ. ಅದು ಎರಡು ದೊಡ್ಡ  ಶಕ್ತಿಯುತ ದೇಶಗಳ ನಡುವೆ ತೋರಬೇಕಾದ   ಸಮತೋಲಿತ ರಾಜತಾಂತ್ರಿಕತೆಯ ಅನಿವಾರ್ಯತೆ. ಹಾಗೆ ನೋಡಿದರೆ ಬಾಂಗ್ಲಾ ದೇಶಕ್ಕೆಚೀನಾ  ನೇಪಾಳ ಹಾಗು ಭೂತಾನ ನಂತೆ ಕೇವಲ ನೆರೆಯ ದೇಶ ಮಾತ್ರ, ಆದರೆ ಭಾರತಕ್ಕೆ ಹಾಗಲ್ಲ ಸರಿ ಸುಮಾರು 4,096 ಕಿಲೋಮೀಟರ್ (ಸುಮಾರು 2,500 ಮೈಲಿ) ಗಡಿಯನ್ನು ಬಾಂಗ್ಲಾದೇಶ ಭಾರತದ  ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ತ್ರಿಪುರ  ಹಾಗು ಮಿಜೋರಾಂ ರಾಜ್ಯಗಳೊಂದಿಗೆ ಹೊಂದಿದೆ. ಕಾರಣಕ್ಕಾಗಿಯೇ ಬಾಂಗ್ಲಾದೇಶದ ಅರ್ಥವ್ಯವಸ್ಥೆ, ಕಾನೂನು ವ್ಯವಸ್ಥೆ ಅಲ್ಲಿಯ ರಾಜಕೀಯ ಹೀಗೆ ಯಾವುದೇ ವಿಭಾಗದಲ್ಲಿ ಏನೇ ವ್ಯತ್ಯಾಸಗಳು ಕಂಡು ಬಂದರೆ ಭಾರತ ಜಾಗರೂಕತೆಯಿಂದ ಅಲ್ಲಿನ ಸ್ಥಿತಿ ಗತಿಗಳಿಗೆ ಸ್ಪಂದಿಸಬೇಕು ಹಾಗು ಬಾಂಗ್ಲಾದೊಂದಿಗೆ ಭಾರತದ ಸಂಬಂಧವು ಕೂಡ ಅಷ್ಟೇ ಗಟ್ಟಿಯಾಗಿಯೇ ಇದೆ. ನಾವು ಇಲ್ಲಿ ಕುಳಿತು ಬಾಂಗ್ಲಾ ದೇಶವೆಂದರೆ ಸಂಪೂರ್ಣವಾಗಿ    ಮೂಲಭೂತವಾದ ವನ್ನು  ಪೋಷಿಸುವ ದೇಶ ಎಂದು ಪಾಕಿಸ್ತಾನದೊಂದಿಗೆ ಹೋಲಿಸಿದರೆ ಅದು ನಮ್ಮ ತಪ್ಪಾದೀತು. ಅಲ್ಲಿನ ಕೆಲ ರಾಜಕಾರಣಿಗಳಿಗೆ  ಭಾರತ ಹಾಗು ಪಾಕಿಸ್ತಾನ ಎಂದು ಸೌಹಾರ್ದದಿಂದಿರುವುದು ಬೇಕಿಲ್ಲ. ಆದರೆ ಬಾಂಗ್ಲಾದ ಕಥೆ ಹಾಗಲ್ಲ ಬಾಂಗ್ಲಾ ವಿಮೋಚನಾ ಚಳುವಳಿಯನ್ನು ಬೆಂಬಲಿಸಿ ಬಾಂಗ್ಲಾದ ಮುಕ್ತಿ ವಾಹಿನಿ ಪಡೆಗೆ ಶಕ್ತಿ ತುಂಬಿ  ಬಾಂಗ್ಲಾ ದೇಶವನ್ನು  ಪಾಕಿಸ್ತಾನದಿಂದ ಮುಕ್ತಿ ಗೊಳಿಸಿದ್ದು ಭಾರತವೇ. ಇದನ್ನು  ಬಾಂಗ್ಲಾ ದೇಶ ಕೂಡ ಮರೆತಿಲ್ಲ. ಈಗಲೂ ಢಾಕಾದಲ್ಲಿ   ಜಗನ್ನಾಥನ ಉತ್ಸವವನ್ನು  ಬಹಳ ಯಶಸ್ವಿಯಾಗಿ ಢಾಕಾದ ಬೀದಿಗಳಲ್ಲಿ ಟ್ರಾಫಿಕ್ ಜಾಮ್ ಆಗುವಷ್ಟು ವಿಜೃಂಭಣೆಯಿಂದ ನಡೆಯುವುದನ್ನು ಖುದ್ದು ಕಣ್ಣಾರೆ ನಾನೆ ಕಂಡಿದ್ದೇನೆಆದರೆ ಬದಲಾದ ಸನ್ನಿವೇಶದಲ್ಲಿ ಕೆಲವು ಮೂಲಭೂತವಾದಿ ಸಿದ್ದಾಂತವನ್ನು ಬೆಂಬಲಿಸುವ ಪಟ್ಟಭದ್ರ ಹಿತಾಸಕ್ತಿಗಳು ಬಾಂಗ್ಲಾ ಜನರಲ್ಲಿ ಭಾರತದ ಬಗ್ಗೆ ಪ್ರಯತ್ನ ಪೂರ್ವಕವಾಗಿ ದ್ವೇಷ ಮನೋಭಾವನೆಯನ್ನು ಬಿತ್ತುವ ಕೆಲಸ ಮಾಡುತ್ತಿವೆ. ಕಾರಣಕ್ಕಾಗಿಯೇ ಚೀನಾ ದೇಶಕ್ಕೆ ಬಾಂಗ್ಲಾದೇಶದ ಮೇಲೆ ಎಲ್ಲಿಲ್ಲದ ಪ್ರೀತಿ   ಅದರಲ್ಲೂ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅಥವಾ ಭಾರತದೊಂದಿಗೆ ಗಡಿರೇಖೆ ಯನ್ನು ಹೊಂದಿರುವ ಯಾವುದೇ ದೇಶವಿರಲಿ ದೇಶದೊಂದಿಗೆ ವ್ಯವಹರಿಸಲು ಚೀನಾ ದೇಶಕ್ಕೆ ಎಲ್ಲಿಲ್ಲದ ಕುಟಿಲೋತ್ಸಾಹ. ಆದ್ದರಿಂದ ಕಾಲದಿಂದ ಕಾಲಕ್ಕೆ ಬಾಂಗ್ಲಾದ   ದೊಡ್ಡ ದೊಡ್ಡ ಸೇತುವೆಗಳನ್ನು ಕಟ್ಟಲು, ಆಸ್ಪತ್ರೆಗಳನ್ನು ಕಟ್ಟಲು ಹಾಗು ನಾನಾ  ಮೂಲಸೌಕರ್ಯ ಯೋಜನೆಗಳ ಮೇಲೆ ಹಣ ಸುರಿಯುತ್ತಲೇ ಇದೆ, ಹಾಗೆಂದು  ಭಾರತವೂ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ  ಭಾರತವು ಕೂಡ ಆಗಾಗ್ಗೆ ಹಣ ಸಹಾಯ ಮಾಡುತ್ತಲೇ ಇದೆ, ಹಾಗಿದ್ದರೂ ಆಂತರಿಕ ಸಮಸ್ಯೆ , ರಾಜಕೀಯ ಒತ್ತಡ ಇವೆಲ್ಲವೂ ಶೇಕ್ ಹಸೀನಾರನ್ನು ಚೀನಾ ದೇಶದ ಮುಂದೆ ಸಾಲಕ್ಕಾಗಿ ಕೈ ಚಾಚುವಂತೆ ಮಾಡಿತ್ತು. ಚೀನಾ ಕೂಡ ಮೊದ ಮೊದಲು ಹಣದ ಹರಿವನ್ನು ಸುಗಮ ಗೊಳಿಸಿತ್ತು , ಆದರೆ ಈಗ ಚೀನಾದ ಆರ್ಥಿಕತೆ ಉತ್ತರದಿಂದ ದಕ್ಷಿಣದ ಕಡೆ ಸಾಗುತ್ತಿದೆ ಇಂತಹ ಸಂಧರ್ಭದಲ್ಲಿ ಶೇಕ್ ಹಸೀನಾ ಚೀನಾದ  ಜಿನ್ ಪಿಂಗ್  ಬಳಿ  ಬಿಲಿಯನ್ ಡಾಲರ್ಗಳ ಸಹಾಯ ಕೇಳಿದ್ದರುಆದರೆ ಜಿನ್ ಪಿಂಗ್ ಭರವಸೆ ಕೊಟ್ಟಿದ್ದು ಕೇವಲ ಬಿಲಿಯನ್ ಡಾಲರ್ಗಳಿಗೆ, ಬೆಳವಣಿಗೆಯಿಂದ ಬೇಸೆತ್ತ ಶೇಕ ಹಸೀನಾ ಚೀನಾದ ಗೊಡವೆಯೇ ಬೇಡ ಎಂದು ಪ್ರವಾಸವನ್ನು ಅವಧಿಗೆ ಮುಂಚೆಯೇ  ಮೊಟಕುಗೊಳಿಸಿ ಬಾಂಗ್ಲಾದೇಶಕ್ಕೆ ಬರಿ ಕೈಯಲ್ಲಿ ಹಿಂದಿರುಗಿದ್ದಾರೆ.

