ಸಾಂಸ್ ಶಾಶ್ವತ (ಸಾ
-ನ -ನ -ನ -ನಮ್),
ಧ್ಯಾನ್ ಗುಂಜನ್ (ತಾ
-ನ -ನಂ -ದಃ-ನನ್)
ಉತರೇ
ಮುಜೆ ಮೇ
ಆದಿಯೋಗಿ,
ಉತರೇ
ಮುಜೆ ಮೇ
ಆದಿಯೋಗಿ,
ಆದಿಯೋಗಿ,ಆದಿಯೋಗಿ,ಆದಿಯೋಗಿ,ಆದಿಯೋಗಿ,ಆದಿಯೋಗಿ,ಆದಿಯೋಗಿ,ಆದಿಯೋಗಿ,
ಹೀಗೆ
ಕೈಲಾಶ್ ಖೇರ್ ಆದಿ ಯೋಗಿಯ ಹಾಡಿಗೆ ಧನಿಯಾದಾಗ ಇಡೀ ಕೊಯಂಬತೂರಿನ ಕಣಕಣದಲ್ಲೂ ಆದಿಯೋಗಿ,ಆದಿಯೋಗಿ ಎಂಬ ಝೇಂಕಾರ ಕೇಳಿಸುತಿತ್ತು, ಈ ಆದಿ ಯೋಗಿಯ
ಪುತ್ತಳಿಯ ಹಿಂದಿರುವ ಶಕ್ತಿ ಸದ್ಗುರು ಜಗ್ಗಿ ವಾಸುದೇವ್, ಪ್ರಪಂಚದಲ್ಲಿ ಅತಿ
ದೊಡ್ಡದಾದ ಮುಖವನ್ನು ಹೊಂದಿರುವಂತಹ ಪುತ್ತಳಿ ಎಂದು ಖ್ಯಾತಿಗೆ ಒಳಗಾಗಿರ ತಕ್ಕ್ಷತಂತಹ ಆದಿ ಯೋಗಿಯ ಪುತ್ತಳಿಯ ಎತ್ತರ ೧೧೨ ಅಡಿ, ೧೧೨ರ ಪ್ರತೀಕ ವೇನೆಂದರೆ ಮಾನವನಿಗಿರುವ ಮುಕ್ತಿ ಸಾಧನೆಯ ಮಾರ್ಗ, ಸದ್ಗುರು ಅವರೇ ಹೇಳುವಂತೆ ಈ ಉಕ್ಕಿನ
ಪುತ್ತಳಿಯನ್ನು ನಿರ್ಮಿಸಲು ಸರಿ ಸುಮಾರು ಮೂರು ವರ್ಷ ಮೂರು ತಿಂಗಳು ಬೇಕಾಯಿತು, ಇದರಲ್ಲಿ ವಿನ್ಯಾಸವೇ ಎರಡೂವರೆ ವರ್ಷಗಳ ಕಾಲ ಸಮಯವನ್ನ ತೆಗೆದುಕೊಂಡಿತು, ಆದರೆ ಉಳಿದ ಎಂಟು ತಿಂಗಳಲ್ಲಿ ಈ ಆದಿ ಯೋಗಿಯ
ಪುತ್ತಳಿ ಸಿದ್ಧವಾಗಿದೆ.
೨೪-೨-೨೦೧೭ ರಂದು
ನಡೆದ ಮಹಾ ಶಿವರಾತ್ರಿಯ ಆಚರಣೆಯಂದು ಈ ಆದಿ ಯೋಗಿಯ
ಪುತ್ತಳಿಯನ್ನು ಲೋಕಾರ್ಪಣೆ ಮಾಡಲಾಯಿತು. ನಮ್ಮ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮೊದಲಿನಿಂದಲೂ ಯೋಗಕ್ಕೆ ಹೆಚ್ಚು ಆದ್ಯತೆ ಕೊಡುತ್ತಾ ಬಂದಿದ್ದರಿಂದ, ಅವರ ಮೂಲಕ ಆದಿಯೋಗಿಯ ಪುತ್ತಳಿಯ ಲೋಕಾರ್ಪಣೆ ಹೆಚ್ಚು ಅರ್ಥಗರ್ಭಿತವಾಗಿತ್ತು
ಸಾಮಾನ್ಯವಾಗಿ
ಎಲ್ಲಾ ಖಾವಿಧಾರಿತರನ್ನು ಪೂರ್ವಾಪರ ನೋಡದೆ ಅಥವಾ ಪರಾಮರ್ಶಿಸದೆ ಒಪ್ಪಿಕೊಳ್ಲಲು ನನ್ನ ಒಳ ಮನಸ್ಸು ಒಪ್ಪಿಕೊಳ್ಳುವುದಿಲ್ಲ,
ಹೇಗೆ ಎಲ್ಲಾ ಖಾದಿ ಮತ್ತು ಖಾವಿವಂತರು ಸಂಭಾಳಿತರಲ್ಲವೋ ಹಾಗೆಯೆ ಅವರಲ್ಲಿ ಕೆಲವರು ಸಂಭಾಳಿತಾರೂ, ಲೋಖದೆಡೆಗೆ ಅಪಾರ ಪ್ರೀತಿಯನ್ನಿಟ್ಟುಕೊಂಡು ದೇವತಾಕೈಂಕರ್ಯವನ್ನು ಮಾಡುತ್ತಾ ಸಮಾಜದ ಆಗು ಹೋಗುಗಳಿಗೆ ಹಿಂದಿನಿಂದಲೂ ಸ್ಪಂದಿಸಿದ್ದಾರೆ ಮತ್ತು ಸ್ಪಂದಿಸುತ್ತಿದ್ದಾರೆ, ಆದ್ದರಿಂದ ಸದ್ಗುರುಗಳ ಬಗ್ಗೆಯೂ ಕೂಡ ನೋಡಿದಾಕ್ಷಣ ಒಪ್ಪಿಕೊಳ್ಳುವ ಮನೋಭಾವನೆ ಇಲ್ಲದೆ ಅವರ ನಡೆ, ನುಡಿ, ಆಚಾರ, ವಿಚಾರ ಗಳನ್ನೂ
ಬೆಂಬೆತ್ತಿದಾಗ ನನಗೆ ಅನಿಸಿದ್ದು ಈ ಸದ್ಗುರುಗಳು ಇತರೆ
ಸದ್ಗುರುಗಳಂತೆ ಅಲ್ಲಎಂಬುದು. ಏಕೆಂದರೆ ನೀವು ಸದ್ಗುರು ಜಗ್ಗಿ ವಾಸುದೇವ್ ಅವರನ್ನು "ಗಾಲ್ಫ್" ಆಟದಲ್ಲಿ ಕಾಣಬಹುದು, "ಬೈಕ್" ಓಡಿಸುವಾಗ ಕಾಣಬಹುದು , ಹೀಗೆ ನೋಡಿದಾಗ ನನಗೆ ಅನಿಸುದ್ದು ಆಧುನಿಕ ಜಗತ್ತಿಗೆ ಸಿಕ್ಕಿರುವ ಸಮಕಾಲೀನ ಸದ್ಗುರುಗಳೇನೋ ? ಅಂದರೆ "The Most
contemporary ಸದ್ಗುರು”.
Creating a temple of wellness ಎಂಬ
ಪರಿಕಲ್ಪನೆಯೇ ಅತೀ ಉನ್ನತ ಕಲ್ಪನೆ, ಸದ್ಗುರು ವಾಸುದೇವ್ ಜಗ್ಗಿ ಅವರ ದ್ಯೇಯವು ಅದೇ ಭಾರತದ ನಾಲ್ಕು ದಿಕ್ಕುಗಳಲ್ಲಿ ಆದಿಯೋಗಿಯ ಪುತ್ತಳಿ ಅನಾವರಣ ಗೊಳ್ಳಬೇಕು, ಆ ನಾಲ್ಕು ದಿಕ್ಕಿನೆಡೆಗೆ
ಜನ ಬಂದಾಗ ಅಲ್ಲಿ ಕುಳಿತು ಮೂರು ನಿಮಿಷ , ನಾಲ್ಕು ನಿಮಿಷ ಹೀಗೆ ಯೋಗವನ್ನು ಕಲಿತರೆ ಅದು ಆದಿ ಯೋಗಿಯ ಪುತ್ತಳಿ ನಿರ್ಮಿಸಿದ್ದಕ್ಕೂ ಸಾರ್ಥಕತೆ ಬಂದೊದಗುತ್ತದೆ ಎಂಬುದು ಅವರ ಆಶಯ. ಈ ನಿಟ್ಟಿನಲ್ಲಿ ದಕ್ಷಿಣದಲ್ಲಿ
ಪುತ್ತಳಿಯ ಲೋಕಾರ್ಪಣೆಯಾಗಿದೆ ಇನ್ನು ಮೂರು ದಿಕ್ಕಿನಲ್ಲಿ ಆಗಬೇಕು.