 

ಇತ್ತ ಬರಿಗೈಯಲ್ಲಿ ಹಿಂತಿರುಗಿದ್ದ ಶೇಕ ಹಸೀನಾರನ್ನು  ಎದುರುಗೊಂಡಿದ್ದು  ಮೀಸಲು ಹೋರಾಟದ ಕಿಚ್ಚು. ಹಾಗೆ ನೋಡಿದರೆ ಹೋರಾಟ ಹೊಸದೇನಲ್ಲ 2018 ರಲ್ಲೂ ರೀತಿಯ ಹೋರಾಟ ಹುಟ್ಟಿ ಕೊಂಡಿತ್ತು,ಅದರ ಫಲವಾಗಿ ಅಂದೇ ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಲಾಗಿತ್ತು. ಆದರೆ ಇತ್ತೀಚಿಗೆ ಅಲ್ಲಿನ  ನ್ಯಾಯಾಲಯ   ಮೀಸಲಾತಿಯನ್ನು ಮತ್ತೆ ಜಾರಿಗೊಳಿಸಬೇಕೆಂದು ಆದೇಶಿಸಿತ್ತು, ಆದರೆ ಬಾಂಗ್ಲಾ ಯುವಕರಿಗೆ ಆದೇಶ ಸರಿ ಕಾಣಲಿಲ್ಲ ಯುವಕರ  ರೋಷಾವೇಶಕ್ಕೆ ಕಾರಣವೂ ಇತ್ತು, ಬಾಂಗ್ಲಾದೇಶದಲ್ಲಿ 2018 ಮುಂಚೆ ಇದ್ದ ಮೀಸಲಾತಿ ಪ್ರಮಾಣ  56 % ,ಅದರಲ್ಲಿ 30 % ಸ್ವತಂತ್ರ ಹೋರಾಟಗಾರರ ಕುಟುಂಬಕ್ಕೆ , 10 % ಮಹಿಳಾ ಮೀಸಲಾತಿ , 10 % ಹಿಂದುಳಿದ ಪ್ರದೇಶಗಳಿಗೆ , 5 % ಅಲ್ಪಸಂಖ್ಯಾತರು ಹಾಗು ಕೆಲವು ನಿರ್ಧಿಷ್ಟ ವರ್ಗಕ್ಕೆ  ಹಾಗು 1 % ವಿಶೇಷ ಚೇತನರಿಗೆ ಹೀಗೆ ವಿಭಜಿಸಲಾಗಿತ್ತುಸರಿ ಸುಮಾರು ಆರರಿಂದ ಏಳು ವರುಷಗಳ ಕಾಲ ಮೆರಿಟ್ ಆದರದ ಮೇಲೆ ಉದ್ಯೋಗ ಪಡೆದವರನ್ನು ನೋಡಿದ್ದ ಯುವ ಸಮೂಹ ಅವರ ಹಾದಿಯಲ್ಲೇ ತಮಗೂ ಒಳ್ಳೆಯ ಸರ್ಕಾರೀ ಕೆಲಸ ದೊರಕೀತು ಎಂದು ಕೊಂಡಿದ್ದರು. ಆದರೆ ಇದ್ದಕಿದ್ದ ಹಾಗೆ ಮತ್ತೆ ಮೀಸಲು ಅಂದಾಗ ಯುವಜನತೆ ಕಂಗಾಲಾಗಿ ಹೋಗಿದ್ದಾರೆ, ಮೊದ ಮೊದಲು ಯೂನಿವೆರ್ಸಿಟಿಯ ಕ್ಯಾಂಪಸುಗಳಲ್ಲಿಪ್ರತಿಭಟನೆ ಶಾಂತ ರೂಪದಲ್ಲೇ ಇತ್ತು. ಆದರೆ ಕಿಚ್ಚು ಫೇಸ್ಬುಕ್ ಸಹಾಯದಿಂದ ಎಲ್ಲೆಡೆ ಕಾಳ್ಗಿಚ್ಚಿನಂತೆ ಹಬ್ಬಿ ನೂರಾರು ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತಾಯಿತು, ವಿದ್ಯಾರ್ಥಿ ಸಮೂಹದೊಂದಿಗೆ ಅಲ್ಲಿಯ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿಯು ಚಳುವಳಿಗೆ ಧುಮುಕಿದಾಗ ಚಳುವಳಿ ಉಗ್ರ ರೂಪ ತಾಳಿದೆ. ಕಾರಣವಿಷ್ಟೇ ಬಾಂಗ್ಲಾದೇಶದಲ್ಲಿ  ಜನವರಿ 2024  ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಭಲ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಚುನಾವಣೆಯನ್ನೇ ಬಹಿಷ್ಕರಿಸುವ ಎಡವಟ್ಟು ಮಾಡಿ ಕುಳಿತಿತ್ತು, ಪರಿಣಾಮವಾಗಿ ಅವಾಮಿ ಲೀಗ್ ಶೇಖ ಹಸೀನಾ ಐದನೇ ಬಾರಿಗೆ ಪ್ರಧಾನ ಮಂತ್ರಿ ಯಾಗಿ ಆಯ್ಕೆಯಾದರು, ಹಾಗು ವಿರೋಧ ಪಕ್ಷ ತನ್ನ ಸ್ವಯಂಕೃತ ಅಪರಾಧದಿಂದಾಗಿ ಸಂಸತ್ನಲ್ಲಿ ತನ್ನ ಅಭಿಪ್ರಾಯ ಮಂಡಿಸುವ ಅವಕಾಶವನ್ನೇ ಕಳೆದು ಕೊಂಡಿತು. ಚಡಪಡಿಕೆ ಢಾಕಾದ ರಸ್ತೆ ರಸ್ತೆಗಳಲ್ಲಿ ಮೀಸಲು ಹೂರ್ತದಲ್ಲಿ ಉಗ್ರ ರೂಪದಲ್ಲಿ ಕಾಣಿಸಿಕೊಂಡಿತು ಎಂದರೆ ತಪ್ಪಾಗಲಾರದು. ಬಹುಶಃ ಬಾಂಗ್ಲಾದೇಶದ ಪರಿಸ್ಥಿತಿಯನ್ನು ನೋಡಿದವರಾರು ಇನ್ನೆಂದು ವಿರೋಧ ಪಕ್ಷಗಳನ್ನೇ ಇಲ್ಲದಂತೆ ಮಾಡುತ್ತೇವೆ ಎಂದು ಹೇಳಲಾರರು ಎಂದು ಭಾವಿಸುತ್ತೇನೆ. ಸಂಸತ್ ನಲ್ಲಿ ಪ್ರಭಲ ವಿರೋಧ ಪಕ್ಷ ಇರದೇ ಇದ್ದರೆ ಏನಾದೀತು ಎಂಬುದಕ್ಕೆ ಬಾಂಗ್ಲಾ ನಿದರ್ಶನವಾಗಿ ನಿಲ್ಲಲಿದೆ.