ಈ
ಆದಿಯೋಗಿಯ ಲೋಕಾರ್ಪಣೆಗಯ್ಯುವ ಎರಡು ಮೂರು ದಿನಗಳ ಮುಂಚೆ ನನ್ನ ಮೊಬೈಲ್(ಜಂಗಮ ವನಿಗೆ) ಒಂದು ಸಂದರ್ಶನದ ತುಣುಕನ್ನು ಯಾರೋ ಒಬ್ಬ ಮಹಾನುಭಾವರು ಕಳಿಸಿದ್ದರು. ಅದುಸದ್ಗುರು ವಾಸುದೇವ ಅವರ ಸಂದರ್ಶನ, ಸಂದರ್ಶನದಲ್ಲಿ -ನಿರೂಪಕ ಸೂರ್ಯ ಸಮಸ್ಕಾರವನ್ನು ಹೇಗೆ ಎಲ್ಲರು ಒಪ್ಪಿಕೊಳ್ಳುವುದು ಅದು ಒಂದು ವರ್ಗಕ್ಕೆ ಸೇರಿದ ಕ್ರಿಯೆ ಅಲ್ಲವೇ ಎಂದಾಗ ಆಗ ಸದ್ಗುರು ಉತ್ತರ-
ಸೂರ್ಯ ನಮಸ್ಕಾರ ಇದು ನಮಗೆ ಶಕ್ಕ್ತಿ ತುಂಬುವ ಸೌರಶಕ್ತಿಗೆಯನ್ನು ನಮ್ಮಲ್ಲಿ ಪಡೆದುಕೊಳ್ಳುವುದು ಎಂದರ್ಥ, ಆಗ ಆತ ಮತ್ತೆ
ಹಾಗಾದರೆ ಸೂರ್ಯ ನಮಸ್ಕಾರ ಸಂದರ್ಭದಲ್ಲಿ ಮಂತ್ರ ಉಚ್ಚಾರಣೆ ಮಾಡುವುದಿಲ್ಲವೇ ಅಂದಾಗ ಅವರ ಉತ್ತರ ನೀವು ಮಂತ್ರವನ್ನು ಉಚ್ಚರಿಸದೆ ಹಾಗೆ ಮಾಡಿ. ಹೀಗೆ ಸಾಗುತ್ತ ಸಾಗುತ್ತ ಒಂದು ಅಂಶವನ್ನು ಗಮನಿಸಿದೆ ನಾನು ಇಲ್ಲಿ ಉಪಹಾರವನ್ನು ಸೇವಿಸುತ್ತಿದಾಗ ಮತ್ತೆ ಏನೋ ಮಂತ್ರ ಪಠಣ ಮಾಡಿದ ಹಾಗೆ ಕಂಡಿತು ಎಂದು ಆ ನಿರೂಪಕ ಕೇಳುತ್ತಾನೆ.
ಆಗ ಸದ್ಗುರು ಹೌದೇ ಏನದು ಎಂದಾಗ ಅದು
:
ॐ
सह नाववतु ।
सह
नौ भुनक्तु ।
सह
वीर्यं करवावहै ।
तेजस्वि
नावधीतमस्तु मा विद्विषावहै ।
ॐ
शान्तिः शान्तिः शान्तिः ॥.
ಅದರಲ್ಲಿ
ಎಲ್ಲಿ ತಪ್ಪಿದೆ ತೋರಿಸಿ. ದೇವರೇ ನಮ್ಮಿಬ್ಬರನ್ನು ರಕ್ಷಿಸು (ಗುರು ಮತ್ತು ಶಿಷ್ಯ) ನಮ್ಮಿಬ್ಬರನ್ನು ಪೋಷಿಸು , ನಮ್ಮಿಬ್ಬರಿಗೆ ಒಟ್ಟಿಗೆ ಕೆಲಸ ಮಾಡುವ ಶಕ್ತ್ತಿ ತುಂಬು ಮತ್ತು ಎಲ್ಲೆಡೆ ಶಾಂತಿ ಪಸರಿಸಲಿ ಎಂದು ಹೇಳುವುದು ತಪ್ಪೇ ಎಂದು ಸಂದರ್ಶಕರ ಪ್ರೆಶ್ನೆಗೆ ಮರು ಪ್ರಶ್ನೆಯನ್ನೆಸದು ಎಲ್ಲರನ್ನು ಚಕಿತಗೊಳಿಸುತ್ತಾರೆ.
ಅದೇ
ರೀತಿ ಇನ್ನೊಬ್ಬ ಸಂದರ್ಶಕಿ ಸದ್ಗುರುಗಳೇ
ದೇವರೇ ಇಲ್ಲಯಂಬ ಒಂದು ಅಂಶವನ್ನೇ ಇಟ್ಟುಕೊಂಡರೆ ನಮಗೇಕೆ ಸದ್ಗುರು ಬೇಕೇ
ಎಂದು ಕೇಳುತ್ತಾಳೆ. ಆಗ ಸದ್ಗುರು
ಜಗ್ಗಿ ಕ್ಲಿಷ್ಟ ಪ್ರಶ್ನೆಯನ್ನು ಅತ್ಯಂತ ಹಾಸ್ಯಾತ್ಮಕವಾಗಿ ಉತ್ತರಿಸುತ್ತಾರೆ. -> ನೀವು ಕಾರನ್ನು ಡ್ರೈವ್ ಮಾಡುತ್ತೀರಲ್ಲವೇ , ಹಾಗಾದರೆ GPRS (ಮೊಬೈಲ್ app ) ಅನ್ನು ಉಪಯೋಗಿಸುತ್ತಿರಲ್ಲವೇ , ಹಾಗು ಆದರಲ್ಲೂ ನೀವು ನಿಮಗೆ ಗೊತ್ತಿಲ್ಲದ ಪ್ರದೇಶದಲ್ಲಿ ಗಾದಿಯನ್ನು ಓಡಿಸುವಾಗ , ಒಂದು ಹೆಂಗಸು ನಿಮಗೆ right ತೊಗೊಳ್ಳಿ
left ತೊಗೊಳ್ಳಿ
ಎಂದು ಹೇಳಿತ್ತಾಳೆ , ಏಕೆಂದರೆ ನಿಮಗೆ ಗೊತ್ತಿಲ್ಲದ
ಪ್ರದೇಶದಲ್ಲಿ
("It is advisable to take instruction ") ಅಂದರೆ ನೀವು
ಸೂಚನೆ ತೆಗೆದುಕೊಳ್ಳುವುದು ನಿಮಗೆ ಶ್ರೇಯಸ್ಸು ಎಂದು
ಉತ್ತರಿಸುವ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಾರೆ , ಇಷ್ಟಕ್ಕೂ ಸುಮ್ಮನಾಗದ ಸಂದರ್ಶಕಿ ಹಾಗಾದರೆ ಗುರುಗಳು ಆಧುನಿಕ "ಜಿಪಿಎಸ್" ಎನ್ನುತ್ತೀರಾ ಎಂದು ಕೇಳಿದಾಗ ಸದ್ಗುರು ಇರಬಹುದು "Guru Positioning System " ಎಂದು ನಗುತ್ತ ಹೇಳುತ್ತಾರೆ.
ಇಂತಹ
ಯೋಗದ ಪಸರಿಸಿಕೆ ಮತ್ತು ಪುನರುತ್ಥಾನವನ್ನು ನೋಡಿದಾಗ
ಮಾಸ್ಮುಲ್ಲೆರ್ (MaxMuller) ಮತ್ತು
ಸಿಸ್ಟೆರ್ ನಿವೇದಿತಾ ಹೇಳಿದ ಮಾತು ನೆನಪಿಗೆ ಬರುತ್ತದೆ “ಭಾರತ
ಸತ್ತರೆ ಇಡೀ ಜಗತ್ತೇ ಸತ್ತಂತೆ.” (If India is
dead world is dead much before). ಅಂದರೆ
ಇನ್ನೇನು ಭಾರತೀಯ ಸಂಸ್ಕೃತಿ ನಶಿಸಿ ಹೋಗುತ್ತದೆ ಎಂದು ಎಲ್ಲರು ಬೊಬ್ಬೆ ಹೊಡೆಯುವಾಗ
ಎಲ್ಲೆಡೆ ಯೋಗದ ಬಗ್ಗೆ ಅರಿವು ಮೂಡುವ ಕಾರ್ಯ ಪ್ರಾರಂಭವಾಗುತ್ತದೆ ಮತ್ತು ಇಂಥಹುದೇ ಹಲವು ವಿಸ್ಮಯದ ಸಂಗತಿಗಳಿಗೆ ಭರತಖಂಡ ವೇದಿಕೆಯಾಗುತ್ತ ಹೋಗುತ್ತದೆ.
ಕಾರ್ತಿಕ್
ಎಸ್ ಬಾಪಟ್
No comments:
Post a Comment