ಬಾಂಗ್ಲಾದ ಯುವಕರು ರೊಚ್ಚಿಗೆದ್ದಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ, ಅಲ್ಲಿಯ ಪರಿಸ್ಥಿತಿಯೇ ಹಾಗಿದೆ. ನೀವು ಹಾಗೆ ಸುಮ್ಮನೆ ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಢಾಕಾದ ಗಲ್ಲಿಗಳಲ್ಲಿ ನಡೆಯುತ್ತಾ ಹೋಗಿ ಅಲ್ಲಿನ ದೃಶ್ಯಗಳೇ ಅಲ್ಲಿನ ಶ್ರಮಿಕರ , ಕಾರ್ಮಿಕರ ಕಥೆಗಳನ್ನು ಹೇಳುತ್ತವೆ. ಢಾಕಾದ ಯಾವುದೇ ದಾರಿಯಲ್ಲಿ ಹೋದರು ನಿಮಗೆ ಪಕ್ಕನೆ ಸಿಗುವುದು ಸೈಕಲ್ ರಿಕ್ಷಾ ಅದು ನಡೆಯುವುದು ಪೆಟ್ರೋಲ್ , ಡೀಸೆಲ್ ನಿಂದಲ್ಲ , ಆದರೆ ಅದರ ಪೆಡಲ್ಗಳನ್ನು ತುಳಿಯುವುದರಿಂದ ಅಂದರೆ ನೀವೇ ಊಹಿಸಿ, ಇಂದು ಭಾರತದಲ್ಲಿ ಟಾಂಗಾ ಗಳೇ ಹಳೆಯ ಪಳೆಯುಳಿಕೆಯಂತೆ ಅಲ್ಲೊಂದು , ಇಲ್ಲೊಂದು ಕಾಣ ಸಿಗುತ್ತವೆ ಆದರೆ ಬಾಂಗ್ಲಾ ದೇಶದಲ್ಲಿ ಈಗಲೂ ಸೈಕಲ್ ರಿಕ್ಷಾಗಳು ಕಾಣ ಸಿಗುತ್ತವೆ, ಮತ್ತು ಅವು ಅಲ್ಲಿ ಅತ್ಯಂತ ಅಗ್ಗದ ಸಾರಿಗೆ ಸಾಧನ , ಹೀಗೆ ಬಡತನದ ದೃಶ್ಯಗಳು ಯಾವ ವಿವರಣೆಯು ಬೇಕಿಲ್ಲದೆ ಅಂಕೆಗೆ ಸಿಗುತ್ತವೆ. ಮತ್ತು ಅಲ್ಲಿಯ ಲೇಬರ್ ಇಸ್ ವೆರಿ ಚೀಪ್ ಹಾಗು ಅದೇ ಕಾರಣಕ್ಕೆ ಅಲ್ಲಿ ಹೆಚ್ಚು ಹೆಚ್ಚು ಜವಳಿ ಉದ್ಯಮಗಳು ಕಾಣ ಸಿಗುತ್ತವೆ ಹಾಗು ಬಾಂಗ್ಲಾದ ಬೆಳವಣಿಗೆಗೆ ಜವಳಿ ಉದ್ಯಮದ ಕೊಡುಗೆಯು ಅಪಾರ ಆದರೆ ಅಲ್ಲಿನ ಯುವಕರು ಎದುರಿಸುತ್ತಿರುವ ಸಮಸ್ಯೆ "ಅಂಡರ್ ಎಂಪ್ಲಾಯ್ಮೆಂಟ್ " ಅಂದರೆ ಹೆಚ್ಚು ಹೆಚ್ಚು ಕಲಿತ ಯುವಕರು  ಜವಳಿ ಕಾರ್ಖಾನೆಗಳಲ್ಲಿ ಕೇವಲ ಕಾರ್ಮಿಕ ನಾಗಿ ದುಡಿಯಲು ಸಿದ್ದರಿಲ್ಲ. ಕಲಿತ ಯುವ ಸಮೂಹದ ಕನಸು ಅದಕ್ಕಿಂತ ದೊಡ್ಡದು ಮೀಸಲು ಅದಕ್ಕೆ ಅಡ್ಡಿ ಉಂಟು ಮಾಡಿತು, ಸಮಯಕ್ಕೆ ಸರಿಯಾಗಿ ವಿರೋಧ ಪಕ್ಷದ ಬೆಂಬಲವು ದೊರಕಿ ಬೆಳಗಾಗುವುದರಲ್ಲಿ ನ್ಯಾಯಯುತವಾದ ಹಕ್ಕಿಗಾಗಿ ಶಾಂತಿಯುತವಾಗಿ ನಡೆಯಬೇಕಿದ್ದ ಚಳುವಳಿ ಉಗ್ರ ರೂಪ ತಾಳಿ ಯುವಕರ ಪ್ರಾಣ ತೆಗೆದಿದ್ದು ವಿಪರ್ಯಾಸ, ಹಾಗೆಂದು ಶೇಖ್ ಹಸೀನಾ ಆಡಳಿತ ಬಾಂಗ್ಲಾ ಪ್ರಜೆಗಳ ಒಳಿತನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದಾಗಿಯೋ ಅಥವಾ  ಶೇಕ್ ಹಸೀನಾ ಆಡಳಿತಾವಧಿಯಲ್ಲಿ ಬಾಂಗ್ಲಾ ಅಭಿವೃದ್ಧಿ ಕಂಡಿಲ್ಲವೆಂದಲ್ಲ. ಒಂದಾನೊಂದು ಕಾಲದಲ್ಲಿ ಪಾಕಿಸ್ತಾನದ ಅತ್ಯಂತ ಹಿಂದುಳಿದ  ಪ್ರಾಂತ್ಯಕ್ಕೆ ಸೇರಿದ್ದೇ ಬಾಂಗ್ಲಾದೇಶ 1971 ಪಾಕಿಸ್ತಾನದೊಂದಿಗಿನ  ಕದನದ ನಂತರ ಬಡತನ , ಕ್ಷಾಮ , ಆರ್ಥಿಕ ಹೊಡೆತ ಗಳೆಲ್ಲವನ್ನು ಮೆಟ್ಟಿ ನಿಂತು ದೇಶವೇ ನಿಬ್ಬೆರಗಾಗುವಂತೆ ಎದ್ದು ನಿಂತಿದೆ , ಇದರ ಕುರುಹುಗಳು 2005 ಮತ್ತು 2006 ರಲ್ಲೇ ಕಂಡು ಬಂದಿತ್ತು, ಆದರೆ ಆಗ ಇದು ಕೇವಲ ಕಾಕತಾಳೀಯ ಮತ್ತು ತಾತ್ಕಾಲಿಕ ಎಂದೇ ಬಣ್ಣಿಸಲಾಗಿತ್ತು. ಆದರೆ ಅಂದಿನಿಂದ, ಬಾಂಗ್ಲಾದೇಶದ ವಾರ್ಷಿಕ ಜಿಡಿಪಿ ಬೆಳವಣಿಗೆಯು ಪಾಕಿಸ್ತಾನಕ್ಕಿಂತ  ವರ್ಷಕ್ಕೆ ಸುಮಾರು 2.5 ಶೇಕಡಾ ಮೀರಿದೆಬಾಂಗ್ಲಾದೇಶದ ತಲಾ ಆದಾಯವು  ಪಾಕಿಸ್ತಾನದ ತಲಾ ಆದಾಯಕ್ಕಿಂತ   ವರ್ಷಕ್ಕೆ ಸುಮಾರು 3.3 ಶೇಕಡಾವಾರು ವೇಗವಾಗಿ ಬೆಳೆಯುತ್ತಿದೆಯಂತೆಹಾಗಾದರೆ ಒಂದು ಕಾಲಕ್ಕೆ ಪಾಕಿಸ್ತಾನದ ಅಂತ್ಯಂತ ಹಿಂದುಳಿದ ಪ್ರದೇಶವಾಗಿದ್ದ ಬಾಂಗ್ಲಾ ಹೇಗೆ ಪಾಕಿಸ್ತಾನವನ್ನು ಮೀರಿಸುತ್ತಿದೆ ಎಂದು ನೋಡಿದರೆ , ಬಾಂಗ್ಲಾದೇಶ ತನ್ನ ಬೆಳವಣಿಗೆಗಾಗಿ ತನ್ನ ಸಾಮಾಜಿಕ ಸ್ಥರಗಳಲ್ಲಿ  ಭಾರಿ ಬದಲಾವಣೆಯನ್ನು ಮಾಡಿ ಕೊಂಡಿತು ಅದು ಮಹಿಳೆಯರ ಸಬಲೀಕರಣದಿಂದ ಹಿಡಿದು ಇನ್ಕ್ಲ್ಯೂಸಿವ್ ಬ್ಯಾಂಕಿಂಗ್ ವರೆಗೆ (ಅಂದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಬ್ಯಾಂಕಿಂಗ್ ಸವಲತ್ತುಗಳನ್ನು ಹೊಂದುವುದು) ಅದರಲ್ಲಿ  ಬಹು ದೊಡ್ಡ ಕೊಡುಗೆ ಸರ್ಕಾರೇತರ ಸಂಸ್ಥೆ  ಗ್ರಾಮೀಣ ಬ್ಯಾಂಕ್ನಾದು ಹಾಗು ಹೆಚ್ಚು ಹೆಚ್ಚು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳುವಂತೆ ಶೇಕ್ ಹಸೀನಾ ಸರ್ಕಾರ ಮಾರ್ಪಾಟುಗಳನ್ನು ಮಾಡುತ್ತಲೇ ಇದೆ. ಒಂದು ಅಂದಾಜಿನ ಪ್ರಕಾರ ಕೇವಲ 10% ಬ್ಯಾಂಕ್ ಖಾತೆಗಳು ಬಾಂಗ್ಲಾ ದೇಶದಲ್ಲಿ ಡೊರ್ಮಂಟ್ ಅಕೌಂಟ್ಗಳು (ಡೊರ್ಮಂಟ್   ಅಕೌಂಟ್ ಅಂದರೆ ಒಂದು ಬ್ಯಾಂಕ್ ಖಾತೆಯನ್ನು ನಿರ್ದಿಷ್ಟ ಅವಧಿಯ ವರೆಗೆ ಉಪಯೋಗಿಸದೆ ಇದ್ದರೆ ಅದನ್ನು ಡೊರ್ಮಂಟ್ ಎಂದು ಕರೆಯುತ್ತಾರೆ ) ಅಂದರೆ ಬಾಂಗ್ಲಾದೇಶದಲ್ಲಿ ಬ್ಯಾಂಕ್ ಅಕೌಂಟ್ ಅನ್ನು ತೆರೆಯುವದಷ್ಟೇ ಅಲ್ಲ , ಅದನ್ನು ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಅಷ್ಟೇ ಹಾಸು ಹೊಕ್ಕಾಗಿ ಉಪಯೋಗಿಸುತ್ತಿದ್ದಾರೆ ಎಂದು ಅರ್ಥ. ಪ್ರಮಾಣ ಭಾರತಕ್ಕೆ ಹೋಲಿಸಿದರೆ ಭಾರತದಲ್ಲಿ Dormant ಅಕೌಂಟ್ ಗಳು 88% (ಭಾರತದ ಜನಸಂಖ್ಯೆ ಗೂ ಬಾಂಗ್ಲಾದೇಶದ ಜನಸಂಖ್ಯೆ ಗೂ ಹಾಗು ಭೂಗೋಳಿಕ ಪರಿದಿಗೂ ತಾಳೆ ಹಾಕುವುದು ಸರಿ ಇಲ್ಲದಿರಬಹುದು ಆದರೆ 88% ಎಂಬುದು ಬಹು ದೊಡ್ಡ ಅಂಕಿ) ಹಾಗು ಬಾಂಗ್ಲಾದೇಶ ತನ್ನ ನೆರೆಹೊರೆಯೊಂದಿಗೆ ಅಂತ್ಯಂತ ಸಕಾರಾತ್ಮಕವಾಗಿ ವ್ಯವಹರಿಸುತ್ತಿದೆ , ಮತ್ತು ಭಾರತವು ಕೂಡ ಬಾಂಗ್ಲಾದೇಶ ದೊಂದಿಗೆ ಮಿತ್ರತ್ವವನ್ನು ಪೋಷಿಸುತ್ತಲೇ ಬಂದಿದೆಬಹುಶಃ ಪಾಕಿಸ್ತಾನ  ತತಕ್ಷಣಕ್ಕೆ ಬಾಂಗ್ಲಾದೇಶವನ್ನು ಒಂದು ಕೇಸ್ ಸ್ಟಡಿ ಎಂಬಂತೆ ಅಳವಡಿಸಿಕೊಂಡು ಅಭಿವೃದ್ಧಿಯ ಪಥದತ್ತ ಸಾಗುವುದು ಹೇಗೆ ಎಂದು ಯೋಚಿಸಬೇಕು, ಏಕೆಂದರೆ ಎಂದಿಗಾದರೂ ನಮ್ಮ ನೆರೆಹೊರೆಯವರು ಕ್ಷೇಮವಾಗಿರಬೇಕು  ಆಗ ಅಲ್ಲಿ ಅರಾಜಕತೆ , ಹಾಗು ಕುಟಿಲತೆ ಇರುವುದಿಲ್ಲ ಹಾಗಾದಗ ಸುಮ್ಮನೆ ಕಾಲು ಕೆರೆದು ಜಗಳಕ್ಕೆ ಹೋಗುವ ಸಂಭವವೂ ಇರುವುದಿಲ್ಲ ಅದು ಪಾಕಿಸ್ತಾನಕ್ಕೆ ಅರ್ಥವಾಗಬೇಕು ಅದಾಗುವ ಲಕ್ಷಣಗಳೂ ಇಲ್ಲ. ಬಾಂಗ್ಲಾದೇಶದಲ್ಲಿ ಉಂಟಾದ  ಸಾವು ನೋವು  ಎಂದಿಗಾದರೂ ಖಂಡನೀಯವೇ ಆದರೆ ಶೇಕ ಹಸೀನಾ ಕೈಯಲ್ಲಿ ಬಾಂಗ್ಲಾದ ಚುಕ್ಕಾಣಿ  ಇದ್ದಷ್ಟು ದಿನ  ಬಾಂಗ್ಲಾ ಮತ್ತೊಂದು ಪಾಕಿಸ್ತಾನ ಅದೀತೆಂಬ ಆತಂಕ ಭಾರತಕ್ಕಿರುವುದಿಲ್ಲ, ಹಾಗಾಗ ಬೇಕೆಂದರೆ ಬಾಂಗ್ಲಾ ಮತ್ತೆ ಸಹಜ ಸ್ಥಿತಿಗೆ ಮರಳಬೇಕು ಬಾಂಗ್ಲಾದ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಮೀಸಲನ್ನು ತೆಗೆದು ಹಾಕಲು ಆದೇಶಿಸಿದೆ, ಬೆಳವಣಿಗೆಯೊಂದಿಗೆ  ಬಾಂಗ್ಲಾದಲ್ಲಿ ಮತ್ತೆ ಶಾಂತಿ ನೆಲೆ ನಿಲ್ಲುವ ಸೂಚನೆಗಳು ಕಾಣುತ್ತಿವೆ. ಶೇಕ್ ಹಸೀನಾ ಹಾಗು ಅವಾಮಿ ಲೀಗ್  ಅಹಂಕಾರ ಮರೆತು ಆತ್ಮಾವಲೋಕನ ಮಾಡಿ ಕೊಳ್ಳಲಿ, ವಿರೋಧ ಪಕ್ಷಗಳ ವಿಮರ್ಶೆಗೆ ಕಿವಿಯಾಗಿ ತನ್ನ ತಪ್ಪನು ತಿದ್ದಿಕೊಳ್ಳಲಿ. ಆಗಲಾದರೂ ಅಲ್ಲಿನ ಯುವ ಪೀಳಿಗೆ  ಶೇಕ್ ಹಸೀನಾ ಹಾಗು ಅವಾಮಿ ಲೀಗ್ ಪಕ್ಷವನ್ನು ಕ್ಷಮಿಸಲಾಗದಿದ್ದರು ಕ್ಷಮಿಸುವ ಆಲೋಚನೆ ಮಾಡೀತು.

 


ಕಾರ್ತಿಕ್ ಎಸ್ ಬಾಪಟ್.

 

 


No comments:

Post a Comment